ಪೋಸ್ಟ್‌ಗಳು

ಮೇ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕರ್ನಾಟಕ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಘ (KASMN) ಅಸ್ತಿತ್ವಕ್ಕೆ ರಾಜ್ಯಾಧ್ಯಕ್ಷರಾಗಿ ಷಡಾಕ್ಷರಪ್ಪ ಜಿ.ಆರ್., ಉಪಾಧ್ಯಕ್ಷರಾಗಿ ಕೃಷ್ಣಮೂರ್ತಿ ಹೆಬ್ಬಾರ್ ಆಯ್ಕೆ

ಇಮೇಜ್
  ಬೆಂಗಳೂರು, ಮೇ 30: ರಾಜ್ಯದ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು, ಯೂಟ್ಯೂಬ್ ಚಾನೆಲ್‌ಗಳು ಹಾಗೂ ಆನ್‌ಲೈನ್ ಮಾಧ್ಯಮಗಳ ಸಂಪಾದಕರು ಮತ್ತು ಪ್ರಕಾಶಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ “ಕರ್ನಾಟಕ ಅಸೋಷಿಯೇಷನ್ ಆಫ್ ಸ್ಮಾಲ್ ಅಂಡ್ ಮೀಡಿಯಂ ನ್ಯೂಸ್ ಪೇಪರ್ಸ್” (KASMN) ಎಂಬ ನೂತನ ಸಂಘ ಅಸ್ತಿತ್ವಕ್ಕೆ ಬಂದಿದೆ. ಬೆಂಗಳೂರು ಜಯನಗರದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗದ ಸುದ್ದಿಸಾರ ದಿನಪತ್ರಿಕೆಯ ಪ್ರಕಾಶಕ ಷಡಾಕ್ಷರಪ್ಪ ಜಿ.ಆರ್. ಅವರನ್ನು ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹೊನ್ನಾವರದ ನಾಗರೀಕ ಪತ್ರಿಕೆಯ ಸಂಪಾದಕ-ಪ್ರಕಾಶಕ ಕೃಷ್ಣಮೂರ್ತಿ ಹೆಬ್ಬಾರ್ ಉಪಾಧ್ಯಕ್ಷರಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಜಾಕಾಲ ಪತ್ರಿಕೆಯ ಸಂಪಾದಕ-ಪ್ರಕಾಶಕ ಪುರುಷೋತ್ತಮ ಕೆ. ಕಾರ್ಯದರ್ಶಿಯಾಗಿ, ಐನಿ ಟಿವಿ ಯೂಟ್ಯೂಬ್ ಚಾನೆಲ್‌ನ ಸಂಪಾದಕಿ ಭಾರತಿ ರವಿ ಕುಮಾರ್ ಜಂಟಿ ಕಾರ್ಯದರ್ಶಿಯಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸ್ಪೆಷಲ್ ನ್ಯೂಸ್ ಪತ್ರಿಕೆಯ ಸಂಪಾದಕ-ಪ್ರಕಾಶಕ ಬಾವ ಪದರಂಗಿ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ ಹತ್ತು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಪತ್ರಿಕೆಗಳ ಸಂಪಾದಕರು ಮತ್ತು ಪ್ರಕಾಶಕರು ನಿರ್ದೇಶಕರಾಗಿ ಸ್ಥಾನ ಪಡೆದಿದ್ದಾರೆ. ಸಂಘದ ಕೇಂದ್ರ ಕಚೇರಿ ಬೆಂಗಳೂರು ಜಯನಗರದಲ್ಲಿ ಕಾರ್ಯನಿರ್ವಹಿಸಲಿದ್ದು, ರಾಜ್ಯದ ...

ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತ ಮಹಾದಾಳಿ

ಇಮೇಜ್
  ಶಿವಮೊಗ್ಗ, ಮೇ 30: ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲೇ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಂಗ್ರಹ ಅಡ್ಡೆಗಳ ವಿರುದ್ಧ ಅತಿ ದೊಡ್ಡ ಮಟ್ಟದ ಲೋಕಾಯುಕ್ತ ಕಾರ್ಯಾಚರಣೆ ನಡೆದಿರುವ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗ ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಹಲವು ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳ ತಂಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಅಕ್ರಮ ಮರಳು ಚಟುವಟಿಕೆಗಳನ್ನು ಪತ್ತೆಹಚ್ಚಿದೆ. ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕುಗಳ ವ್ಯಾಪ್ತಿಯ 25ಕ್ಕೂ ಹೆಚ್ಚು ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ. ತುಂಗಾ, ಭದ್ರಾ ಹಾಗೂ ಶರಾವತಿ ನದಿ ತೀರದ ಹಲವು ಪ್ರದೇಶಗಳಲ್ಲಿ ಅಕ್ರಮ ಮರಳು ಸಂಗ್ರಹ ಮತ್ತು ಸಾಗಣೆ ನಡೆಯುತ್ತಿರುವ ಬಗ್ಗೆ ಬಂದಿದ್ದ ದೂರುಗಳ ಆಧಾರದ ಮೇಲೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಭದ್ರಾವತಿ ತಾಲೂಕಿನ ಸನ್ಯಾಸಿಕೋಡ, ಮಗ್ಗಿ, ನಿಂಬೆಗೊಂದಿ, ಮಂಗೋಟೆ, ಶಿವಮೊಗ್ಗ ತಾಲೂಕಿನ ಕೂಡಲಿ ಹಾಗೂ ಹಾಡೋನಹಳ್ಳಿ, ತೀರ್ಥಹಳ್ಳಿ ತಾಲೂಕಿನ ಮುಂಡಳ್ಳಿ, ತೂದೂರು, ದಬ್ಬಣಗದ್ದೆ, ಹೊಸನಗರ ತಾಲೂಕಿನ ಸುತ್ತಾ, ಹರಿದ್ರಾವತಿ, ಸಂಪೆಕಟ್ಟೆ ಮತ್ತು ಸಾಗರ ತಾಲೂಕಿನ ಆವಿನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಜೆಸಿಬಿ, ಟ್ರ್ಯಾಕ್ಟರ್, ಲಾರಿ ಸೇರಿದಂತೆ 50ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ...

ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆಗೆ : ಬೃಹತ್ ಪ್ರತಿಭಟನಾ ಜಾಥ

ಇಮೇಜ್
 ಶಿವಮೊಗ್ಗ, ಮೇ 30 : ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆಗೆ ಆಗ್ರಹಿಸಿ ಜರುಗಿದ ಬೃಹತ್ ಪ್ರತಿಭಟನಾ ಜಾಥ, ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ,ಸಂಸ್ಥೆಯ ಕಾನೂನು ಮಾರ್ಗದರ್ಶಕರಾದ ಗೀತಾ ಮಾನೆ ನೇತೃತ್ವದಲ್ಲಿ ಭಾಗಿ.      ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆಗೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘವು ವಿವಿಧ ಸಂಘ -ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಜಾಥದಲ್ಲಿ 'ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ' ಸಂಸ್ಥೆಯು ಪಾಲ್ಗೊಂಡು, ಬೆಂಬಲಿಸಿ    ಸಂಸ್ಥೆಯ ಕಾನೂನು ಮಾರ್ಗದರ್ಶಕರಾದ ಗೀತಾ ಮಾನೆ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ, ಮುಖ್ಯ ನ್ಯಾಯಾದೀಶರಿಗೆ ಹಾಗೂ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿತು.   ಮನವಿಯಲ್ಲಿ ಪ್ರಸ್ತಾಪಿಸಿಸದಂತೆ ಶಿವಮೊಗ್ಗ ಜಿಲ್ಲೆಯು ಮಧ್ಯ ಕರ್ನಾಟಕದ ಭಾಗವಾಗಿದ್ದು, ಇಲ್ಲಿನ ನಾಗರೀಕ ನ್ಯಾಯಕ್ಕಾಗಿ, ಹಿತಕ್ಕಾಗಿ ಹಾಗೂ  ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆಗೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದಿಂದ ನಡೆಸುತ್ತಿರುವ ಹೋರಾಟಕ್ಕೆ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ? ಬೆಂಬಲಿಸಿದೆ ಎಂದಿದೆ.   ಶಿವಮೊಗ್ಗ ಸೇರಿದಂತೆ ವಿಭಾಗೀಯ ಮಟ್ಟದಲ್ಲಿ ಹಾಗೂ ಮಧ್ಯ ಕರ್ನಾಟಕದ ಭಾಗವಾಗಿರುವ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗಳ  ನಾಗರೀಕರ...

ಡಾ. ಕೆ.ಎಚ್. ಮುನಿಯಪ್ಪ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸುವಂತೆ ಶಿವಮೊಗ್ಗ ಮದಿಗ ಮಹಾಸಭಾ ಆಗ್ರಹ

ಇಮೇಜ್
ಶಿವಮೊಗ್ಗ, ಮೇ 30: ಕರ್ನಾಟಕ ಮದಿಗ ಮಹಾಸಭಾ ಜಿಲ್ಲಾ ಸಮಿತಿ ಶಿವಮೊಗ್ಗ ವತಿಯಿಂದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಡಾ. ಕೆ.ಎಚ್. ಮುನಿಯಪ್ಪ ಅವರನ್ನು ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ನೇಮಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ. ಮನವಿಯಲ್ಲಿ, ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಡಾ. ಮುನಿಯಪ್ಪ ಅವರು ದಲಿತ ಸಮುದಾಯದ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ ಹಾಗೂ ಕಾಂಗ್ರೆಸ್ ಪಕ್ಷದ ಸಂಘಟನೆ ಬಲವರ್ಧನೆಗೆ ಹಲವು ದಶಕಗಳಿಂದ ಸೇವೆ ಸಲ್ಲಿಸಿರುವುದನ್ನು ಉಲ್ಲೇಖಿಸಲಾಗಿದೆ. ರಾಜ್ಯದ ಅತಿದೊಡ್ಡ ದಲಿತ ಸಮುದಾಯವಾದ ಮಡಿಗ ಸಮುದಾಯಕ್ಕೆ ಇದುವರೆಗೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹುದ್ದೆ ದೊರೆತಿಲ್ಲ. ಹೀಗಾಗಿ ಸಾಮಾಜಿಕ ನ್ಯಾಯದ ಆಶಯವನ್ನು ಬಲಪಡಿಸುವ ನಿಟ್ಟಿನಲ್ಲಿ ಡಾ. ಕೆ.ಎಚ್. ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದು ಕಾಲದ ಅಗತ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದರಿಂದ ದಲಿತರು, ಹಿಂದುಳಿದ ವರ್ಗಗಳು ಹಾಗೂ ಶೋಷಿತ ಸಮುದಾಯಗಳ ವಿಶ್ವಾಸ ಕಾಂಗ್ರೆಸ್ ಪಕ್ಷದ ಮೇಲೆ ಮತ್ತಷ್ಟು ಗಟ್ಟಿಯಾಗಲಿದ್ದು, ರಾಜ್ಯ ರಾಜಕಾರಣದಲ್ಲಿ ಪಕ್ಷದ ಬಲವೂ ಹೆಚ್ಚಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಈ ಮನವಿಗೆ ಕರ್ನಾಟಕ ಮದಿಗ ಮಹಾಸಭಾ ಜಿಲ್ಲಾ ಸಮಿತಿಯ ಅಧ್ಯಕ್ಷರು ಸೇರಿದಂತೆ ವಿವಿಧ ಜಿಲ್ಲಾ ಘಟಕಗಳ ಪದಾಧಿ...

