ಪೋಸ್ಟ್‌ಗಳು

ಮಾರ್ಚ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕ್ರಿಯೆಟಿವ್ ಬ್ರೈನ್ ಅಕಾಡೆಮಿ ಶಿಬಿರದಲ್ಲಿ ಆಹಾರ ಮೇಳ : ಮಕ್ಕಳಿಂದ ಖಾದ್ಯಗಳ ವ್ಯಾಪಾರ ಬಲು ಜೋರು

ಇಮೇಜ್
  ಮಕ್ಕಳ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಪ್ರಾರಂಭವಾಗಿದೆ. ಮಕ್ಕಳನ್ನು ಈ ಬೇಸಿಗೆಯಲ್ಲಿ ಆ್ಯಕ್ಟಿವ್ ಆಗಿರಿಸಲು ಎಲ್ಲೆಡೆ ಬೇಸಿಗೆ ಶಿಬಿರಗಳು ಪ್ರಾರಂಭವಾಗಿವೆ. ಅದರಂತೆ ಗೋಪಾಳದ ವನಸಿರಿ ಪಾಕ್೯ ಹತ್ತಿರದಲ್ಲಿರುವ ಕ್ರಿಯೇಟಿವ್ ಬ್ರೈನ್ ಅಕಾಡೆಮಿ ವತಿಯಿಂದ ಪ್ರಪ್ರಥಮ ಬಾರಿಗೆ 2025ರ ಮಾಚ್೯ 20ರಿಂದ ಮೊದಲ ಬ್ಯಾಚ್ ಆರಂಭವಾಗಿದ್ದು, ಪ್ರತಿನಿತ್ಯವೂ ಮಕ್ಕಳಿಗೆ ಭಗವದ್ಗೀತೆ, ನೃತ್ಯ, ನಾಟಕ, ಪೇಂಟಿಂಗ್, ಕ್ರಾಫ್ಟ್ ನ ಜೊತೆಜೊತೆಗೆ ಮಕ್ಕಳ ಬುದ್ಧಿ ಚುರುಕುಗೊಳಿಸುವ ಚಟುವಟಿಕೆಗಳನ್ನು ಮಾಡಿಸಲಾಗುತ್ತಿದೆ.  ಶಿಬಿರವು ಇದಷ್ಟಕ್ಕೆ ಸೀಮಿತವಾಗಿರದೇ, ಇಂದು ಶಿಬಿರದಲ್ಲಿ ವ್ಯಾಪಾರ ವ್ಯವಹಾರದ, ನಗದು ಚಟುವಟಿಕೆಗಳನ್ನು ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಆಹಾರ ಮೇಳ ಆಯೋಜಿಸಿದ್ದು ವಿಶೇಷ. ಮನೆಯಲ್ಲಿ ಪೋಷಕರು ತಯಾರಿಸಿದ ರುಚಿ-ಶುಚಿಯಾದ ರೊಟ್ಟಿ-ಪಲ್ಯ, ಪಲಾವ್, ಜಾಮೂನು, ಗೋಲಿಬಜೆ, ಫ್ರೈಡ್ ರೈಸ್, ಮಸಾಲ ಮಂಡಕ್ಕಿ, ಪಕೋಡ ಹೀಗೆ ಹಲವು ಖಾದ್ಯಗಳನ್ನು ಅತಿ‌ ದರದಲ್ಲಿ ಮಕ್ಕಳು ವ್ಯಾಪಾರ ಮಾಡಿ ಎಲ್ಲರ ಗಮನ ಸೆಳೆದರು. ನಗುಮುಖದಿಂದ ಉಣಬಡಿಸುವ ಮಕ್ಕಳ ಕೈಯಲ್ಲಿ ಖಾದ್ಯಗಳು ಅದರ ರುಚಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದು, ಬಂದಂತಹ ಪೋಷಕರು ಮಕ್ಕಳ ಬಳಿ ಖಾದ್ಯಗಳನ್ನು ಹಣ ನೀಡಿ ಕೊಂಡು ಭಕ್ಷ್ಯಗಳನ್ನು ಸವಿದರು. ಈ ಮೂಲಕ ಶಿಬಿರದಲ್ಲಿ ಮಕ್ಕಳಿಗೆ ಮಾರುಕಟ್ಟೆಯ ವ್ಯವಹಾರದ ಜ್ಞಾನ‌ ನೀಡಲಾಯಿತು. ಹೀಗೆ ಮೊದಲ ಪ್ರಯತ್ನದಲ್ಲೇ ಕ್ರಿಯೇಟಿವ್ ಬ...

