ಭವ್ಯೋನ್ನತಿ" ಬೆಳವಣಿಗೆ ಮತ್ತು ಅಭಿವೃದ್ಧಿ ಸಮ್ಮೇಳನ : ಜೆಸಿಐ ಭಾರತ
. ಜೆಸಿಐ ಭಾರತ ವಲಯ 24ರ ವಲಯ ಮಟ್ಟದ ಕಾರ್ಯಕ್ರಮ, ಬೆಳವಣಿಗೆ ಮತ್ತು ಅಭಿವೃದ್ಧಿ ಸಮ್ಮೇಳನ (ಗ್ರೌತ್ ಅಂಡ್ ಡೆವಲಪ್ಮೆಂಟ್ ಕಾನ್ಫರೆನ್ಸ್ ) ನಗರದ ಅಡಿಕೆ ಮಂಡಿ ಕ್ಲಬ್ ನಲ್ಲಿ ಆತಿಥ್ಯ ಘಟಕ ಜೆಸಿಐ ಹೊಸನಗರ ಡೈಮಂಡ್ ಶನಿವಾರ 3ನೇ ತಾರೀಖು ಮೇ ತಿಂಗಳ ಶಿವಮೊಗ್ಗದ ಅಡಿಕೆ ಮಂಡಿ ಕ್ಲಬ್ ನಲ್ಲಿ ಆಯೋಜಿಸುತ್ತಿದೆ. ಕಾರ್ಯಕ್ರಮದ ವಿಶೇಷ , ಮುಖ್ಯ ಆಕರ್ಷಣೆ ಜೆಫ್ಎಸ್ ರವಿಶಂಕರ್ ಅವರು. ಜೆಸಿಐ ಭಾರತದ ಆಡಳಿತ ಮಂಡಳಿಯ ಛೇರ್ಮನ್. ಜೆಸಿಐ ಭಾರತದಲ್ಲಿ ಸಾಕಷ್ಟು ನಾಯಕರನ್ನು ಸಿದ್ಧಪಡಿಸಿರುತ್ತಾರೆ. ಜೆಸಿಐ ಭಾರತದ ಭೀಷ್ಮ ಎಂದರೆ ತಪ್ಪಾಗಲಾರದು. ಬೆಳವಣಿಗೆ ಮತ್ತು ಅಭಿವೃದ್ಧಿ ಎಂದರೆ, ಘಟಕಗಳಲ್ಲಿ ಸದಸ್ಯರ ನೋಂದಣಿ ಹೆಚ್ಚಿಸಿಕೊಳ್ಳುವುದು. ಜೆಸಿಗಳಿಂದ ನಾನ್ ಜಿಸಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅನುದಾನ ಕ್ರೂಡಿಕರ್ಣ ಮಾಡುವುದು. ಈ ಅನುದಾನವನ್ನು ನೇರವಾಗಿ ಜೆಸಿಐ ಭಾರತದ ಕಛೇರಿಯ ಖಾತೆಗೆ ಹಾಕಿ, ಅಲ್ಲಿಂದ ವಿದ್ಯಾರ್ಥಿಗಳ ಖಾತೆಗೆ ವಿದ್ಯಾರ್ಥಿವೇತನ ರೂಪದಲ್ಲಿ ಅನುದಾನ ಬಳಕೆಯಾಗುತ್ತದೆ. ಒಂದು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯುವುದು ಬೆಳವಣಿಗೆಯಾಗಿದೆ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸುವುದು ಜೆಸಿಐ ಭಾರತದ ಅಭಿವೃದ್ಧಿಯಾಗಿದೆ. ಹೆನ್ರಿ ಗಿಸೆನ್...