ಅನ್ನರಾಮಯ್ಯ

ಇಮೇಜ್
  ಅನ್ನರಾಮಯ್ಯ ಎಂದೆ ಬಡ ಜನರು ಕರೆಯಲ್ಪಡುವ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ   ವೈಚಾರಿಕ ರಾಜಕರಣದ ಪ್ರತಿರೂಪವಾದ  ಸಿದ್ದರಾಮಯ್ಯ  70 -80 ರ ದಶಕದಲ್ಲಿ   ಬೆಳೆದ  ಸಮಾಜವಾದಿ ಸೈದ್ದಾಂತಿಕ ನಿಲುವು ಹೊಂದಿದ್ದ  ಎರಡನೇ ತಲೆಮಾರಿನ  ಕೊನೆಯ ಕೊಂಡಿ.      ಸಮಾಜವಾದಿಗಳ ಪ್ರಭಾವದಿಂದ ರೈತ ಚಳುವಳಿ ಮತ್ತು    ಜನತ ಪರಿವಾರದಲ್ಲಿ ಬೆಳೆದ ಸಿದ್ದರಾಮಯ್ಯ ಮೂಲ ಕಾಂಗ್ರೆಸ್ ಪಾರ್ಟಿಯವರಾಗಿರದೆ   ಕಾಂಗ್ರೆಸ್ ನಡೆಯನ್ನು  ವಿರೋಧಿಸಿಕೊಂಡು ಬಂದಿದ್ದರು.        ಕೆಲವು ಬದಲಾದ ರಾಜಕೀಯ ಬೆಳವಣಿಗೆಯಲ್ಲಿ   ಅಹಿಂದ ನಾಯಕರಾಗಿ ಹೊರಹೊಮ್ಮಿ   ದೇವೆಗೌಡರಂತವರಿಗೆ  ಸೆಡ್ಡು ಹೊಡೆದು ನಿಂತು  ಗಟ್ಟಿ ಧ್ವನಿಯಲ್ಲೆ  ಅವರನ್ನು  ಎದುರಿಸಿ   ಅಸ್ಥಿತ್ವ   ಗಟ್ಟಿಕೊಳ್ಳಿಸಿಕೊಂಡ ಸಮಯದಲ್ಲಿ   ಕಾಂಗ್ರೆಸ್   ಸಿದ್ದರಾಮಯ್ಯನವರನ್ನು  ಪಕ್ಷಕ್ಕೆ  ಸೇರಿಸಿಕೊಂಡಿತು.         ಕೆಲವು ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ  ಪಕ್ಷಕ್ಕೆ  ಬಂದಿದ್ದನ್ನು  ವಿರೋಧಿಸಿದ್ದರು ಆದರೆ  ಕಾಂಗ್ರೆಸ್ ಹೈ ಕಮಾಂಡ್  ಸಿದ್ದರಾಮಯ್ಯ  ಶಕ್ತಿಯನ್ನು  ತಿಳಿದಿತ...

ಮಂಗಳೂರಿಗೆ ಸಮಗ್ರ ಒಳಚರಂಡಿ ಯೋಜನೆ ಅತ್ಯಗತ್ಯ : ಟಿ. ರಘುಮೂರ್ತಿ

ಇಮೇಜ್
ಮಂಗಳೂರು : ಕರಾವಳಿ ನಗರ ಮಂಗಳೂರಿನ ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸಮಗ್ರ ಒಳಚರಂಡಿ ವ್ಯವಸ್ಥೆ ಅತ್ಯಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ತಿಳಿಸಿದ್ದಾರೆ. ವಿಧಾನಮಂಡಲ ಸಾರ್ವಜನಿಕ ಉದ್ಯಮಗಳ ಸಮಿತಿಯ ಸದಸ್ಯರೊಂದಿಗೆ ಮಂಗಳೂರಿನ ರಾಜಕಾಲುವೆಗಳು, ನದಿಗಳು ಹಾಗೂ ಒಳಚರಂಡಿ ತ್ಯಾಜ್ಯ ಹರಿಯುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ನಗರದಲ್ಲಿ ಹಲವೆಡೆ ಶುದ್ಧೀಕರಣವಿಲ್ಲದ ಒಳಚರಂಡಿ ನೀರು ನೇರವಾಗಿ ನದಿಗಳು ಮತ್ತು ಕಾಲುವೆಗಳಿಗೆ ಸೇರುತ್ತಿರುವುದು ಗಂಭೀರ ಪರಿಸ್ಥಿತಿಯನ್ನು ಉಂಟುಮಾಡಿದೆ. ಮಂಗಳೂರಿನ ವೇಗವಾದ ನಗರೀಕರಣ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ₹1250 ಕೋಟಿ ವೆಚ್ಚದ ಸಮಗ್ರ ಒಳಚರಂಡಿ ಯೋಜನೆ ಜಾರಿಗೊಳಿಸುವ ಅಗತ್ಯವಿದೆ ಎಂದು ಹೇಳಿದರು. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಡಳಿತ ಸರ್ಕಾರಕ್ಕೆ ಈಗಾಗಲೇ ಸಮಗ್ರ ಯೋಜನಾ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಯೋಜನೆಗೆ ಸರ್ಕಾರದ ಅನುಮೋದನೆ ದೊರಕುವ ನಿಟ್ಟಿನಲ್ಲಿ ಸಾರ್ವಜನಿಕ ಉದ್ಯಮಗಳ ಸಮಿತಿ ವತಿಯಿಂದ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಕೈಗೊಳ್ಳಲಾದ ಒಳಚರಂಡಿ ಕಾಮಗಾರಿಗಳ ಗುಣಮಟ್ಟ, ನ್ಯೂನತೆಗಳು ಹಾಗೂ ಲೋಪದೋಷಗಳ ಬ...

ಜಾನುವಾರುಗಳಿಗೆ ಸಿಟಿ ಬಸ್ ಡಿಕ್ಕಿ - ಕರು ಸಾವು, ಹಲವು ಕರುಗಳಿಗೆ ಗಾಯ

ಇಮೇಜ್
ಶಿವಮೊಗ್ಗ, ಮೇ 25 : ಇಂದು ಬೆಳ್ಳಂಬೆಳಗ್ಗೆ ನಗರದ ಖಾಸಗಿ ಸಿಟಿ ಬಸ್'ವೊಂದು ಜಾನುವಾರುಗಳಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಒಂದು ಕರು ಜೀವಕಳೆದುಕೊಂಡು, ಇನ್ನೂ ಕೆಲವು ಕರುಗಳಿಗೆ ಗಂಭೀರ ಗಾಯಗಳಾದ ಘಟನೆ ವಿನೋಬ ನಗರದಲ್ಲಿ ನಡೆದಿದೆ. ವಿನೋಬ ನಗರದ ಸವಿ ಬೇಕರಿ ಬಳಿಯಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಡಿಕ್ಕಿ ಪರಿಣಾಮ ಒಂದು ಕರು ಸ್ಥಳದಲ್ಲೇ ನರಳಿ ನರಳಿ ಪ್ರಾಣಬಿಟ್ಟಿದೆ. ಇನ್ನು ಕೆಲವು ಕರುಗಳಿಗೆ ಗಾಯಗಾಗಿವೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ವೇಗವಾಗಿ ಚಲಿಸುತ್ತಿದ್ದ ಖಾಸಗಿ ಸಿಟಿ ಬಸ್ ರಸ್ತೆಯಲ್ಲಿ ನಿಂತಿದ್ದ ಹಸುಗಳಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಒಂದು ಸಣ್ಣ ಕರು ನರಳಿ ನರಳಿ ಸ್ಥಳದಲ್ಲೇ ಸಾವನ್ನಪ್ಪಿದೆ. ಘಟನೆಯಲ್ಲಿ ಇನ್ನೂ ಕೆಲವು ಕರುಗಳಿಗೆ ಗಂಭೀರವಾಗಿ ಗಾಯಗಳಾಗಿದ್ದು, ಒಂದು ಕರುವಿನ ಬಾಯಿಯಿಂದ ರಕ್ತಸ್ರಾವವಾಗುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ನಗರ ವ್ಯಾಪ್ತಿಯಲ್ಲಿ ಖಾಸಗಿ ಸಿಟಿ ಬಸ್ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಿಸಿದ ಪರಿಣಾಮ ಇಂತಹ ಘಟನೆ ನಡೆದಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರುವಿನ ಸಾವಿಗೆ ಹಾಗೂ ಇನ್ನೂ ಕೆಲವು ಕರುಗಳಿಗೆ ಗಾಯಗಳಾಗಲು ಕಾರಣವಾದ ಖಾಸಗಿ ಸಿಟಿ ಬಸ್ ಚಾಲಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ದೊಡ್ಡಪೇಟೆ ಪೊಲೀಸರ ಕಾರ್ಯಾಚರಣೆ ನಗರದ ಕುವೆಂಪು ರಸ್ತೆಯಲ್ಲಿರುವ ಸ್ಪಾ ಮೇಲೆ ದಾಳಿ.

ಇಮೇಜ್
  ಮೇ 25 : ಇಂದು ದೊಡ್ಡಪೇಟೆ ಪೊಲೀಸರ ಕಾರ್ಯಾಚರಣೆ ನಗರದ ಕುವೆಂಪು ರಸ್ತೆಯಲ್ಲಿರುವ ಸ್ಪಾ ಮೇಲೆ ದಾಳಿ. ಹೆಚ್ಚಿನ ಮಾಹಿತಿಯ ಉನ್ನತ ಅಧಿಕಾರಿಗಳಿಂದ ಬರಬೇಕಾಗಿದೆ ...

ಮ್ಯಾಂಗೋ ಫುಡ್ ಫೆಸ್ಟಿವಲ್ ಉದ್ಘಾಟನೆ- ಮಹಿಳಾ ಸಬಲೀಕರಣಕ್ಕೆ ವಸ್ತು ಪ್ರದರ್ಶನಗಳು ಅತ್ಯವಶ್ಯಕ- ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್

ಇಮೇಜ್
ನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ಮೂರು ದಿನಗಳ ಕಾಲ ಜೆಸಿಐ ಶಿವಮೊಗ್ಗ ಭಾವನಾ ಹಾಗೂ ಶ್ರೀ ಸಾಯಿ ಇವೆಂಟ್ಸ್ ರವರು ಆಯೋಜಿಸಿರುವ ಮ್ಯಾಂಗೋ ಫುಡ್ ಫೆಸ್ಟಿವಲ್ ಮತ್ತು ಜೀವನಶೈಲಿ ವಸ್ತು ಪ್ರದರ್ಶನವನ್ನು ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ರವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವಸ್ತುಪ್ರದರ್ಶನಗಳಿಂದ ಮಹಿಳೆಯರ ಸಬಲೀಕರಣ ಉನ್ನತಿ ಕಾಣುವುದರೊಂದಿಗೆ ಮಹಿಳೆಯರು ಸಕ್ರಿಯವಾಗಿ ಇಂತಹ ವಸ್ತು ಪ್ರದರ್ಶನ ಮತ್ತು ಫೆಸ್ಟಿವಲ್ ಗಳಲ್ಲಿ ಪಾಲ್ಗೊಳ್ಳುವುದರಿಂದ ಸದೃಢತೆ ಹೆಚ್ಚಾಗಿ ಯಶಸ್ಸಿನ ಸಾಧನೆ ಮಾಡಲು ಅನುಕೂಲಕರವಾಗಿದೆ. ಮೂರು ದಿನಗಳ ಕಾಲ  ಆಯೋಜಿಸಿರುವ ಮ್ಯಾಂಗೋ ಫುಡ್ ಫೆಸ್ಟಿವಲ್ ನಲ್ಲಿ ರುಚಿಕರವಾದ ಖಾದ್ಯಗಳು ,ತಿಂಡಿ ತಿನಿಸುಗಳು ಮನೆಯಿಂದಲೇ ಗೃಹಿಣಿಯರು ತಯಾರು ಮಾಡಿದ ಆಹಾರ ಪದಾರ್ಥಗಳನ್ನು ಶಿವಮೊಗ್ಗ ನಗರದ ನಾಗರಿಕ ಬಂಧುಗಳು ಸವಿದು, ಗೃಹ ಉಪಯೋಗಿ ವಸ್ತುಗಳು, ಸಿದ್ಧ ಉಡುಪುಗಳು, ವಿಶೇಷ ಕಲಾಕೃತಿಗಳ ವಸ್ತು ಪ್ರದರ್ಶನ ಮತ್ತು ಮಾರಾಟದಲ್ಲಿ ಪಾಲ್ಗೊಂಡು ಮಹಿಳೆಯರ ಸ್ವಾವಲಂಬಿ ಬದುಕಿಗೆ ಬೆಂಬಲಿಸಬೇಕು ಎಂದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಜೆಸಿಐ ಸಂಸ್ಥೆಯ  ಗೌರೀಶ್ ಭಾರ್ಗವ್,  ಜೆಸಿಐ ಶಿವಮೊಗ್ಗ ಭಾವನಾ ಅಧ್ಯಕ್ಷರಾದ  ಕರಿಬಸಮ್ಮ ಆನಂದ್, ಶ್ರೀ ಸಾಯಿ ಇವೆಂಟ್ಸ್ನ ಸೋಮೇಶ್, ರಾಜೇಶ್ವರಿ, ರುದ್ರೇಶ್, ಪ್ರಮುಖರಾದ ಗಣೇಶ್ ಪೈ, ಸುಶೀಲ ಷಣ್ಮುಗಂ ಹಾಗೂ ಇತರರು ಉಪಸ್ಥಿತಿ ಇದ್ದ...