ಕೊಡಗಿನಲ್ಕಿ ಭೀಕರ ಹತ್ಯೆ

ಇಮೇಜ್
 *ಕೊಡಗಿನಲ್ಕಿ ಭೀಕರ ಹತ್ಯೆ.*   *ಒಂದೇ ಕುಟುಂಬದ ನಾಲ್ಕರ ಕೊಲೆ.*   *ಬೆಚ್ಚಿ ಬಿಳಿಸಿದ ಹತ್ಯಾ ಕಾಂಡ.* ಕತ್ತಿಯಿಂದ ಕಡಿದು ನಾಲ್ವರ ಭರ್ಬರ ಹತ್ಯೆ. ಕರಿಯ, ಗೌರಿ, ನಾಗಿ,  6 ವರ್ಷದ ಕಾವೇರಿ ಹತ್ಯೆಗೀಡಾದವರು. ಆರೋಪಿ ಗಿರೀಶ್ ನಿಂದ ನಡೆದ ಭೀಕರ ಕೃತ್ಯ  ಪೊನ್ನಂಪೇಟೆ ತಾಲ್ಲೂಕಿನ ಬೇಗೂರು,  ಗ್ರಾಮದಲ್ಲಿ ನಡೆದ ಘಟನೆ. ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರ ಭೇಟಿ ಪರಿಶೀಲನೆ, ನಾಲ್ವರ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಜೆಸಿಐ ಕಂಪ್ಲಿ ಸೋನಾದಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಗೆ ಚಾಲನೆ

ಇಮೇಜ್
 ಕಂಪ್ಲಿ.ಮಾ.27:ಪುರಸಭೆ ಮುಂಭಾಗದಲ್ಲಿ ಜೆಸಿಐ ಕಂಪ್ಲಿ ಸೋನಾದಿಂದ ಗುರುವಾರ ಬೇಸಿಗೆಯ ಕುಡಿವ ನೀರಿನ ಅರವಟ್ಟಿಗೆ ಆರಂಭಗೊಂಡಿತು. ಪೊಲೀಸ್ ಉಪನಿರೀಕ್ಷಕ ಅವಿನಾಶ್ ಕಾಂಬಳೆ ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸುವ ಮೂಲಕ ನೀರಿನ ಅರವಟ್ಟಿಗೆಗೆ ಚಾಲನೆ ನೀಡಿ, ನೀರು ಅಮೂಲ್ಯವಾಗಿದ್ದು ವ್ಯರ್ಥಮಾಡಬಾರದು. ಶುದ್ಧ ಕುಡಿಯುವ ನೀರನ್ನು ಜನರಿಗೆ ನೀಡುವಲ್ಲಿ ಮುತುವರ್ಜಿವಹಿಸಬೇಕು ಎಂದರು. ಜೆಸಿಐ ಕಂಪ್ಲಿಸೋನಾದ ಅಧ್ಯಕ್ಷ ಬಿ.ರಸೂಲ್ ಮಾತನಾಡಿ, ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು ದಾರಿಹೋಕರ ಅನುಕೂಲಕ್ಕಾಗಿ ನೀರಿನ ಅರವಟ್ಟಿಗೆ ಆರಂಭಿಸಿದೆ. ಸಾರ್ವಜನಿಕರು ಬೇಸಿಗೆಯಲ್ಲಿ ಬಾಯಾರಿಕೆ ಆಗದಿದ್ದರೂ ಪದೇ ಪದೇ ನೀರು ಅಥವಾ ಹಣ್ಣಿನ ರಸಗಳನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕಿದೆ. ಬೇಸಿಗೆಯಲ್ಲಿ ಮೈಬೆವರಿದಷ್ಟು ಒಳ್ಳೆಯದು. ಆದಷ್ಟು ನೈಸರ್ಗಿಕ ಜ್ಯೂಸ್‌ಗಳನ್ನು ಹೆಚ್ಚಾಗಿ ಸೇವಿಸಿ. ಕಲ್ಲಂಗಡಿ,ಕರಬೂಜ,ಕಿತ್ತಳೆ,ದ್ರಾಕ್ಷಿ, ಅನಾನಾಸ್, ಸೌತೆಕಾಯಿ,ಎಳನೀರು ಸವಿಯುವುದು, ಮನೆಯಲ್ಲಿಯೇ ಸಿದ್ದಪ ಡಿಸಿದ ನಿಂಬೆಹಣ್ಣಿನ ಶರಬತ್ತು. ಮಜ್ಜಿಗೆ ಸೇರಿದಂತೆ ಹಣ್ಣಿನ ಪಾನೀಯಗಳಿಗೆ ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ.ಮಾರ್ಚ್,ಏಪ್ರಿಲ್,ಮೇ ತಿಂಗಳ ಅಂತ್ಯದವರೆಗೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಪ್ರತಿಯೊಬ್ಬರು 20 ನಿಮಿಷಕ್ಕೊಮ್ಮೆ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು ನೀರಿನ ಅರವಟ್ಟಿಗೆ ಜನತೆ ಸದುಪಯೋಗಪಡಿಸಿಕೊಳ್ಳಬೇ...

ಜೆಸಿಐ ಭಾರತ ವಲಯ 24 ರಿಂದ ಅಧ್ಯಕ್ಷತೆ ಮತ್ತು ಸಂಸದೀಯ ವಿಧಾನ ತರಬೇತಿ

ಇಮೇಜ್
ಅಧ್ಯಕ್ಷತೆ ಮತ್ತು ಸಂಸದೀಯ ವಿಧಾನ , ವಲಯ ಮಟ್ಟದ ತರಬೇತಿಯನ್ನು ಜೆಸಿಐ ಭಾರತ ವಲಯ 24 ಆಯೋಜಿಸಿದ್ದು. ಜೆಸಿಐ ಶಿವಮೊಗ್ಗ ಶರಾವತಿ ಆತಿಥ್ಯ ವಯಿಸುತ್ತಿದೆ.  ರಾಷ್ಟೀಯ ತರಬೇತುದಾರ ಜೆಸಿಐ ರಾಘವೇಂದ್ರ ಹೊಳ್ಳ, ಸಹ ತರಬೇತುದಾರ ಜೆಸಿ ಮಲ್ಲಿಕಾರ್ಜುನ್ ಅವರು , ವಲಯ ಉಪಾಧ್ಯಕ್ಷ ಜೆಸಿ ತ್ಯಾಗರಾಜನ್ ಅವರ ಅಧ್ಯಕ್ಷತೆಯಲ್ಲಿ ಜೆಸಿಐ ಭಾರತ ವಲಯ 24ರ ಅಧ್ಯಕ್ಷರಾದ ಜೆಸಿಐ ಸೆನೆಟರ್ ಸಿಎ ಗೌರೀಶ್ ಭಾರ್ಗವ ಅವರ ಮಾರ್ಗದರ್ಶನದಲ್ಲಿ, ವಲಯ ನಿರ್ದೇಶಕಿ ತರಬೇತಿ ವಿಭಾಗ ಜೆಸಿ ರಾಜೇಶ್ವರಿ ಹರಿಹರ ಹಾಗೂ ಜೆಸಿಐ ಶಿವಮೊಗ್ಗ ಶರಾವತಿಯ ಅಧ್ಯಕ್ಷರಾದ ಜೆಸಿ ವಿನೋದ್ ಅವರ ಉಪಸ್ಥಿತಿಯಲ್ಲಿ, ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು.  ರಾಜ್ಯದ ಬೇರೆ ಬೇರೆ ಊರುಗಳಿಂದ ನೂರಾರು ಸಂಖ್ಯೆಯಲ್ಲಿ ಜೆಸಿಐ ಸದಸ್ಯರು ಆಗಮಿಸುತ್ತಿದ್ದು, ಒಂದು ದಿನದ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆಯಲಿದ್ದಾರೆ. ಈ ತರಬೇತಿಯನ್ನು ಶಿವಮೊಗ್ಗ ನಗರದ ಹೋಟೆಲ್ ರಾಯಲ್ ಆರ್ಕಿಡ್ ನಲ್ಲಿ ಆಯೋಜಿಸಲಾಗಿದೆ. ಭಾರತದ ಯಶಸ್ವಿ ನಾಯಕರಿಗೆ ಈ ತರಬೇತಿ ಅತ್ಯಂತ ಅಮೂಲ್ಯವಾದ ತರಬೇತಿಯಾಗಿದೆ. ಅಧ್ಯಕ್ಷತೆ ಮತ್ತು ಸಂಸದೀಯ ವಿಧಾನ ಪ್ರತಿಯೊಂದು ಸಂಘ ಸಂಸ್ಥೆಯಲ್ಲೂ ಗ್ರಾಮ ಪಂಚಾಯಿತಿಯಿಂದ ಲೋಕಸಭೆಯ ವರೆಗೂ ತಿಳಿಯುವುದು ಕಲಿಯುವುದು ಅವಶ್ಯಕವಾಗಿದೆ. ಜೆಸಿಐ ಭಾರತ ವಲಯ 24 ರ ಅಧ್ಯಕ್ಷರಾದ ಜೆಸಿಐ ಸೆನೆಟರ್ ಸಿಎ ಗೌರೀಶ್ ಭಾರ್ಗವ ಅವರು ತಿಳಿಸಿರುತ್ತಾರೆ .

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಲೋಕೋಪಯೋಗಿ ಸಚಿವರಾದ ಶ್ರಿ ಸತೀಶ್ ಜಾರಕಿಹೊಳಿ ಅವರಿಗೆ ಡಾಕ್ಟರೇಟ್‌ ನೀಡಿ ಗೌರವಿಸಿದೆ.

ಇಮೇಜ್
 ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ  ಲೋಕೋಪಯೋಗಿ ಸಚಿವರಾದ ಶ್ರಿ ಸತೀಶ್ ಜಾರಕಿಹೊಳಿ ಅವರಿಗೆ ಡಾಕ್ಟರೇಟ್‌ ನೀಡಿ ಗೌರವಿಸಿದೆ.