ಡೆಂಗ್ಯೂ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ: ಡಾ. ಗುಡದಪ್ಪ ಕಸಬಿ

ಇಮೇಜ್
ಶಿವಮೊಗ್ಗ: ಡೆಂಗ್ಯೂ ಸೇರಿದಂತೆ ಕೀಟಜನ್ಯ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರ ಜಾಗೃತಿ ಹಾಗೂ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ ಹೇಳಿದರು. ನಗರದ ವಿನೋಬನಗರದ ಹಳೆ ಜೈಲು ಆವರಣದಲ್ಲಿರುವ ವಿಶೇಷ ಪೊಲೀಸ್ ಭದ್ರತಾ ಪಡೆ–ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಆವರಣದಲ್ಲಿ ಜಿಲ್ಲಾ ಆಡಳಿತ ಹಾಗೂ ಜಿ.ಪಂ. ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಡೆಂಗ್ಯೂ ಜಾಗೃತಿ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಡೆಂಗ್ಯೂ, ಮಲೇರಿಯಾ, ಚಿಕುನ್‌ಗುನ್ಯಾ, ಜೀಕಾ ಹಾಗೂ ಆನೆಕಾಲು ರೋಗಗಳ ತಡೆಗೆ ಸೊಳ್ಳೆಗಳ ಉತ್ಪತ್ತಿ ತಡೆಯುವುದು ಅತ್ಯಂತ ಮುಖ್ಯವಾಗಿದೆ. ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆ ಪರದೆ, ಸೊಳ್ಳೆ ನಿವಾರಕಗಳ ಬಳಕೆ ಹಾಗೂ ಪೂರ್ಣ ತೋಳಿನ ಬಟ್ಟೆ ಧರಿಸುವ ಮೂಲಕ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು. ಈ ವರ್ಷದ ಘೋಷವಾಕ್ಯ “ಡೆಂಗ್ಯೂ ನಿಯಂತ್ರಣಕ್ಕಾಗಿ ಸಮುದಾಯದ ಭಾಗವಹಿಸುವಿಕೆ: ಪರಿಶೀಲಿಸಿ, ಸ್ವಚ್ಛಗೊಳಿಸಿ ಮತ್ತು ಮುಚ್ಚಿ” ಎಂಬುದಾಗಿದ್ದು, ಡೆಂಗ್ಯೂ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು. ಸರ್ಕಾರವು ವರ್ಧಿತ ಕಣ್ಗಾವಲು, ಪರೀಕ್ಷೆ, ಚಿಕಿತ್ಸಾ ಸೌಲಭ್ಯಗಳು ಹಾಗೂ ಜಾಗೃತಿ ಅಭಿಯಾನಗಳ ಮೂಲಕ ಡೆಂಗ್ಯೂ ನಿಯಂತ್ರಣ ಕ್ರಮಗಳನ್ನು ಬಲಪಡಿಸುತ್ತಿದೆ ಎಂದರು. ಆರೋಗ್ಯ ಇಲಾಖ...

ಮಧ್ಯ ಕರ್ನಾಟಕಕ್ಕೆ ಹೈಕೋರ್ಟ್ ಪೀಠ ಅತ್ಯಗತ್ಯ: ಶಿವಮೊಗ್ಗದ ವಕೀಲರ ಹೋರಾಟಕ್ಕೆ ಡಾ. ಧನಂಜಯ ಸರ್ಜಿ ಬೆಂಬಲ

ಇಮೇಜ್
ಶಿವಮೊಗ್ಗ, : ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಸಾರ್ವಜನಿಕರು ಮತ್ತು ಕಕ್ಷಿದಾರರ ಅನುಕೂಲಕ್ಕಾಗಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ ಅವರು ಭಾಗವಹಿಸಿ, ವಕೀಲರ ನ್ಯಾಯಸಮ್ಮತ ಹೋರಾಟಕ್ಕೆ ತಮ್ಮ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.  ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ ಈಗಾಗಲೇ ಎರಡು ಸಂಚಾರಿ ಪೀಠಗಳನ್ನು ನೀಡಲಾಗಿದೆ. ಆದರೆ, ಸುಮಾರು 90 ಲಕ್ಷದಿಂದ 1 ಕೋಟಿಯಷ್ಟು ಜನಸಂಖ್ಯೆ ಇರುವ ಮಧ್ಯ ಕರ್ನಾಟಕ ಭಾಗಕ್ಕೆ ಸಂಚಾರಿ ಪೀಠದ ತೀವ್ರ ಕೊರತೆಯಿದೆ. ಜನಸಂಖ್ಯೆ ಮತ್ತು ಭೌಗೋಳಿಕ ಆಧಾರದ ಮೇಲೆ ನೋಡುವುದಾದರೆ, ಮಧ್ಯ ಕರ್ನಾಟಕಕ್ಕೆ ಶಿವಮೊಗ್ಗವು ಸಂಚಾರಿ ಪೀಠ ಸ್ಥಾಪನೆಗೆ ಅತ್ಯಂತ ಸೂಕ್ತ ಹಾಗೂ ಯೋಗ್ಯವಾದ ಜಾಗವಾಗಿದೆ. ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳು ಬಾಕಿ ಉಳಿದಿರುವ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇಡೀ ಕರ್ನಾಟಕ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಲಕ್ಷಾಂತರ ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ. 2024ರ ಸಾಲಿನಲ್ಲಿ ಸರಿಸುಮಾರು17.9 ಲಕ್ಷ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದರೂ ಸಹ, ಪ್ರಸ್ತುತ 21 ಲಕ್ಷಕ್ಕೂ ಅಧಿಕ ಪ್ರಕರಣಗಳು ಇನ್ನೂ ಬಾಕಿ ಉಳಿದಿದ...

"ನಕಲಿ ವೈದ್ಯರು”ಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ದರಾದ ಶಿವಮೊಗ್ಗ ಜಿಲ್ಲಾ ಆಯುಷ್

ಇಮೇಜ್
  ದೇಶದ ವಿವಿಧ ಭಾಗಗಳಲ್ಲಿ ಮೂಲವ್ಯಾಧಿ (Piles), ಫಿಸ್ಚುಲಾ ಮತ್ತು ಫಿಶರ್ ಚಿಕಿತ್ಸೆಯ ಹೆಸರಿನಲ್ಲಿ ನಕಲಿ ವೈದ್ಯರು ಹಾಗೂ ಅನಧಿಕೃತ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅರ್ಹತೆ ಇಲ್ಲದೆ ವೈದ್ಯರಂತೆ ವರ್ತಿಸಿ ಶಸ್ತ್ರಚಿಕಿತ್ಸೆ ನಡೆಸುತ್ತಿರುವವರ ವಿರುದ್ಧ ಇದೀಗ ಆರೋಗ್ಯ ಇಲಾಖೆ ಹಾಗೂ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕದ ಹೈಕೋರ್ಟ್ ಒಂದು ಮಹತ್ವದ ತೀರ್ಪಿನಲ್ಲಿ, ಮೂಲವ್ಯಾಧಿ ಚಿಕಿತ್ಸೆಯಲ್ಲಿ ತೊಡಗಿದ್ದ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿದೆ. “ಅರ್ಹತೆ ಇಲ್ಲದೆ ವೈದ್ಯಕೀಯ ಸೇವೆ ನೀಡುವುದು ಗಂಭೀರ ಅಪರಾಧ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಶಿವಮೊಗ್ಗ ನಗರದಲ್ಲಿಯೂ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ ಇಬ್ಬರು ನಕಲಿ ವೈದ್ಯರು. ವೈದ್ಯಕೀಯ ಪದವಿ ಅಥವಾ ಮೆಡಿಕಲ್ ಕೌನ್ಸಿಲ್ ನೋಂದಣಿ ಇಲ್ಲದೇ ರೋಗಿಗಳಿಗೆ ಇಂಜೆಕ್ಷನ್, ಆಂಟಿಬಯಾಟಿಕ್ ಔಷಧಿ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು. ಚಂದ್ರೋದಯ ಪತ್ರಿಕೆ ಮೂಲಕ ದಾಖಲಾತಿಗಳೊಂದಿಗೆ, ಸಂಬಂದಿಸಿದ ಇಲಾಖೆಗೆ ದೂರು ಸಲೀಸಾಲಾಗಿದ್ದು, ಶೀಘ್ರದಲ್ಲೇ ಅಧಿಕೃತ ಕ್ಲಿನಿಕ್ ಗೆ ಪರ್ಮನೆಂಟ್ ಬೀಗ ಬೀಳಲಿದೆ.   ವಿದ್ಯಾನಗರದ ಫಿಟ್ನೆಸ್ ಜಿಮ್ ಪಕ್ಕದ ರಸ್ತೆಯಲ್ಲಿ ಮತ್ತು ಜೈಲ್ ರಸ್ತೆಯ ಪಾರ್ವತಿ ಚಾಟ್ಸ್ ಎದುರು ಈ ನಕಲಿ ಕ್ಲಿನಿಕ್ ಗಳು ರಾಜಾರೋಷವಾಗಿ ಜಿಲ್ಲಾಡಳಿತಕ್ಕ...

ಅಕಾಲದಲ್ಲೇ ನಿಂತ ನಂದಿಯ ಮಾತುಗಳು…

ಇಮೇಜ್
ಕಣ್ಣೀರಿನಲ್ಲಿ ಕನ್ನಡ ಚಿತ್ರರಂಗ – ಯುವ ಸಂಭಾಷಣೆಗಾರ ಟಿ.ಜಿ. ನಂದೀಶ್ ಇನ್ನಿಲ್ಲ ಕನಸುಗಳು ಇನ್ನೂ ಅರ್ಧದಲ್ಲೇ ಇದ್ದವು… ಬರೆಯಬೇಕಾದ ಸಂಭಾಷಣೆಗಳು ಇನ್ನೂ ಹಲವಿದ್ದವು… ಕುಟುಂಬದ ಕನಸುಗಳಿಗೆ ಆಸರೆಯಾಗಿದ್ದ ಯುವ ಜೀವ ಒಂದು ಕ್ಷಣದಲ್ಲಿ ನಿಂತು ಹೋಗಿದೆ. ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ತಮ್ಮದೇ ಆದ ಬರವಣಿಗೆಯ ಛಾಪು ಮೂಡಿಸಿದ್ದ ಪ್ರತಿಭಾವಂತ ಸಂಭಾಷಣೆಗಾರ ಟಿ.ಜಿ. ನಂದೀಶ್ ಅವರು ದಿಢೀರ್ ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ಅಭಿಮಾನಿಗಳು ಹಾಗೂ ಚಿತ್ರರಂಗವನ್ನು ತೀವ್ರ ದುಃಖಕ್ಕೆ ತಳ್ಳಿದೆ. ಕೇವಲ 37ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿರುವುದು ಎಲ್ಲರ ಮನಸ್ಸನ್ನೂ ಮಿಡಿಯಿಸಿದೆ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನವರಾದ ನಂದೀಶ್, ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಾಮಾನ್ಯ ಕನಸುಗಳನ್ನು ಹೊತ್ತವರು. ಸಾಹಿತ್ಯದ ಮೇಲಿನ ಅಪಾರ ಪ್ರೀತಿಯೇ ಅವರನ್ನು ಚಿತ್ರರಂಗದತ್ತ ಕರೆತಂದಿತು. ಬದುಕಿನಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದರೂ, ತಮ್ಮ ಬರವಣಿಗೆಯ ಮೇಲಿನ ನಂಬಿಕೆಯನ್ನು ಅವರು ಎಂದಿಗೂ ಕಳೆದುಕೊಳ್ಳಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ “ನಂದಿ ರೈಟ್ಸ್” ಎಂಬ ಹೆಸರಿನಲ್ಲಿ ಅವರು ಹಂಚಿಕೊಳ್ಳುತ್ತಿದ್ದ ಬರಹಗಳು ಸಾವಿರಾರು ಓದುಗರ ಹೃದಯ ಮುಟ್ಟಿದ್ದವು. ಜೀವನದ ನೋವು, ಪ್ರೀತಿ, ಸಂಬಂಧಗಳ ಸೂಕ್ಷ್ಮ ಭಾವನೆಗಳನ್ನು ಸರಳ ಪದಗಳಲ್ಲಿ ಹೇಳುವ ಅವರ ಶೈಲಿ ಯುವಜನತೆಯ ಮೆಚ್ಚುಗೆಗೆ ಪಾತ್ರವಾಗಿತ್ತು. ಚಿತ್ರರಂಗದಲ್ಲಿ ಗುರುತಿಸ...