ಸುವರ್ಣ ಸಾಂಸ್ಕೃತಿಕ ಭವನದಲ್ಲಿ ರಂಗ ಚಿತ್ತಾರ-ದಕ್ಷಿಣಾಧೀಶ್ವರಿ ಕೆಳದಿ ರಾಣಿ ಚೆನ್ನಮ್ಮ ನಾಟಕ ಪ್ರದರ್ಶನ

ಇಮೇಜ್
  ಸುವರ್ಣ ಸಾಂಸ್ಕೃತಿಕ ಭವನದಲ್ಲಿ ರಂಗ ಚಿತ್ತಾರ-ದಕ್ಷಿಣಾಧೀಶ್ವರಿ ಕೆಳದಿ ರಾಣಿ ಚೆನ್ನಮ್ಮ ನಾಟಕ ಪ್ರದರ್ಶನ ಶಿವಮೊಗ್ಗ : ಗಾರಾ ಫೌಂಡೇಶನ್, ಕ್ರಿಯೇಟಿವ್ ಗ್ರೂಪ್, ಭೂಮಿ ಸಂಸ್ಥೆಯ ಸಹಯೋಗದಲ್ಲಿ ರಂಗ ಚಿತ್ತಾರ ಎನ್ನುವ ರಂಗ ಕಾರ್ಯಕ್ರಮವನ್ನು ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದೆ, ಇದೊಂದು ರಂಗಕರ್ಮಿಗಳ ಉತ್ತೇಜನಕ್ಕಾಗಿ ಆಯೋಜಿಸಲಾಗಿದ್ದು, ರಂಗಗೀತೆ, ಹತ್ತು ಜನ ಕಲಾವಿದರಿಗೆ ಮಲೆನಾಡು ಕಲಾ ಕೌಸ್ತುಭ ಪ್ರಶಸ್ತಿ ಮತ್ತು ಗೌರವ ಸನ್ಮಾನ ಇರುತ್ತದೆ, ಇದೇ ತಿಂಗಳು ಬಿಡುಗಡೆಯಾಗಲಿರುವ ದಾಸರಹಳ್ಳಿ ಕನ್ನಡ ಚಲನಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಸಿನಿಮಾ ಯಶಸ್ವಿ ಪ್ರದರ್ಶನಕ್ಕೆ ಹಾರೈಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ,  ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಆಯೋಜಕರು ನಾಳೆ ಶನಿವಾರ ಸಂಜೆ ೫.೩೦ ರಿಂದ ೯ ರವರೆಗೆ ರಂಗ ಚಿತ್ತಾರ ನಡೆಯಲಿದ್ದು ಈಗಾಗಲೇ ಯಶಸ್ವಿ ಪ್ರದರ್ಶನ ಮಾಡಿರುವ ಹಾಗೂ ಜನ ಮೆಚ್ಚುಗೆ ಗಳಿಸಿರುವ ದಕ್ಷಿಣಾಧೀಶ್ವರಿ ಕೆಳದಿ ರಾಣಿ ಚೆನ್ನಮ್ಮ ನಾಟಕದಲ್ಲಿ ಬರುವ ಕೆಳದಿ ರಾಣಿ ಚೆನ್ನಮ್ಮ ಪಾತ್ರವನ್ನು ಬಹುಮುಖಿ ಪ್ರತಿಭೆ ಲಕ್ಷ್ಮೀಯವರು ನಿರ್ವಹಿಸಲಿದ್ದಾರೆ, ರಂಗಕರ್ಮಿ ಗಣೇಶ್ ಕೆಂಚಾನಲ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಐತಿಹಾಸಿಕ ನಾಟಕ ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿದೆ ಎಂದು ತಿಳಿಸಿದರು    ಈ ನಾಟಕದ ವೀಕ್ಷಣೆಗೆ ಬರುವ ಕಲಾಸಕ್...

ಕರ್ನಾಟಕ ರಾಜ್ಯ ಸರ್ಕಾರದ ಬೃಹತ್ ಯೋಜನೆಯಾದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಪ್ರಥಮ ಹಂತದ ಪ್ರತಿಭಟನೆ ಇಂದು ಶಿವಮೊಗ್ಗದಲ್ಲಿ ನಡೆಯಿತು