ಬಡವರ ಬಾಳಿಗೆ ಬೆಳಕಾದ ಯುವ ಹೃದಯ — ಆಂತೋಣಿ ಚಿರಂಜೀವಿ ಬಾಬು

ಇಮೇಜ್
ಇಂದಿನ ಕಾಲದಲ್ಲಿ ಸ್ವಾರ್ಥದ ಬದುಕು ಹೆಚ್ಚಾಗುತ್ತಿರುವಾಗ, ತನ್ನ ಬದುಕಿನ ಅರ್ಥವನ್ನು ಬಡವರ ಕಣ್ಣೀರನ್ನು ಒರೆಸುವುದರಲ್ಲಿ ಕಂಡುಕೊಂಡಿರುವ ಯುವ ಮನಸ್ಸೊಂದು ಶಿವಮೊಗ್ಗದಲ್ಲಿ ಸಾವಿರಾರು ಜನರ ಹೃದಯ ಗೆದ್ದಿದೆ. ಆ ಯುವ ಹೃದಯವೇ ಆಂತೋಣಿ ಚಿರಂಜೀವಿ ಬಾಬು. “ಬಡವರ ಸೇವೆಯಲ್ಲೇ ನನಗೆ ಆತ್ಮತೃಪ್ತಿ ಸಿಗುತ್ತದೆ” ಎನ್ನುವ ಅವರ ಮಾತು ಕೇವಲ ಹೇಳಿಕೆಯಾಗಿಲ್ಲ, ಅದು ಅವರ ಬದುಕಿನ ಧರ್ಮವಾಗಿದೆ. ಶಿವಮೊಗ್ಗ ನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಬಾಬು, ಬಾಲ್ಯದಿಂದಲೇ ಕರುಣೆ, ಕ್ರೀಡೆ, ಮಾನವೀಯತೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಂಡವರು.  ಹತಾಶರು, ಅಸಹಾಯಕರು, ನೋವಿನಲ್ಲಿ ನರಳುವವರನ್ನು ಕಂಡಾಗ ಅವರ ಮನಸ್ಸು ಮೌನವಾಗಿರಲಿಲ್ಲ; ಅವರ ಸಂಕಷ್ಟಗಳನ್ನು ತನ್ನದೇ ಎಂದು ಭಾವಿಸಿ ನೆರವಾಗುವ ದಾರಿಯತ್ತ ಹೆಜ್ಜೆಯಿಟ್ಟಿತು. ಜಾತಿ, ಮತ, ಧರ್ಮ ಎಂಬ ಗೋಡೆಗಳನ್ನು ಮೀರಿ ಎಲ್ಲರನ್ನು ತನ್ನವರಂತೆ ಕಾಣುವ ಅವರ ಹೃದಯವಂತಿಕೆ ಇಂದು ಅಪರೂಪದ ಮೌಲ್ಯವಾಗಿದೆ. ಸಮಾಜದ ಲೆಕ್ಕಾಚಾರಗಳ ನಡುವೆ ಇಂತಹ ನಿಸ್ವಾರ್ಥ ಮನಸ್ಸುಗಳು ಬೆರಳೆಣಿಕೆಯಷ್ಟೇ ಎನ್ನುವುದು ನಿಜ. ಕೆಲವು ವರ್ಷಗಳ ಕೆಳಗೆ ನಾನು ಮತ್ತು ಬಾಬಣ್ಣ ಕೆಲಸದ ಮೇಲೆ ಹೋಗುತ್ತಿದ್ದ ಸಂದರ್ಭ ಒಂದು ಕರೆ ಬರುತ್ತದೆ. ಒಂದು ಹಸು ಒಂದು ದಿನದಿಂದ ನೀರು ಆಹಾರ ಸೇವಿಸದೆ, ಪ್ರಸುತಿಯ ಕೊನೆಯ ಕ್ಷಣದಲ್ಲಿ ಕರುಗೆ ಜನುಮ ನೀಡಲು ಸಾಧ್ಯವಾಗದೆ ನರಳುತ್ತಿದೆ ಎಂದು. ತಕ್ಷಣ ಸ್ಥಳಕ್ಕೆ ಹೋದ ನಾವು ಆ ಕ್ಷಣದಲ್...

ಶಿವಮೊಗ್ಗದಲ್ಲಿ ಹೈ ಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಬಾರ್ ಅಸೋಸಿಯೇಷನ್ ​​ಆಗ್ರಹ

ಇಮೇಜ್
ಶಿವಮೊಗ್ಗ ವಕೀಲರ ಸಂಘದ ವತಿಯಿಂದ ರಾಜ್ಯ ಸರ್ಕಾರಕ್ಕೆ ಮಹತ್ವದ ಮನವಿ ಸಲ್ಲಿಸಲು, ಶಿವಮೊಗ್ಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಮೊಬೈಲ್ ಬೆಂಚ್ ಸ್ಥಾಪಿಸುವಂತೆ ತೋರಿಸಲಾಗಿದೆ. ಶಿವಮೊಗ್ಗ ಬಾರ್ ಅಸೋಸಿಯೇಷನ್ ​​ಅಧ್ಯಕ್ಷ ಆರ್. ರಾಘವೇಂದ್ರಸ್ವಾಮಿ ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ, ಮಧ್ಯ ಕರ್ನಾಟಕ ಭಾಗದ ಜನರಿಗೆ ನ್ಯಾಯ ಪಡೆಯಲು ಬೆಂಗಳೂರು ದೂರವಾಗಿರುವುದರಿಂದ ಅನೇಕ ತೊಂದರೆಗಳು ಕಂಡುಬರುತ್ತಿವೆ ಎಂದು ಉಲ್ಲೇಖಿಸಲಾಗಿದೆ. ಮನವಿಯಲ್ಲಿ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳು ಸೇರಿ “ಮಧ್ಯ ಕರ್ನಾಟಕ” ಪ್ರದೇಶವಾಗಿದೆ, ಈ ಭಾಗದ ಜನರು ನ್ಯಾಯಾಂಗ ಸೇವೆಗಾಗಿ ಸುಮಾರು 250 ರಿಂದ 300 ಕಿ.ಮೀ ದೂರದ ಬೆಂಗಳೂರಿಗೆ ತೆರಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಲಾಗಿದೆ. ಕಲಬುರಗಿ ಹಾಗೂ ಧಾರವಾಡದಲ್ಲಿ ಹೈಕರಾನ್ ಮೊಬೈಲ್ ಬೆಂಚ್‌ಗಳು ಕಾರ್ಯನಿರ್ವಹಿಸುತ್ತಿವೆ, ಅದೇ ಮಾದರಿಯಲ್ಲಿ ಶಿವಮೊಗ್ಗದಲ್ಲೂ ಬೆಂಚ್ ಸ್ಥಾಪಿಸಲು ಸಂಘದ ಒತ್ತಾಯವಾಗಿದೆ. ಜನರಿಗೆ ಸುಲಭವಾಗಿ ನ್ಯಾಯ ಸಿಗುವಂತೆ ಮಾಡಲು "ನ್ಯಾಯಕ್ಕೆ ಪ್ರವೇಶ" ಅತಿ ಮುಖ್ಯವಾಗಿದ್ದು, ಶಿವಮೊಗ್ಗ ಭೌಗೋಳಿಕವಾಗಿ ಮಧ್ಯ ಕರ್ನಾಟಕದ ಕೇಂದ್ರ ಭಾಗವಾಗಲು ಇದು ಸೂಕ್ತ ಸ್ಥಳ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಇದಲ್ಲದೆ, ಶಿವಮೊಗ್ಗ ಜಿಲ್ಲೆಯಲ್ಲಿಯೇ ಅನುಭವಸಂಪನ್ನ ಹಿರಿಯ ವಕೀಲರ ತಂಡವಿದ್ದು, ಹೈಕಮಾಂಡ್ ಸಂಚಾರಿ ಪೀಠ ಕಾರ್ಯನಿರ...

ಶಿವಮೊಗ್ಗ ತುಂಗಾ ಹೊಳೆಯ ಸೇತುವೆ ನಿರ್ಮಾಣ ಮಾಡಿಕೊಡಲು ಲೋಕೋಪಯೋಗಿ ಸಚಿವರಿಂದ ಭರವಸೆ

ಇಮೇಜ್
ಹೆಚ್ ಸಿ ಯೋಗೇಶ್ ರವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಾನ್ಯ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ತುಂಗಾ ಹೊಳೆ ಸೇತುವೆಯ ವಿಚಾರವಾಗಿ, ಶಿವಮೊಗ್ಗ ನಗರಕ್ಕೆ ಮಹಾದ್ವಾರವಾಗಿರುವ ತುಂಗಾ ನದಿ ಸೇತುವೆ ಸುಮಾರು ನೂರು ವರ್ಷಗಳಾಗಿದ್ದು ಈ ಒಂದು ಸೇತುವೆಗೆ ಇದರದ್ದೇ ಆದ ಇತಿಹಾಸವು ಇದೆ, ಅಂದಿನ ಮಹಾರಾಜರುಗಳಿಂದ ಹಿಡಿದು ಈಗಲೂ ಸಹ ಸುಮಾರು ಕೋಟ್ಯಂತರ ಜನರು ಈ ಸೇತುವೆ ಮೇಲೆ ಓಡಾಡಿದ್ದಾರೆ, ಇದುವರೆಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೆ ಅನಾಹುತಗಳು ಸಹ ಆಗಿರುವುದಿಲ್ಲ. ಶಿವಮೊಗ್ಗ ನಗರದಲ್ಲಿನ ತುಂಗಾ ಹೊಳೆಯನ್ನು ದಾಟಿ ಬೇರೆ ಬೇರೆ ನಗರಗಳಿಗೆ ಸಂಪರ್ಕ ಒದಗಿಸಿ ಪ್ರಯಾಣಿಸಲು ಅನುಕೂಲವಾಗಿದೆ. ಮಳೆಗಾಲದಲ್ಲಿ ಬಾಗಿನ ಬಿಡುವುದು ಪೂಜೆಗಳನ್ನು ನೆರವೇರಿಸಿದ್ದು ಸಹ ಇದೆ. 2019ರ ಸಂದರ್ಭದಲ್ಲಿ ಆದಂತಹ ಭಾರಿ ಮಳೆಗೆ ಈ ಸೇತುವೆಗೆ ಬಹಳಷ್ಟು ಭಾಗ ತೊಂದರೆಯಾಗಿದ್ದು ತಾತ್ಕಾಲಿಕವಾಗಿ ಆ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಕಾಮಗಾರಿ ಮಾಡಿರುತ್ತಾರೆ. ಶಿವಮೊಗ್ಗದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು ನೂತನ ಉದ್ಯಮಗಳು ಪ್ರಾರಂಭವಾಗಿದ್ದು ಜನರ ಹೋರಾಟವು ಹೆಚ್ಚಾಗಿರುವುದರಿಂದ ಪ್ರತಿನಿತ್ಯ ಈ ಸೇತುವೆ ಮೇಲೆ ಓಡಾಡಲು ತೊಂದರೆಯಾಗುತ್ತಿದ್ದು. 2026–27ನೇ ಸಾಲಿನಲ್ಲಿ ಸುಮಾರು 2,000 ಕೋಟಿ ರೂಪಾಯಿಗಳನ್ನು ರಾಜ್ಯಾದ್ಯಂತ ಸೇತುವೆಗಳ ನಿರ್ಮಾಣತೆಂದು ಇಟ್ಟಿರುವ ಹಣದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸುಮಾರು 40 ಕೋಟಿ ರೂಪಾಯಿಗಳಷ್ಟು ವೆಚ್ಚವಾಗ...

“ಚಿತ್ರರಂಗದ ನಷ್ಟ ಎಂದರೆ ಅನೇಕ ಕುಟುಂಬಗಳ ನಷ್ಟ”

ಇಮೇಜ್
  ಕನ್ನಡ ಚಿತ್ರರಂಗ, ಅಂದರೆ ಸ್ಯಾಂಡಲ್ ಹುಡ್ , ಕೇವಲ ಮನರಂಜನೆಯ ಲೋಕವಲ್ಲ. ಇದು ಸಾವಿರಾರು ಕುಟುಂಬಗಳ ಜೀವನಾಧಾರ. ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ಲೈಟ್ ಬಾಯ್‌ಗಳು, ಡ್ರೈವರ್‌ಗಳು, ಸೆಟ್ ವರ್ಕರ್‌ಗಳು, ಮೇಕಪ್ ಕಲಾವಿದರು, ಸಣ್ಣ ವ್ಯಾಪಾರಿಗಳು — ಅನೇಕ ಕುಟುಂಬಗಳು ಈ ಉದ್ಯಮದ ಮೇಲೆ ಬದುಕು ಕಟ್ಟಿಕೊಂಡಿವೆ. ಒಂದು ದೊಡ್ಡ ನಟನ ಚಿತ್ರ ನಿಲ್ಲುತ್ತದೆ, ಅದರ ಪರಿಣಾಮ ನೂರಾರು ಕುಟುಂಬಗಳ ಆದಾಯದ ಮೇಲೆ ಬೀಳುತ್ತದೆ. ಅಂತಹ ಉದ್ಯಮದಲ್ಲಿ ದರ್ಶನ್ ತೂಗುದೀಪ ಒಂದು ದೊಡ್ಡ ಜನಪ್ರಿಯ ಶಕ್ತಿ. “ಚಾಲೆಂಜಿಂಗ್ ಸ್ಟಾರ್” ಎಂಬ ಹೆಸರು ಅವರಿಗೆ ಅಭಿಮಾನಿಗಳಿಂದ ಬಂದದ್ದು. ಮಧ್ಯಮ ವರ್ಗದ ಹಿನ್ನಲೆಯಿಂದ ಬಂದ ದರ್ಶನ್, ತಮ್ಮ ಶ್ರಮ, ಧ್ವನಿ ಮತ್ತು ಮಾಸ್ ಪಾತ್ರಗಳ ಮೂಲಕ ಕನ್ನಡ ಸಿನಿರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ದರ್ಶನ್ ಅವರ ಪ್ರಮುಖ ಸಿನಿಮಾಗಳು ಮೆಜೆಸ್ಟಿಕ್ ಕರಿಯಾ ಗಜ ಸಾರಥಿ ನವಗ್ರಹ ಬುಲ್ಬುಲ್ ಯಜಮಾನ ರಾಬರ್ಟ್ ಕಾಟೇರಾ ದಿ ಡೆವಿಲ್ ಈ ಸಿನಿಮಾಗಳು ಬಾಕ್ಸ್ ಆಫೀಸ್, ಕರ್ನಾಟಕದ ಬಿ ಮತ್ತು ಸಿ ಸೆಂಟರ್‌ಗಳಲ್ಲಿ ಥಿಯೇಟರ್‌ಗಳಿಗೆ ಜೀವ ತುಂಬಿದವು ಎಂದು ಹೇಳುತ್ತಾರೆ. ಅನೇಕ ವಿತರಕರು, ಪ್ರದರ್ಶಕರು ಮತ್ತು ಸಣ್ಣ ಉದ್ಯಮಿಗಳು ದರ್ಶನ್ ಸಿನಿಮಾಗಳಿಂದ ಬದುಕು ಕಂಡಿದ್ದಾರೆ ಎಂಬ ಅಭಿಪ್ರಾಯ ಚಿತ್ರರಂಗದಲ್ಲಿ ಕೇಳಿಬರುತ್ತದೆ. ಕುಟುಂಬಗಳ ಮೇಲೆ ಸಿನಿರಂಗದ ಪ್ರಭಾವ ಸಿನಿಮಾ ನಿರ್ಮಾಣ ಒಂದು ಸರಪಳಿ ಉದ್ಯಮ. ಒಂದು ಚಿತ್...

ಪ್ರಾಣಿ ಪಕ್ಷಿಗಳಿಂದ ಪ್ರಕೃತಿ ಸಮತೆುಾೕಲನ: ಬಿ ಜಿ ಧನರಾಜ್

ಇಮೇಜ್
ಶಿವಮೊಗ್ಗ: ನಗರದ ಪ್ರತಿಷ್ಟಿತ ಸಂಸ್ಥೆಯಾದ ಫ್ರೆಂಡ್ಸ್ ಸೆಂಟರ್ ವತಿಯಿಂದ ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರನ್ನು ಒದಗಿಸಲು "ಜಲಾಮೃತ" ಕಾರ್ಯಕ್ರಮ ಹಮ್ಮಿಕೆುಾಂಡು ವಿವಿಧ ಬಡಾವಣೆಗಳಿಗೆ ಸಿಮೆಂಟಿನ ನೀರಿನ ತೆುಾಟ್ಟಿಗಳನ್ನು ವಿತರಿಸಲಾಯಿತು         ಫ್ರೆಂಡ್ಸ್ ಸೆಂಟರ್ ಅಧ್ಯಕ್ಷರಾದ ಬಿ.ಜಿ.ಧನರಾಜ್ ರವರು ಮಾತನಾಡಿ ಪಕ್ಷಿಗಳು ತಿಂದ ಹಣ್ಣಿನ ಬೀಜಗಳಿಂದ ಅವುಗಳು ಹಾರಾಡುತ್ತಲೇ ವೃಕ್ಷಗಳನ್ನು ಸೃಷ್ಟಿ ಮಾಡುತ್ತವೆ ಹಾಗು ಕಾಡುಗಳಲ್ಲಿ ಸಮೃದ್ದವಾದ ಮರಗಳು ಬೆಳೆಯುತ್ತವೆ ಅದರಿಂದ ಮಳೆಯಾಗುತ್ತದೆ ಹೀಗೆ ಒಂದಕ್ಕೆುಾಂದು ಸಂಬಂಧವನ್ನು ಬೆಸೆಯುವಲ್ಲಿ ಹಾಗುಾ ಪ್ರಕೃತಿಯ ಸಮತೆುಾೕಲನ ಕಾಪಾಡುವಲ್ಲಿ ಪಕ್ಷಿಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸುಡುವ ಬಿಸಿಲಿನ ಬೇಗೆಯಲ್ಲಿ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದೇ ಪ್ರಾಣ ಕಳೆದುಕೆುಾಳ್ಳುತ್ತಿವೆ ಆದ್ದರಿಂದ ಅವುಗಳ ಜೀವ ಕಾಪಾಡುವುದು ಪ್ರತಿಯೊಬ್ಬ ಮನುಷ್ಯನ ಜವಾಬ್ದಾರಿ ಹಾಗೂ ಆದ್ಯ ಕರ್ತವ್ಯ ಎಂದು ಹೇಳಿದರು.          ತೆುಾಟ್ಟಿ ವಿತರಣಾ ಕಾರ್ಯಕ್ರಮವನ್ನು ಪರಿಸರ ಪ್ರೇಮಿಗಳಾದ ಜನಮೇಜಯರವರು ಉಧ್ಘಾಟಿಸಿ ಮಾತನಾಡಿ ಪ್ರಾಣಿ ಪಕ್ಷಿಗಳಿಗಾಗಿ ಸಿಮೆಂಟ್ ತೊಟ್ಟಿಗಳನ್ನು ವಿತರಿಸಿ ನೀರುಣಿಸುವ ಪುಣ್ಯದ ಕೆಲಸವನ್ನು ಫ್ರೆಂಡ್ಸ್ ಸೆಂಟರ್  ಸದಸ್ಯರು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದ...

ಆರೋಗ್ಯ ಕ್ಷೇತ್ರದಲ್ಲೂ ಎಐ ಬಳಕೆ ಅಧಿಕ

ಇಮೇಜ್
ಶಿವಮೊಗ್ಗ: ಒತ್ತಡದ ಜೀವನಶೈಲಿಯಿಂದ ಬಹುತೇಕ ಜನರು ಬಳಲುತ್ತಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಗಮನ ಹರಿಸಬೇಕು ಎಂದು ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಬಾಲು ಹೇಳಿದರು. ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಮಾತನಾಡಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮನೆಯಲ್ಲೇ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಮೊಬೈಲ್ ಮುಖಾಂತರ ಎಐ ಬಳಸಿ ರಕ್ತದ ಒತ್ತಡ ಪರೀಕ್ಷೆ ಮಾಡಬಹುದು. ವೈದ್ಯರನ್ನು ಸಂಪರ್ಕಿಸಿ ಅಗತ್ಯ ಮಾರ್ಗದರ್ಶನ ಪಡೆಯಹುದಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅನೇಕ ಮೊಬೈಲ್ ಅಪ್ಲಿಕೇಷನ್‌ಗಳನ್ನು ಬಳಸಬಹುದಾಗಿದೆ ಎಂದು ತಿಳಿಸಿದರು. ಡಾ. ಗುಡದಪ್ಪ ಕಸಬಿ ಮಾತನಾಡಿ, ವಿದೇಶಗಳಲ್ಲಿ ಜನರು ಮುಂಜಾಗೃತಾ ಕ್ರಮವಾಗಿ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಶೇ. 17ರಷ್ಟು ಜನರು ಮಾತ್ರ ರಕ್ತದೊತ್ತಡ ಪರೀಕ್ಷೆ ಮಾಡಿಸುತ್ತಾರೆ ಎಂದು ಹೇಳಿದರು. ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್‌ಕುಮಾರ್ ಮಾತನಾಡಿ, ಎಲ್ಲ ವಯಸ್ಸಿನವರು ಒತ್ತಡದ ಜೀವನಶೈಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಸಕಾಲಕ್ಕೆ ವೈದ್ಯರ ಮಾರ್ಗದರ್ಶನ ಪಡೆಯುವುದು ಅತ್ಯಂತ ಮುಖ್ಯ ಆಗಿರುತ್ತದೆ. ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲರೂ ಆದ್ಯತೆ ನೀಡಬೇಕು ಎಂದು ತಿಳಿಸಿದರು. ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿ.ಆರ್.ಧನಂಜಯ ಮಾತನಾಡಿ, ಆಧುನಿಕ ಯುಗದಲ್ಲಿ ಪ್ರತಿಯೊಬ...

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ : ಶಾಸಕರು ಹಾಗೂ ಕೆ ಆರ್ ಐ ಡಿ ಎಲ್ ಅಧ್ಯಕ್ಷರಾದ ಬಿಕೆ ಸಂಗಮೇಶ್ವರ

ಇಮೇಜ್
  ಭದ್ರಾವತಿ: ಶಾಸಕರು ಹಾಗೂ ಕೆ ಆರ್ ಐ ಡಿ ಎಲ್ ಅಧ್ಯಕ್ಷರಾದ ಬಿಕೆ ಸಂಗಮೇಶ್ವರ ಮತ್ತು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ಬಿ ಎಸ್ ಗಣೇಶ್ ಅವರು, ಗ್ರಾಮಾಂತರ ಅಧ್ಯಕ್ಷರಾದ ಷಡಕ್ಷರಿ ರವರು,  ಬಗರ್ ಉಕುಂ ಅಧ್ಯಕ್ಷರಾದ ಮಣಿ ಶೇಖರ್ ರವರು,  ಅತ್ತಿಗುಂದ ಧರ್ಮಣ್ಣನವರು ಹಾಗೂ ಕಾಂಗ್ರೆಸ್  ಹಿರಿಯ ಮುಖಂಡರುಗಳು ಜೊತೆಗೂಡಿ ತಾಲ್ಲೂಕಿನ ಹಲವೆಡೆ ಭಾನುವಾರ ಸಂಜೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಕಷ್ಟಗಳಿಗೆ ಸ್ಪಂದಿಸಿದರು.  ಅಧಿಕಾರಿಗಳೊಂದಿಗೆ ಹಾನಿಗೊಳಗಾದ ನಷ್ಟದ ವರದಿ ನೀಡುವಂತೆ ಸೂಚಿಸಿದರು. ಸಚಿವರು ಮತ್ತು  ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸರ್ಕಾರದ ನಿಯಮಾವಳಿ ಪ್ರಕಾರ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿ, ರೈತರಿಗೆ ಧೈರ್ಯ ತುಂಬಿದರು.

ಶಿವಮೊಗ್ಗದಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಸ್ಥಾಪನೆಗಾಗಿ ಹೋರಾಟ

ಇಮೇಜ್
  ಮೇ 18ರಿಂದ ಜಿಲ್ಲಾ ವಕೀಲರ ಸಂಘದ ಶಾಂತಿಪೂರ್ಣ ಪ್ರತಿಭಟನೆ ಶಿವಮೊಗ್ಗ, ಮೇ 18: ಶಿವಮೊಗ್ಗದಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಸ್ಥಾಪನೆಗೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ವಕೀಲರ ಸಂಘವು ಮೇ 18ರಿಂದ ಶಾಂತಿಪೂರ್ಣ ಹೋರಾಟ ಮತ್ತು ಪ್ರತಿಭಟನೆ ಆರಂಭಿಸಿದೆ. ಸರ್ಕಾರ ಹಾಗೂ ಮಾನ್ಯ ಹೈಕೋರ್ಟ್ ಗಮನ ಸೆಳೆಯುವ ಉದ್ದೇಶದಿಂದ ಈ ಹೋರಾಟ ಕೈಗೊಳ್ಳಲಾಗಿದೆ ಎಂದು ಸಂಘ ತಿಳಿಸಿದೆ. ಜಿಲ್ಲಾ ನ್ಯಾಯಾಲಯ ಆವರಣದ ವಕೀಲರ ಸಭಾಂಗಣದ ಮುಂಭಾಗದಲ್ಲಿ ಶಾಮಿಯಾನ ಹಾಕಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಸೇರಿದಂತೆ ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜನರಿಗೆ ನ್ಯಾಯಾಂಗ ಸೇವೆಗಳು ಸುಲಭವಾಗಿ ದೊರಕಬೇಕು ಎಂಬುದು ಹೋರಾಟದ ಪ್ರಮುಖ ಉದ್ದೇಶವಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾ ವಕೀಲರ ಸಂಘ, ಸಾರ್ವಜನಿಕ ಹಿತಾಸಕ್ತಿಯ ಈ ಬೇಡಿಕೆಗೆ ಮಾಧ್ಯಮಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದೆ. ನ್ಯಾಯಾಂಗ ವಿಕೇಂದ್ರೀಕರಣದ ಅಗತ್ಯತೆಯನ್ನು ಜನರಿಗೆ ತಲುಪಿಸಲು ಪತ್ರಿಕೆ ಹಾಗೂ ಮಾಧ್ಯಮ ಸಂಸ್ಥೆಗಳು ಬೆಂಬಲಿಸಬೇಕೆಂದು ಸಂಘ ವಿನಂತಿಸಿದೆ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್. ರಾಘವೇಂದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ಎ. ಶ್ರೀನಿವಾಸ್ ಸೇರಿದಂತೆ ಪದಾಧಿಕಾರಿಗಳು ಈ ಹೋರಾಟಕ್ಕೆ ನೇತೃತ್ವ ವಹಿಸಿದ್ದಾರೆ.