ಇಮೇಜ್
  ಕರ್ನಾಟಕ ರಾಜ್ಯ ಸರ್ಕಾರದ ಬೃಹತ್ ಯೋಜನೆಯಾದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಪ್ರಥಮ ಹಂತದ ಪ್ರತಿಭಟನೆ ಇಂದು ಶಿವಮೊಗ್ಗದಲ್ಲಿ ನಡೆಯಿತು  ಶಿವಮೊಗ್ಗದಲ್ಲಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಮುಂದುವರಿಸಲು ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪರಿಸರ ಪ್ರೇಮಿಗಳು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಯೋಜನೆ ರದ್ದುಗೊಳಿಸುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಗಮನಾರ್ಹವಾಗಿ, ಕಾಲೇಜು ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರು ಪ್ರತಿಭಟನಾಕಾರರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ. ಆದರೆ, ಮಲೆನಾಡಿನ ನಾಗರೀಕರು, ಕನ್ನಡಪರ ಸಂಘಟನೆಗಳು, ಕೇವಲ ಫೋಟೋ ಪ್ರಚರಗಳಿಗೆ ಸೀಮಿತವಾಗಿರುವ ಸ್ವಯಂ ಘೋಷಿತ ಸ್ವಯಂಸೇವಕರು, ಭಾಗವಹಿಸದಿರುವುದು ಆತಂಕಕ್ಕೆ ಕಾರಣವಾಗಿತ್ತು. ಈ ಹಿಂದೆ 2019 ಜುಲೈ 10 ರಲ್ಲಿ ಶಿವಮೊಗ್ಗದ ತಾಲೂಕಿನಾದ್ಯಂತ ಸಂಘ ಸಂಸ್ಥೆಗಳ, ವಿದ್ಯಾರ್ಥಿಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಶರಾವತಿ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಇಂದು ನಡೆದ ಪ್ರತಿಭಟನೆಯು ಸುದೀರ್ಘ ಪ್ರಯತ್ನದ ಆರಂಭವನ್ನು ಸೂಚಿಸುತ್ತದೆ.

ಶರಾವತಿ ಭೂಗತ ವಿದ್ಯುತ್ ಯೋಜನೆ ಕೈಬಿಡಿ : ಡಿ ಎಸ್ ಅರುಣ್

ಇಮೇಜ್
  ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಯೋಜನೆ ಜಾರಿಗೆ ತನ್ನಿ : ಡಿ.ಎಸ್.ಅರುಣ್ ಶಿವಮೊಗ್ಗ : ರಾಜ್ಯ ಸರ್ಕಾರ ಕೈಗೆತ್ತಿಗೊಳ್ಳುತ್ತಿರುವ ಶರಾವತಿ ಭೂಗತ ವಿದ್ಯುತ್ ಯೋಜನೆಯಿಂದ ಸುಮಾರು ೩೫೦ ಎಕರೆ ಪಶ್ಚಿಮಘಟ್ಟದ ಅರಣ್ಯ ನಾಶ ಆಗಲಿದೆ ಎಂದು ಶಾಸಕ ಡಿ.ಎಸ್.ಅರುಣ್ ಸರ್ಕಾರದ ಗಮನಕ್ಕೆ ತಂದರು. ವಿಧಾನ ಪರಿಷತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ಥಾಪಿಸಿದ ಅವರು, ಈ ಯೋಜನೆಯಿಂದ ಶರಾವತಿ ಅಭಯಾರಣ್ಯದಲ್ಲಿನ ಸಸ್ಯ ಸಂಪತ್ತು, ವಿವಿಧ ಪ್ರಭೇದಗಳು, ಅಳಿವಿನ ಅಂಚಿನ ಪ್ರಾಣಿಗಳಿಗೂ ಕುತ್ತು ಬರಲಿದೆ ಅಲ್ಲದೇ ಈ ಯೋಜನೆಗೆ ವ್ಯಾಪಕ ವಿರೋಧವೂ ಇದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪಕ್ಕದ ತಮಿಳುನಾಡಿನ ರಾಜ್ಯ ಸರ್ಕಾರ ಬೇಡಿಕೆ ಸಮಯದಲ್ಲಿ ಬೇಕಾಗುವ ವಿದ್ಯುತ್ ಅನ್ನು ಸಂಗ್ರಹಿಸಿಟ್ಟು ಸರಬರಾಜು ಮಾಡಲು ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್( ಬಿಇಎಸ್‌ಎಸ್ ) ಯೋಜನೆ ಎಂದನ್ನು ರೂಪಿಸಿದ್ದು, ಕೇಂದ್ರ ಇಂಧನ ಇಲಾಖೆ ಇದಕ್ಕೆ ಶೇ.೩೦ರಷ್ಟು ಧನ ಸಹಾಯ ಮಾಡುತ್ತಿದೆ ಎಂಬ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತಂದರು.  ಈ ಯೋಜನೆಯು ಸೌರಶಕ್ತಿ ಮತ್ತು ಗಾಳಿಯ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ ೫೦೦ ರಿಂದ೧೦೦೦ ಮೆಗಾ ವ್ಯಾಟ್ ಸಾಮರ್ಥ್ಯದ ಬ್ಯಾಟರಿಗಳನ್ನು ವಿವಿಧ ಸಂಗ್ರಹ ಘಟಕಗಳಲ್ಲಿ ಶೇಖರಿಸಿ, ಹೆಚ್ಚು ಬೇಡಿಕೆ ಸಮಯದಲ್ಲಿ ಪೂರೈಕೆ ಮಾಡಲಾಗುತ್ತಿದೆ ಹಾಗೂ ಇದರಿಂದ ವಿದ್ಯುತ್ ಖರೀದಿ ವೆಚ್ಚ ಉಳಿತಾಯವಾಗುತ್ತದೆ ಎಂದು ...