ಪ್ರಾಣಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಶ್ಲಾಘನೀಯ ಕಾರ್ಯ

ಇಮೇಜ್
ಶಿವಮೊಗ್ಗ: ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರನ್ನು ಒದಗಿಸುವುದು ಪ್ರತಿಯೊಬ್ಬ ಮನುಷ್ಯನ ಜವಾಬ್ದಾರಿ ಹಾಗೂ ಆದ್ಯ ಕರ್ತವ್ಯ ಎಂದು ಶಿವಮೊಗ್ಗ ಜಿಲ್ಲಾ  ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಜಿ.ಶಿವಮೂರ್ತಿ ಹೇಳಿದರು.  ಸಿಮೆಂಟ್ ತೊಟ್ಟಿಗಳನ್ನು ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್  ವತಿಯಿಂದ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂತಹ ಪುಣ್ಯವಾದ ಕೆಲಸವನ್ನು ರೋಟರಿ  ರಿವರ್ ಸೈಡ್ ಸದಸ್ಯರು ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದು ತಿಳಿಸಿದರು. ರೋಟರಿ ಸದಸ್ಯರು ನಿರಂತರವಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಪ್ರಾಣಿ ಪಕ್ಷಿಗಳಿಗೆ ನೀರನ್ನು ಉಣಿಸುವ ಸಿಮೆಂಟ್ ತೊಟ್ಟಿಗಳನ್ನು ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ವಿತರಿಸುತ್ತಿರುವುದು ತುಂಬಾ ಉತ್ತಮ ಕಾರ್ಯ. ಮುಂದಿನ ದಿನಗಳಲ್ಲಿ ಇಂತಹ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಿ ಎಂದು ಆಶಿಸಿದರು. ರೋಟರಿ ರಿವರ್ ಸೈಡ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ ಮಾತನಾಡಿ, ಶುಭಂ ಹೋಟೆಲ್ ಮುಂಭಾಗದಲ್ಲಿ ಇರುವ ಆಟೋ ಸ್ಟಾö್ಯಂಡ್ ಬಳಿ ಸಿಮೆಂಟ್ ತೊಟ್ಟಿ ಇಡಲಾಗಿದ್ದು, ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಉಣಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು. ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ವತಿಯಿಂದ ಪ್ರಾಣಿ ಪಕ್ಷಿಗಳಿಗೆ ನೀರು ಉಳಿಸುವ ಸಿಮೆಂಟ್ ತೊಟ್ಟಿಗಳ ಉದ್ಘಾಟನೆ ಹಾಗೂ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿ...

ಡೆಂಗ್ಯೂ ಜ್ವರದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ

ಇಮೇಜ್
ಶಿವಮೊಗ್ಗ: ಡೆಂಗ್ಯೂ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸೊಳ್ಳೆಗಳ ನಿಯಂತ್ರಣದ ಬಗ್ಗೆ ತಿಳವಳಿಕೆ ನೀಡುವುದು ಪ್ರಮುಖ ಆಶಯ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಗುಡದಪ್ಪ ಕಸಬಿ ಹೇಳಿದರು. ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ ವತಿಯಿಂದ ರೋಟರಿ ಶಿವಮೊಗ್ಗ ಪೂರ್ವ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಡೆಂಗ್ಯೂ ಜಾಗೃತಿ ದಿನಾಚರಣೆಯಲ್ಲಿ ಮಾತನಾಡಿ, ಡೆಂಗ್ಯೂ ನಿಯಂತ್ರಣಕ್ಕಾಗಿ ಸಮುದಾಯದ ಸಹಭಾಗಿತ್ವ ಘೋಷವಾಕ್ಯದೊಂದಿಗೆ ಜಾಗೃತಿ ಮೂಡಿಸುತ್ತಿದ್ದು, ಎಲ್ಲರೂ ಅಭಿಯಾನದಲ್ಲಿ ಕೈಜೋಡಿಸಬೇಕು ಎಂದು ತಿಳಿಸಿದರು. ಶಿವಮೊಗ್ಗ ನಗರ ಸ್ವಚ್ಛಗೊಳಿಸುವ ಕಾರ್ಮಿಕರಿಗೆ ಮೆಚ್ಚುಗೆ ವ್ಯಕ್ತಪಡಿಸಿ, ತಾವು ಕೂಡ ಕಾರ್ಯಕ್ರಮಕ್ಕೆ ಕೈಜೋಡಿಸಿದರೆ ಇಂತಹ ಮಾರಕ ರೋಗವನ್ನು ತಡೆಗಟ್ಟಬಹುದು. ಸಮುದಾಯದಲ್ಲಿ ಎಲ್ಲರೂ ತಮ್ಮ ಮನೆ ಸುತ್ತಮುತ್ತ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಮತ್ತು ಹೊರಭಾಗದಲ್ಲಿ ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಗಮನ ಹರಿಸಬೇಕು ಎಂದು ಹೇಳಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಜಿ.ಬಿ.ಚಂದ್ರಶೇಖರ ಮಾತನಾಡಿ, ಸಮಾಜಮುಖಿ ಸೇವಾ ಸಂಸ್ಥೆಗಳು, ಪಾಲಿಕೆ, ಆರೋಗ್ಯ ಇಲಾಖೆ, ಪೌರಕಾರ್ಮಿಕರು ಸೇರಿ ಎಲ್ಲರೂ ಕೈಜೋಡಿಸಿದಾಗ ಇಂತಹ ರೋಗವನ್ನು ತಡೆಗಟ್ಟಲು ಸಾಧ್ಯವಿದೆ ಎಂದು ತಿಳಿಸಿದರು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ನಿರಂತರವಾಗಿ ಆರೋಗ್ಯ...

ಹಿಜಾಬ್ ನಿಷೇದ ಹಿಂಪಡೆದ ಸರ್ಕಾರ! ಮುಸ್ಲಿಮರ ಸಂಘಟನಾತ್ಮಕ ಹೋರಾಟಕ್ಕೆ ಸಿಕ್ಕ ಜಯ :

ಇಮೇಜ್
 ಹಿಜಾಬ್ ಕೇವಲ ವಸ್ತ್ರವಲ್ಲ. ಅದೊಂದು ಧಾರ್ಮಿಕ ಆಚರಣೆಯ ಭಾಗ. ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ಅವರವರ ಧರ್ಮಚಾರಣೆ ಮಾಡಲು ಮುಕ್ತ ಅವಕಾಶ ಇದೆ.ಹಿಜಾಬ್ ನಿಷೇಧದಿಂದಾಗಿ ಹಲವಾರು ಮುಸ್ಲಿಂ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತೀರಿಕ್ತ ಪರಿಣಾಮಬೀರಿತ್ತು  ಮತ್ತು ಮುಸ್ಲಿಮರ ಧಾರ್ಮಿಕ ಸ್ವಾತಂತ್ರದ ಮೇಲೆ ದಾಳಿ ಯಾಗಿತ್ತು.    ಹಾಗಾಗಿ  ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದ ಕಾನೂನನ್ನು ರದ್ದುಗೊಳಿಸುವಂತೆ ಒತ್ತಾಯಿಸಿ   ರಾಜ್ಯಾಧ್ಯoತ  ಮುಸ್ಲಿಂ ಸಮುದಾಯ ಸಂಘಟನಾತ್ಮಕವಾಗಿ ಹೋರಾಟ ಮಾಡಿತ್ತು. ಇದರ ಫಲವಾಗಿ ಸರ್ಕಾರ ಈಗ ಶಾಲಾಕಲೇಜುಗಳಲ್ಲಿ ಇದ್ದ ಹಿಜಾಬ್ ನಿಷೇದದ ಕಾನೂನನ್ನು ಹಿಂಪಡೆದಿದೆ.ಸರ್ಕಾರದ ಈ ನಿರ್ಧಾರವನ್ನು ವೇದಿಕೆಯು ಸ್ವಾಗತಿಸುತ್ತದೆ ಹಾಗೂ ಸಂಘಟನೆ ಮತ್ತು ಹೋರಾಟದಿಂದ ನಮಗೆ ಸಿಗಬೇಕಾದ ಹಕ್ಕುಗಳು ಸಿಗುತ್ತವೆ ಹಾಗಾಗಿ ಮುಸ್ಲಿಂ ಸಮಾಜವು ತಮ್ಮ ಹಕ್ಕುಗಳಿಗಾಗಿ ಸಂಘಟನೆ ಮತ್ತು ಹೊರಾಟಗಳನ್ನು ಜೀವಂತವಾಗಿಡುವುದು ಅತ್ಯಾವಶ್ಯಕವಾಗಿದೆ ಎಂದು ಕ. ರಾ. ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮುಸ್ಲಿಂ ಮುಖಂಡ ಸಯ್ಯದ್ ಮುಜಿಬುಲ್ಲ ತಿಳಿಸಿದ್ದಾರೆ

ಸಂಘ ಸಂಸ್ಥೆಗಳು ವೃತ್ತಿ ಕ್ಷೇತ್ರ ಹಾಗೂ ಉದ್ಯಮದಲ್ಲಿ ಯಶಸ್ಸು ಗಳಿಸಲು ಕೌಶಲ್ಯಗಳ ಪರಿಣತಿ ಮುಖ್ಯ : ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಮಾಜಿ ಅಧ್ಯಕ್ಷ ಯು.ಎಂ.ಶಿವರಾಜ್

ಇಮೇಜ್
ಶಿವಮೊಗ್ಗ: ಸಂಘ ಸಂಸ್ಥೆಗಳು ವೃತ್ತಿ ಕ್ಷೇತ್ರ ಹಾಗೂ ಉದ್ಯಮದಲ್ಲಿ ಯಶಸ್ಸು ಗಳಿಸಲು ಕೌಶಲ್ಯಗಳ ಪರಿಣತಿ ಮುಖ್ಯ ಎಂದು ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಮಾಜಿ ಅಧ್ಯಕ್ಷ ಯು.ಎಂ.ಶಿವರಾಜ್ ಹೇಳಿದರು. ಆಕಾಶ್ ಇನ್ ಹೋಟೆಲ್ ಸಭಾಂಗಣದಲ್ಲಿ ಸಹ್ಯಾದ್ರಿ ಚಿಟ್ಸ್ ಸಂಸ್ಥೆಯ ಮೂರು ಜಿಲ್ಲೆಗಳ ಉದ್ಯೋಗಿಗಳಿಗೆ ಹಮ್ಮಿಕೊಳ್ಳಲಾದ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಉದ್ಯೋಗಿಗಳಲ್ಲಿ ಸಾಕಷ್ಟು ಕೌಶಲ್ಯದ ಕೊರತೆ ಇದೆ. ಪ್ರತಿಯೊಂದು ವ್ಯಾಪಾರ, ಉದ್ಯಮ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಬಹಳ ಅಗತ್ಯವಾಗಿ ಕೌಶಲ್ಯ ಬೇಕಾಗಿದೆ ಎಂದು ತಿಳಿಸಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ವಿದ್ಯಾವಂತ ಉದ್ಯೋಗ ಆಕಾಂಕ್ಷಿಗಳಿಗೆ ಕೌಶಲ್ಯದ ಕೊರತೆ ಇರುವುದರಿಂದ ಒಳ್ಳೆಯ ಕಂಪನಿಗಳಲ್ಲಿ ಉದ್ಯೋಗ ವಂಚಿತರಾಗುತ್ತಿದ್ದಾರೆ. ಎಷ್ಟೇ ವಿದ್ಯಾವಂತರಾದರೂ ಸಹ ಕೌಶಲ್ಯರ ಅಗತ್ಯತೆ ತುಂಬಾ ಇದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯ ತುಂಬಾ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. ತರಬೇತುದಾರ ಶ್ರೀಶ ಮಾತನಾಡಿ, ಪ್ರಾರಂಭದಲ್ಲಿ ಕಾರ್ಮಿಕರಿಗೆ, ಉದ್ಯೋಗಿಗಳಿಗೆ, ಕೆಲಸಗಾರರಿಗೆ ಸಕಾಲದಲ್ಲಿ ಕೌಶಲ್ಯನ ತರಬೇತಿ ನೀಡಬೇಕಾಗಿದೆ. ಇಂದು ಕೇಂದ್ರ ಸರ್ಕಾರದ ವತಿಯಿಂದ ಕೌಶಲ್ಯ ತರಬೇತಿಗೆ ಅತಿ ಹೆಚ್ಚು ಒತ್ತುಕೊಟ್ಟಿದ್ದಾರೆ. ತಂತ್ರಜ್ಞಾನ ಬದಲಾದ ಹಾಗೆ ನಾವು ನಮ್ಮ ಕಾರ್ಯಕ್ಷೇತ್ರದಲ್ಲಿ ಕೌಶಲ್ಯ ತರಬೇತಿ ...