"ಜೆಸಿ ಸಿಂಚನಾಗೆ ಎನ್ ಎಸ್ ಎಸ್ ರಾಜ್ಯ ಪ್ರಶಸ್ತಿ "

ಇಮೇಜ್
"ಜೆಸಿ ಸಿಂಚನಾಗೆ ಎನ್ ಎಸ್ ಎಸ್ ರಾಜ್ಯ ಪ್ರಶಸ್ತಿ " ನಗರದ ಹುಲಿ ಮತ್ತು ಸಿಂಹಧಾಮದಲ್ಲಿ ಶಿಕ್ಷಣಾಧಿಕಾರಿಗಳಾಗಿ ಕಾರ್ಯವಹಿಸುತ್ತಿರುವ ಕುಮಾರಿ ಜೆಸಿ ಸಿಂಚನರವರಿಗೆ ಎನ್ ಎಸ್ ಎಸ್ ರಾಜ್ಯ ಪ್ರಶಸ್ತಿ " ಲಭಿಸಿದೆ ,ರಾಜ್ಯ ಸರ್ಕಾರ,ರಾಜ್ಯ ಎನ್ಎಸ್ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಜಭವನದಲ್ಲಿ ಆಯೋಜಿಸಿದ್ದ ರಾಜ್ಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು 2022-23 ಸಾಲಿನ ಎನ್ ಎಸ್ ಎಸ್ ಅತ್ಯುತ್ತಮ ಸ್ವಯಂ ಸೇವಕಿ ರಾಜ್ಯ ಪ್ರಶಸ್ತಿಯನ್ನು ಜೆಸಿ ಸಿಂಚನಾರಿಗೆ ನೀಡಿ ಗೌರವಿಸಿರುತ್ತಾರೆ.. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಡಾ. ಕೆ. ಗೋವಿಂದರಾಜು, ಮಾನ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ರಂದೀಪ್ ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಚೇತನ್‌ ಆರ್‌, ರಾಜ್ಯ ಎನ್‌ಎಸ್‌ಎಸ್‌ ಅಧಿಕಾರಿಗಳಾದ ಡಾ. ಪ್ರತಾಪ್‌ ಲಿಂಗಯ್ಯ ಮತ್ತು ಎನ್‌ಎಸ್‌ಎಸ್‌ ಪ್ರಾದೇಶಿಕ ನಿರ್ದೇಶಕರಾದ ಕಾರ್ತಿಗೇಯನ್‌ ಡಿ. ಮಾನ್ಯ ಯುವ ಅಧಿಕಾರಿಗಳಾದ ಸಂತೋಷ್ ಇವರು ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಗಿದೆ. ಜೆಸಿ ಸಿಂಚನಾರಿಗೆ  ಅವರಿಗೆ ಚಂದ್ರೋದಯ ಪತ್ರಿಕೆ ಬಳಗದಿಂದ, ಅಲ್ ಜೆಸಿಸ್ ಆಫ್ ಶಿವಮೊಗ್ಗ ದಿಂದ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಶಾಸಕರು ಸಚಿವರು ಬಾಗಿ

ಇಮೇಜ್
 ಇಂದು ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಶಾಸಕರು ಸಚಿವರು ಬಾಗಿ, ದೇವರಿಗೆ ವಿಶೇಷಪೂಜೆ ಸಲ್ಲಿಸಿ, ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ.  ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಡಿ ಸುಧಾಕರ್, ಶಾಸಕರಾದ ಟಿ ರಘುಮೂರ್ತಿ, ಕೆ ಸಿ ವೀರೇಂದ್ರ ಪಪ್ಪಿ , ಮಾಜಿ ಸಚಿವರಾದ ಶ್ರೀ ಬಿ ಶ್ರೀರಾಮುಲು, ಜಿಲ್ಲಾಧಿಕಾರಿಗಳಾದ ವೆಂಕಟೇಶ್, ಚಳ್ಳಕೆರೆ ನಗರಸಭೆ ಪ್ರಭಾರ ಅಧ್ಯಕ್ಷರಾದ ಶ್ರೀಮತಿ ಸುಮಾ ಭರಮಯ್ಯ, ಹಿರಿಯ ಮುಖಂಡರಾದ ಪ್ರಭುದೇವ್ ಉಪಸ್ಥಿತರಿದ್ದರು.

. ಕರ್ನಾಟಕ ಸರ್ಕಾರ ಅಪ್ಪು ಜನ್ಮದಿನವನ್ನು "ಸ್ಫೂರ್ತಿ ದಿನ" ಎಂದು ಘೋಷಿಸಿದೆ.

ಇಮೇಜ್
ಪುನೀತ್ ರಾಜ್‌ಕುಮಾರ್ ಜನ್ಮದಿನ ಮಾರ್ಚ್ 17 ರಂದು ತಮ್ಮ ಅಭಿಮಾನಿಗಳಿಂದ ಪ್ರೀತಿಯಿಂದ "ಅಪ್ಪು" ಎಂದು ಕರೆಯಲ್ಪಡುವ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನವೂ ಆಗಿದೆ.  ಕರ್ನಾಟಕ ಸರ್ಕಾರ ಅವರ ಜನ್ಮದಿನವನ್ನು "ಸ್ಫೂರ್ತಿ ದಿನ" ಎಂದು ಘೋಷಿಸಿದೆ. 

" ಇಂಟರ್ವಲ್ " ಪಕ್ಕಾ ಪೈಸಾ ವಸೂಲ್ ಚಿತ್ರ

ಇಮೇಜ್
 "ಇಂಟರ್ವಲ್" ರನ್ನಿಂಗ್ ಸಕ್ಸಸ್ಫುಲ್ಲಿ ಮಲೆನಾಡಿನ ಬಹುದೇಕ ಕಲಾವಿದರು ನಟಿಸಿರುವ ಚಿತ್ರ. ಶೇಕಡಾ 50ರಷ್ಟು ಮಲೆನಾಡು ಭಾಗದಲ್ಲಿ ಚಿತ್ರೀಕರಣ ಕೊಂಡಿದೆ. ಇಂದೇ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಚಲನಚಿತ್ರ ನೋಡಿ. ಪಕ್ಕಾ ಪೈಸಾ ವಸೂಲ್ ಚಿತ್ರ .

ಜೆಸಿಐ ಭಾರತ ವಲಯ 24ರಲ್ಲಿ ಹೋಳಿ ಸಂಭ್ರಮ

ಇಮೇಜ್
 

ಶಿವಮೊಗ್ಗ ನಗರದಲ್ಲಿ ಹೋಳಿ ಸಂಭ್ರಮ,

ಇಮೇಜ್
 

ಪರಿಣಾಮಕಾರಿ ಭಾಷಣದ ಬಗ್ಗೆ ತರಬೇತಿ ಕಾರ್ಯಕ್ರಮ

ಇಮೇಜ್
  ಪರಿಣಾಮಕಾರಿ ಭಾಷಣದ ಬಗ್ಗೆ ತರಬೇತಿ ಕಾರ್ಯಕ್ರಮ, ಜೆಸಿಐ ಶಿವಮೊಗ್ಗ ವಿವೇಕ್ ವತಿಯಿಂದ ನಗರದ ಶುಭಂ ಅಧಿ ಗ್ರ್ಯಾಂಡ್ ಹಾಲ್ ನಲ್ಲಿ ಯಶಸ್ವಿಯಾಗಿ ನಡೆಯಿತು.

ಜೆಸಿಐ ಭಾರತ ಇಂಟರ್‌ನ್ಯಾಶನಲ್ ಕಮಿಷನ್ ಅಧ್ಯಕ್ಷ ಜೆಸಿ ಡಾಕ್ಟರ್ ಹರ್ಷವರ್ಧನ್ ರೆಡ್ಡಿ ಅವರಿಗೆ ಪಿಎಚ್.ಡಿ