'ಮಾರ್ನಾಮಿಬೈಲು ಕಿರುಚಿತ್ರೋತ್ಸವ' ಮೊದಲ ಪೋಸ್ಟರ್ ಬಿಡುಗಡೆಗೊಳಿಸಿದ ಮಾಜೀ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ

ಇಮೇಜ್
  ಶಿವಮೊಗ್ಗ : ನಗರದ ಪತ್ರಿಕಾ ಭವನದಲ್ಲಿ ಗಾರಾ ಗ್ರೂಪ್ ಸಂಸ್ಥೆಯ ಮಾಧ್ಯಮ ವಿಭಾಗವಾದ ಸೂರ್ಯಗಗನ ಮ್ಯಾಗಜಿನ್ ಹಾಗೂ ಇತ್ಯಾದಿ ಪಾಕ್ಷಿಕ ಪತ್ರಿಕೆಗಳು ಆಯೋಜಿಸುತ್ತಿರುವ ಮಾರ್ನಾಮಿಬೈಲ್ ಕಿರುಚಿತ್ರೋತ್ಸವದ ಮೊದಲ ಪೋಸ್ಟರ್ ಮಾಜೀ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪನವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾರ್ನಾಮಿಬೈಲ್ ಕಿರುಚಿತ್ರೋತ್ಸವ ಸಾಂಸ್ಕೃತಿಕ ಹೆಜ್ಜೆಯಾಗಿದ್ದು ಕಾರ್ಯಕ್ರಮ ಯಶಸ್ವಿಯಾಗಿ ಜರುಗಲಿ ಎಂದು ಹಾರೈಸಿದರು. ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಆಯೋಜಕರಾದ ಗಾರಾ.ಶ್ರೀನಿವಾಸ್, ಅಚ್ಚೆ ಸಿನಿಮಾ ನಿರ್ದೇಶಕ ಯಶೋಧರ್, ಮಲೆನಾಡಿನ ಖಳನಟ ಶ್ರೀನಿವಾಸ್ ಶರ್ಮಾ, ಪತ್ರಕರ್ತರಾದ ದೇಶಾದ್ರಿ, ಬಹುಮುಖಿ ನವೀನ್ ತಲಾರಿ, ಕಿರುಚಿತ್ರ ನಿರ್ದೇಶಕ ನಿತಿನ್, ಕ್ರಿಯೇಟಿವ್ ಗ್ರೂಪ್ ಪರಮೇಶ್ವರ್, ಸಿವಿಲ್ ಇಂಜಿನಿಯರ್ ಭರತ್ ಗುತ್ತಿ, ಕರವೇ ಸ್ವಾಭಿಮಾನಿ ಬಣದ ಸಯ್ಯದ್ ಮುಜಿಬುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ತಾಯಿ ಎಂಬುದು ಅಮೃತಕ್ಕಿಂತ ಶ್ರೇಷ್ಠ ತಾಯಿಯ ಪ್ರೀತಿ ಎಲ್ಲರಿಗೂ ಸಿಗಲಿ

ಇಮೇಜ್
  ತಾಯಿ ಸಂತೋಷ ಕುಟುಂಬದ ಆಧಾರಶಿಲೆ ತಾಯಿ ಎಂಬುದು ಅಮೃತಕ್ಕಿಂತ ಶ್ರೇಷ್ಠ ತಾಯಿಯ ಪ್ರೀತಿ ಎಲ್ಲರಿಗೂ ಸಿಗಲಿ ಎಂದು    ನವಲೆ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ತಾಯಂದಿರ ದಿನಾಚರಣೆಯ ಅಂಗವಾಗಿ ಹಿರಿಯ ಮಾತೆಯರಿಗೆ ಹಮ್ಮಿಕೊಳ್ಳಲಾದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ರಾಜಯೋಗಿನಿ ಪ್ರಜಾ ಪಿತಾ  ಬ್ರಹ್ಮಕುಮಾರಿ  ಸ್ವಾತಿ ಅಕ್ಕನವರು  ಮಾತನಾಡಿದರು ತಾಯಿ ಎಂಬ ಶಬ್ದ ನಮ್ಮ ಜೀವನದ ಅತಿ ದೊಡ್ಡ ಶಕ್ತಿ ತಾಯಿಯ ಪ್ರೀತಿ ಮತ್ತು ಆಶೀರ್ವಾದ ಪ್ರಪಂಚದ ಯಾವ ಸಿರಿ ಸಂಪತ್ತಿಗೂ ಸರಿಸಮಾನವಾಗಿರುವುದಿಲ್ಲ ತಾಯಿಯನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದ ಅವರು ಅಮ್ಮನ ಪದದಲ್ಲಿ ದೈವತ್ವವಿದೆ ಅವಳು ನಮ್ಮ ಬಾಳಿನ ದಾರಿದೀಪ ಅವಳ ಋಣವನ್ನು ತೀರಿಸಲು ಸಾಧ್ಯವಿಲ್ಲ ಬದುಕಿನಲ್ಲಿ ಬರುವ ಕಷ್ಟಗಳನ್ನು ತಾನು ತನ್ನ ಮಡಿಲಿಗೆ ಹಾಕಿಕೊಂಡು ಮಕ್ಕಳಿಗೆ ಸುಂದರವಾದ ಬದುಕನ್ನು ರೂಪಿಸುವಲ್ಲಿ ತಾಯಿ ಪ್ರಮುಖ ಪಾತ್ರವನ್ನು ವಹಿಸಿದ್ದಾಳೆ ತಾಯಿಯ ಪ್ರೀತಿ ಮತ್ತು ತ್ಯಾಗಕ್ಕಾಗಿ ಪ್ರತಿಯಾಗಿ ನಾವು ಏನು ನೀಡಿದರು ಅದು ಕಡಿಮೆ ಅವಳ ಬಗ್ಗೆ ಗೌರವ ಹಾಗೂ ಕೃತಜ್ಞತಾ ಭಾವನೆಯನ್ನು ಇಟ್ಟುಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ನುಡಿದರು.ಇದೇ ಸಂದರ್ಭದಲ್ಲಿ 93  ವಸಂತಗಳನ್ನ ಕಳೆದ ಮಾತೆ ಲಲಿತಮ್ಮ   ಹಾಗೂ 77 ವಸಂತಗಳನ್ನ ಕಳೆದ ಮಾತೆ ವಿ...

ಕ್ರೀಡೆಗಳಿಂದ ಆತ್ಮಸ್ಥೈರ್ಯ ವೃದ್ಧಿ. ಹಾಗೂ ಜೀವನೋತ್ಸಾಹ ಮೂಡುತ್ತದೆ : ಎ ಎಸ್ ತಾರಾನಾಥ್

ಇಮೇಜ್
 ಕ್ರೀಡೆಗಳಿಂದ ಆತ್ಮಸ್ಥೈರ್ಯ ಹಾಗೂ ಜೀವನೋತ್ಸಾಹ ಮೂಡುತ್ತದೆ ಎಂದು ಶ್ರೀ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ  ಕೆ ಎಸ್ ತಾರಾನಾಥ್ ಅಭಿಮತ ವ್ಯಕ್ತಪಡಿಸಿದರು ಅವರು ಇಂದು ಶ್ರೀ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮದ ಆಚರಣೆ ಅಂಗವಾಗಿ ಬಸವೇಶ್ವರ ಕಾಲೇಜಿನ ಆವರಣದಲ್ಲಿ ಸಂಘದ ಸದಸ್ಯ ಮಹಿಳೆಯರಿಗೆ ಆಯೋಜಿಸಲಾದ ಕ್ರೀಡಾ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು ಒತ್ತಡದ ಪ್ರಪಂಚದಲ್ಲಿ ಇಂದು ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ತುಂಬಾ ಅಗತ್ಯವಾಗಿದೆ. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಶಕ್ತಿ ವೃದ್ಧಿಯಾಗುತ್ತದೆ ಹಾಗೆ ಇಂತಹ ಕ್ರೀಡೆಗಳಿಂದ ಪರಸ್ಪರರಲ್ಲಿ ಒಡನಾಟ ಹೆಚ್ಚುತ್ತದೆ ಜೊತೆಗೆ ಪರಿಚಯವೂ ಸಹ ಆಗುತ್ತದೆ ಇದರಿಂದ ಮಾನಸಿಕ ಖಿನ್ನತೆ ದೂರವಾಗುತ್ತದೆ ಆದ್ದರಿಂದ ಎಲ್ಲಾ ಸದಸ್ಯರು ಇಂತಹ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ನುಡಿದರು ಕಾರ್ಯಕ್ರಮದ ಸಂಚಾಲಕರು ಹಾಗೂ ನಿರ್ದೇಶಕರಗಳಾದ  ಶ್ರೀಮತಿ ಶಾಂತ ಆನಂದ್ ಹಾಗೂ ಅನಿತಾ ರವಿಶಂಕರ್ ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿ ಮಹಿಳೆಯರಿಗೆ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶಗಳನ್ನು ಕಲ್ಪಿಸಿದರು. ಕಾರ್ಯಕ್ರಮದಲ್ಲಿ  ನಿರ್ದೇಶಕರಾದ   ಕಾಯಕಯೋಗಿ ಬಿ ಚನ್ನಬಸಪ್ಪ ಎಂ ಆರ್ ಪ್ರಕಾಶ್ ಎಚ್‌ವಿ ಮರುಳೆ ಶ.  ಎಚ್ ಎಮ್ ಶಿವಾನಂದ್ ಕೆ ಸಿ ಪಾಲಾಕ್ಷಪ್ಪ. ಬಸವರಾಜ್ ಎಸ್ ಪಿ ಶಶಿಧರ್ ಚೆನ್ನ...

ಮಾನವ ಹಕ್ಕುಗಳ ನ್ಯಾಯ ಮಂಡಳಿ ವತಿಯಿಂದ ಕೆರೆಗಳ ರಕ್ಷಣೆ ಹಾಗೂ ಪ್ರಾಣಿ-ಪಕ್ಷಿಗಳ ಸಂರಕ್ಷಣೆಗೆ ಮನವಿ

ಇಮೇಜ್
  ಶಿವಮೊಗ್ಗ : ಜಿಲ್ಲೆಯಲ್ಲಿ ತೀವ್ರಗೊಂಡಿರುವ ಪ್ರದೇಶ  ಬಿಸಿಲಿನಿಂದ ಜಲಮೂಲಗಳು ಬತ್ತಿ ಹೋಗುತ್ತಿರುವ ಹಿನ್ನೆಲೆ, ಮೂಕ ಪ್ರಾಣಿ-ಪಕ್ಷಿಗಳ ರಕ್ಷಣೆಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಮಾನವ ಹಕ್ಕುಗಳ ನ್ಯಾಯ ಮಂಡಳಿ ಸಂಘಟನೆ  ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎನ್.ಎಂ  ತಡೆಗಟ್ಟಿದ್ದು, ಪರಿಸರ ಸಮತೋಲನ ಕದಡುವ ಮಟ್ಟಿಗೆ ಜಲಮೂಲಗಳು ನಾಶವಾಗುತ್ತಿರುವ ಆತಂಕದ ಬಗ್ಗೆ.  ಸಂಘಟನೆಯು ಮುಂದೆ ಹಲವು ಪ್ರಮುಖ ಬೇಡಿಕೆಗಳನ್ನು ಮಂಡಿಸಿದೆ.  ಶಿವಮೊಗ್ಗ ನಗರದ ನಂತರದೂರು, ಮಂಡ್ಲಿ, ಹರಕೆರೆ, ಸೋಮಿನಕೊಪ್ಪ, ಪುರದಾಳು, ಅನಾಪಿನಕಟ್ಟೆ ಹಾಗೂ ಅಲ್ಕೋಳ ಭಾಗದ ಕೆರೆಗಳನ್ನು ತಕ್ಷಣ ಸರ್ವೆ ನಡೆಸಿ  ಒತ್ತುವರಿಯಾಗಬೇಕು.  ಕೆರೆಗಳ ಹೂಳೆತ್ತುವ ಕಾಮಗಾರಿಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿದೆ.  ಅದೇ ರೀತಿ ಪ್ರಮುಖ ಜಲಮೂಲಗಳಿಗೆ ಕಾಲುವೆ ಅಥವಾ ಟ್ಯಾಂಕರ್ ಮೂಲಕ ನೀರು ತುಂಬಿಸಿ, ಬೇಸಿಗೆಯಲ್ಲಿ ನೀರಿಗಾಗಿ ಅಲೆದಾಡುತ್ತಿದೆ  ವನ್ಯ ಹಾಗೂ ಪಕ್ಷಿಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲು ಜೀವಿ ಎಂದು ಕೋರಲಾಗಿದೆ.  ಪ್ರಾಣಿ-ಪಕ್ಷಿಗಳಿಗಾಗಿ “ಜಲ ಕುಂಭ” ಯೋಜನೆ ಜಾರಿಗೊಳಿಸಿ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ನೀರು  ತೊಟ್ಟಿಗಳನ್ನು ಅಳ...

ನ್ಯಾಮತಿ ತಾಲ್ಲೂಕಿನಲ್ಲಿ ಕೆರೆ ಮಣ್ಣು ಅಕ್ರಮ ಸಾಗಣೆ ಆರೋಪ ಖಾಸಗಿ ಲೇಔಟ್ ನಿರ್ಮಾಣಕ್ಕೆ ಸರ್ಕಾರಿ ಕೆರೆ ಮಣ್ಣು ಬಳಕೆ?:

ಇಮೇಜ್
ದಾವಣಗೆರೆ ಜಿಲ್ಲೆ, ನ್ಯಾಮತಿ ತಾಲ್ಲೂಕಿನ ಬೆಳಗುತ್ತಿ ಹೋಬಳಿ ವ್ಯಾಪ್ತಿಯ ಮಚಗೊಂಡನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕೆರೆ ಮಣ್ಣನ್ನು ಅಕ್ರಮವಾಗಿ ತೆಗೆದು ಖಾಸಗಿ ಜಮೀನಿನಲ್ಲಿ ಲೇಔಟ್ ನಿರ್ಮಾಣ ಹಾಗೂ ಭೂ ಸಮತಟ್ಟುಗೊಳಿಸುವ ಕಾರ್ಯಕ್ಕೆ ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದೂರಿನ ಪ್ರಕಾರ, ಮಚಗೊಂಡನಹಳ್ಳಿ ಗ್ರಾಮದ ಸರ್ವೇ ನಂ.103 ರಲ್ಲಿರುವ ಸುಮಾರು 13 ಎಕರೆ ವಿಸ್ತೀರ್ಣದ ದೊಡ್ಡ ಕೆರೆ ಪ್ರದೇಶ ಮತ್ತು ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಮಣ್ಣು ತೆಗೆಯುವ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ. ಜೆಸಿಬಿ, ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಯಂತ್ರೋಪಕರಣಗಳನ್ನು ಬಳಸಿ ಕೆರೆ ಮಣ್ಣನ್ನು ಸಾಗಿಸಲಾಗುತ್ತಿದ್ದು, ಈ ಮಣ್ಣನ್ನು ಸರ್ವೇ ನಂ.97 ಸಂಬಂಧಿತ ಖಾಸಗಿ ಜಮೀನಿನಲ್ಲಿ ಸಂಗ್ರಹಿಸಿ ಲೇಔಟ್ ನಿರ್ಮಾಣಕ್ಕೆ ಬಳಸಲಾಗುತ್ತಿದೆ ಎಂಬ ಮಾಹಿತಿ ಗ್ರಾಮಸ್ಥರಿಂದ ಲಭ್ಯವಾಗಿದೆ. ಪ್ರಕರಣದ ಕುರಿತು ತಕ್ಷಣ ತನಿಖೆ ನಡೆಸುವಂತೆ ಗ್ರಾಮಸ್ಥರ ಒತ್ತಾಯವಾಗಿದೆ . ಪರಿಸರ ಹಾನಿ ಆತಂಕ ಈ ಅಕ್ರಮ ಚಟುವಟಿಕೆಯಿಂದ ಸರ್ಕಾರಿ ಆಸ್ತಿ ಹಾಗೂ ಕೆರೆ ಪರಿಸರ ಹಾನಿಯಾಗುತ್ತಿದೆ. ಭೂಗರ್ಭ ಜಲಮಟ್ಟ ಕುಸಿತ, ಪರಿಸರ ಅಸಮತೋಲನ ಮತ್ತು ಸರ್ಕಾರಕ್ಕೆ ರಾಜಸ್ವ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದರೆ . ಜೊತೆಗೆ ಭವಿಷ್ಯದಲ್ಲಿ ಅಕ್ರಮ ಲೇಔಟ್ ಮತ್ತು ಭೂ ಕಬಳಿಕೆ ಪ್ರಕರಣಗಳು ಹೆಚ್ಚುವ ಆತಂಕವೂ ವ್ಯಕ್ತವಾಗಿದೆ. ಗ್ರಾಮಸ್ಥರ ಪ್ರಮುಖ ಬೇಡಿಕೆಗಳು: 1....

ಆಗುಂಬೆ ಕಾಳಿಂಗ ಸರ್ಪ ಪ್ರಕರಣ: ಚಾರ್ಜ್‌ಶೀಟ್ ವಿಳಂಬಕ್ಕೆ ಪರಿಸರಾಸಕ್ತರ ಆಕ್ರೋಶ

ಇಮೇಜ್
ಶಿವಮೊಗ್ಗ: ಆಗುಂಬೆಯಲ್ಲಿ ಕಾಳಿಂಗ ಸರ್ಪ (King Cobra) ಶೋಷಣೆ ಪ್ರಕರಣ ರಾಜ್ಯದ ವನ್ಯಜೀವಿ ಪ್ರೇಮಿಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣವಾಗಿದೆ. ಈ ಸಂಬಂಧ ಆಗುಂಬೆಯ ಪಿ. ಗೌರಿಶಂಕರ್ ವಿರುದ್ಧ 2025ರ ಸೆಪ್ಟೆಂಬರ್ ತಿಂಗಳಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದರೂ, ಇಂದಿಗೂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾಗದಿರುವುದು ಪರಿಸರಾಸಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯ ತನಿಖಾ ಮಾಹಿತಿಯ ಪ್ರಕಾರ, ಅನಧಿಕೃತವಾಗಿ ಕಾಳಿಂಗ ಸರ್ಪ ಹಿಡಿದು ಶೋಷಣೆ ಮಾಡಿದ ವಿಡಿಯೋ ಆಧಾರದಲ್ಲಿ Wildlife Protection Act, 1972 ಅಡಿಯಲ್ಲಿ “ಬೇಟೆ” ಸಂಬಂಧಿತ ಪ್ರಕರಣ ದಾಖಲಾಗಿತ್ತು. ಈ ವೇಳೆ ಬಳಸಲಾಗಿದ್ದ ಹಾವು ಹಿಡಿಯುವ ಉಪಕರಣಗಳು ಹಾಗೂ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರ ಜೊತೆಗೆ ಅಕ್ರಮವಾಗಿ ಕಾಡು ಪ್ರದೇಶ ಪ್ರವೇಶಿಸಿದ ಆರೋಪದಡಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಪ್ರಶಾಂತ್ ಆಗುಂಬೆ ಸಹ ಆರೋಪಿ ಎಂದು ಹೇಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ‘ಹೊಟ್ಟು ನೊಣ’ ಜಾತಿಯ ಮರವನ್ನು ಕಡಿದು ದಾಸ್ತಾನು ಇಟ್ಟಿದ್ದ ಆರೋಪವೂ ದಾಖಲಾಗಿತ್ತು. ಈ ಮೂರು ಪ್ರಕರಣಗಳ ತನಿಖೆ ಪೂರ್ಣಗೊಂಡು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಬಾಕಿ ಇದೆ ಎನ್ನಲಾಗುತ್ತಿದೆ. ಆದರೆ ಪ್ರಕರಣ ದಾಖಲಾಗಿ ಹಲವು ತಿಂಗಳು ಕಳೆದರೂ ಚಾರ್ಜ್‌ಶೀಟ್ ಸಲ್ಲಿಕೆಯಾಗದಿರುವುದು ಸಾರ್ವಜನಿಕರಲ್ಲಿ ಹಲ...

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾಸಂಕೀರಣದಲ್ಲಿ ಉದ್ವಿಗ್ನ ವಾತಾವರಣ: ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಆರೋಪ

ಇಮೇಜ್
ಶಿವಮೊಗ್ಗ, ಮೇ 08: ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಸಂಕೀರಣದಲ್ಲಿ ಶುಕ್ರವಾರ ಸಂಜೆ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ ಎನ್ನಲಾಗಿದೆ. ಕ್ರೀಡಾಸಂಕೀರಣದ ಸಹಾಯಕ ನಿರ್ದೇಶಕರ ಆದೇಶದಂತೆ ಸದಸ್ಯತ್ವ ನವೀಕರಣ ಕುರಿತು ಹಲವು ಬಾರಿ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಮೇ 2, 2026 ಅನ್ನು ಅಂತಿಮ ದಿನಾಂಕವಾಗಿ ನಿಗದಿಪಡಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ, ಸದಸ್ಯತ್ವ ನವೀಕರಣ ಪ್ರಕ್ರಿಯೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಮಲೆನಾಡು ಸ್ವಿಮ್ಮಿಂಗ್ ಅಸೋಸಿಯೇಷನ್ ಸದಸ್ಯರು ಹಾಗೂ ಕಾರ್ಯದರ್ಶಿ ವಿಜಯ್ ಕುಮಾರ್ ಅವರ ಮಕ್ಕಳ ಪ್ರವೇಶಕ್ಕೆ ನಿಯಮಾನುಸಾರ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳಾದ ಶಿವು ಮತ್ತು ಸಚಿನ್ ಅವರೊಂದಿಗೆ ವಾಗ್ವಾದ ನಡೆದು, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಘಟನೆ ಕುರಿತು ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತಿದೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಜನನಾಯಕನ ಪಯಣ: ರಾಜಾಹುಲಿ ಬಿ.ಎಸ್. ಯಡಿಯೂರಪ್ಪರ ರಾಜಕೀಯ ಜೀವನದ ಅಪೂರ್ವ ಅಧ್ಯಾಯ

ಇಮೇಜ್
  ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತು ಮೂಡಿಸಿದ ನಾಯಕರಲ್ಲಿ ಬಿ.ಎಸ್. ಯಡಿಯೂರಪ್ಪ ಪ್ರಮುಖರು. ಸಾಮಾನ್ಯ ಕಾರ್ಯಕರ್ತನಾಗಿ ಆರಂಭವಾದ ಅವರ ರಾಜಕೀಯ ಪಯಣ, ರಾಜ್ಯದ ಅತ್ಯುನ್ನತ ಹುದ್ದೆಯಾದ ಮುಖ್ಯಮಂತ್ರಿಪದವಿವರೆಗೆ ಏರಿದದ್ದು ಅನೇಕ ಜನರಿಗೆ ಪ್ರೇರಣೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಮಣ್ಣಿನಲ್ಲಿ ಬೆಳೆದ ಯಡಿಯೂರಪ್ಪರು ರೈತಪರ, ಬಡವರಪರ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕನಾಗಿ ಹೆಸರುವಾಸಿಯಾಗಿದ್ದಾರೆ. ರಾಜಕೀಯದ ಏರುಪೇರು, ಸವಾಲುಗಳು, ಟೀಕೆಗಳು ಮತ್ತು ಹೋರಾಟಗಳ ನಡುವೆಯೂ ತಮ್ಮ ಸಂಘಟನಾ ಸಾಮರ್ಥ್ಯ ಹಾಗೂ ಜನಬಲದ ಮೂಲಕ ರಾಜ್ಯ ರಾಜಕೀಯದಲ್ಲಿ ಅಚಲ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಅಭಿವೃದ್ಧಿ ದೃಷ್ಟಿಕೋನ, ಆಡಳಿತ ಸಾಮರ್ಥ್ಯ ಹಾಗೂ ಜನಪರ ಯೋಜನೆಗಳ ಮೂಲಕ ರಾಜ್ಯದ ವಿವಿಧ ಭಾಗಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಯಡಿಯೂರಪ್ಪರು ಪಾತ್ರವಹಿಸಿದ್ದಾರೆ. ರೈತರ ಸಾಲಮನ್ನಾ, ಮೂಲಸೌಕರ್ಯ ಅಭಿವೃದ್ಧಿ, ಗ್ರಾಮೀಣ ಭಾಗಗಳ ಪ್ರಗತಿ ಹಾಗೂ ಸಾಮಾಜಿಕ ನ್ಯಾಯದ ಪರ ಕೆಲಸ ಮಾಡುವ ಮೂಲಕ ಜನಮನ ಗೆದ್ದಿದ್ದಾರೆ. ಶಿವಮೊಗ್ಗ ಜಿಲ್ಲೆಯೊಂದಿಗೆ ಅವರ ಬಾಂಧವ್ಯ ಅತ್ಯಂತ ಗಾಢವಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ ಅವರು, ಅನೇಕ ಮೂಲಸೌಕರ್ಯ ಯೋಜನೆಗಳು, ರಸ್ತೆ ಕಾಮಗಾರಿಗಳು ಹಾಗೂ ಸಾರ್ವಜನಿಕ ಸೇವಾ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಅವರ ಅಭಿಮಾನಿ ಬಳಗ ದಿನೇ ದಿನ...