ಇಮೇಜ್
ಜೆಸಿಐ ಭಾರತ ಇಂಟರ್‌ನ್ಯಾಶನಲ್ ಕಮಿಷನ್ ಅಧ್ಯಕ್ಷ ಜೆಸಿ ಡಾಕ್ಟರ್ ಹರ್ಷವರ್ಧನ್ ರೆಡ್ಡಿ ಅವರಿಗೆ ಪಿಎಚ್.ಡಿ  ಜೂನಿಯರ್ ಚೇಂಬರ್ ಇಂಟರ್‌ನ್ಯಾಶನಲ್ - ಇಂಡಿಯಾ ಇಂಟರ್‌ನ್ಯಾಶನಲ್ ಕಮಿಷನ್ ಅಧ್ಯಕ್ಷ ಜೆಸಿ ಎನ್‌ ಬಿ ಹರ್ಷವರ್ಧನ್ ರೆಡ್ಡಿ ಅವರನ್ನು ಹೆಸರಾಂತ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಪಿಎಚ್‌ಡಿ ಪ್ರಕಟಿಸಿದೆ. ನಿರ್ವಹಣಾ ವಿಭಾಗದ ಪ್ರಾಧ್ಯಾಪಕ ಡಿ. ಅಶೋಕ್ ಅವರ ಮಾರ್ಗದರ್ಶನದಲ್ಲಿ, ಅವರು “ಎಂಎಸ್‌ಎಂಇ ಕಾರ್ಯಕ್ಷಮತೆಯ ಮೇಲೆ ಉದ್ಯಮಶೀಲತೆಯ ದೃಷ್ಟಿಕೋನದ ಪರಿಣಾಮಗಳು - ನಂಬಿಕೆ ಮತ್ತು ಬದ್ಧತೆಯ ಮಧ್ಯಮ ಪಾತ್ರ” ಕುರಿತು ಸಂಶೋಧಿಸಿದರು. ಈ ಸಂಶೋಧನೆಯು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ, ವ್ಯಾಪಾರ ತಂತ್ರಗಳು ಮತ್ತು ಹೊಸ ವ್ಯವಹಾರ ಮಾದರಿಗಳ ಪರಿಣಾಮಕಾರಿ ತತ್ವದ ಪ್ರಮುಖ ಅಂಶಗಳನ್ನು ಆಳವಾಗಿ ವಿಶ್ಲೇಷಿಸಿದೆ. ಉದ್ಯಮಶೀಲತೆಯ ವರ್ತನೆಗಳು, ನಂಬಿಕೆಗಳು ಮತ್ತು ರೂಢಿಗಳಂತಹ ಅಂಶಗಳು MSME ಕಾರ್ಯಕ್ಷಮತೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ಇದು ಮೌಲ್ಯಯುತವಾದ ಪ್ರಾಯೋಗಿಕ ಮಾಹಿತಿಯನ್ನು ಒದಗಿಸಿದೆ. ಡಾ. ಎನ್.ಬಿ.ಹರ್ಷವರ್ಧನ್ ರೆಡ್ಡಿ ಅವರು ಈಗಾಗಲೇ ವ್ಯಾಪಾರ ಕ್ಷೇತ್ರ, ಯುವ ನಾಯಕತ್ವ ಅಭಿವೃದ್ಧಿ, ಸಾರ್ವಜನಿಕ ನೀತಿಗಳು ಮತ್ತು ಅಂತರಾಷ್ಟ್ರೀಯ ಪಾಲುದಾರಿಕೆಗಳಂತಹ ಹಲವು ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆಗಳನ್ನು ಸಲ್ಲಿಸಿದ್ದಾರೆ. ಈ ಸಂಶೋಧನೆಯು ಹೊಸ ವ್ಯಾಪಾರ ಉದ್ಯಮಗಳು, ಕೈಗಾ...

ಕೆಪಿಸಿಸಿ ಅಧ್ಯಕ್ಷರಾಗಿ ಯಶಸ್ವಿಯಾಗಿ 5 ವರ್ಷ ಪೂರೈಸಿದ ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಚಳ್ಳಕೆರೆ ಶಾಸಕರಾದ ಟಿ ರಘುಮೂರ್ತಿ ಅವರು ಅಭಿನಂದಿಸಿದ್ದಾರೆ.

ಇಮೇಜ್
ಕೆಪಿಸಿಸಿ ಅಧ್ಯಕ್ಷರಾಗಿ ಯಶಸ್ವಿಯಾಗಿ 5 ವರ್ಷ ಪೂರೈಸಿದ ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಚಳ್ಳಕೆರೆ ಶಾಸಕರಾದ ಟಿ ರಘುಮೂರ್ತಿ ಅವರು ಅಭಿನಂದಿಸಿದ್ದಾರೆ.

ಹೋಳಿ ಹಬ್ಬದ ಪ್ರಯುಕ್ತ ಪೊಲೀಸರಿಂದ ಚನ್ನಗಿರಿಯಲ್ಲಿ ರೂಟ್ ಮಾರ್ಚ್

ಇಮೇಜ್
 

ಪೊಲೀಸರ ಕರ್ತವ್ಯ ಲೋಪ

 ಪೊಲೀಸರ ಕರ್ತವ್ಯ ಲೋಪ. https://youtube.com/shorts/QIijP6BgQ3g?si=BMKF8BNWblY1YO4G .. ಕರ್ನಾಟಕದಲ್ಲಿ ಸಾರ್ವಜನಿಕರಿಂದ ಪೊಲೀಸರ ಕರ್ತವ್ಯ ಲೋಪದ ಬಗ್ಗೆ ಬಾರಿ ಟೀಕೆ..

ರಾಜ್ಯಾದ್ಯಂತ ಪ್ರವಾಸಿ ತಾಣಗಳಲ್ಲಿನ ರೆಸಾರ್ಟ್, ಹೋಂಸ್ಟೇಗಳಲ್ಲಿ ಹೊಸ ಮಾರ್ಗಸೂಚಿ

ಇಮೇಜ್
  ರಾಜ್ಯಾದ್ಯಂತ ಪ್ರವಾಸಿ ತಾಣಗಳಲ್ಲಿನ ರೆಸಾರ್ಟ್, ಹೋಂಸ್ಟೇಗಳಲ್ಲಿ ಪ್ರವಾಸಿಗರಿಗೆ ಭದ್ರತೆ ಮತ್ತು ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