ಪೋಸ್ಟ್‌ಗಳು

ಜುಲೈ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಿವಮೊಗ್ಗದಲ್ಲಿ ಭೂ ಮಾಫಿಯಾ, ರೌಡಿಗಳಿಗೆ ಫಂಡಿಂಗ್, ಸಮಗ್ರ ತನಿಖೆಗೆ ಟಾಸ್ಕ್ ಪೋರ್ಸ್ ಸಮಿತಿ ರಚಿಸಲು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಒತ್ತಾಯ

ಇಮೇಜ್
     ಶಿವಮೊಗ್ಗ ನಗರದಲ್ಲಿ ಲ್ಯಾಂಡ್ ಲಿಟಿಗೇಶನ್ (ಭೂ ಮಾಫಿಯಾ) ನಾಗರೀಕ ಆತಂಕವನ್ನು ಹುಟ್ಟು ಹಾಕುತ್ತಿದೆ, ದುರ್ಬಲ ವರ್ಗದವರ ಸ್ವಾಧೀನಾನುಭವದ ಸ್ವತ್ತುಗಳು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಸ್ವತ್ತುಗಳು, ತಾಲ್ಲೂಕಿನ ಮೀಸಲು ಭೂಮಿಗಳಾದ ದನಕ್ಕೆ ಮುಪತ್ತು, ಗ್ರಾಮ ಠಾಣಾ, ಕೆರೆ ಜಾಗಗಳು, ಸ್ಮಶಾನಗಳು, ವಾರಸುದಾರರಿಲ್ಲದ ವ್ಯತ್ಯಾಸದ ವಿಸ್ತೀರ್ಣದ ಭೂಮಿ, ಸರಕಾರಿ ಪಡೆ ಭೂ ಪ್ರದೇಶಗಳು ಇದೀಗ ಅನಾಹುತಕಾರಿ ಜಾಲಗಳ ಭೂ ಕಬಳಿಕೆಗೆ ಒಳಗಾಗುತ್ತಿರುವುದು ಹಾಡು ಹಗಲೇ ದರೋಡೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವು ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಗುರುದತ್ ಹೆಗಡೆ ಅವರ ಗಮನಕ್ಕೆ ತರಬಯಸುತ್ತದೆ. ಟಾಸ್ಕ್ ಪೋರ್ಸ್ ಸಮಿತಿ ರಚಿಸಲು ಒತ್ತಾಯ : ಶಿವಮೊಗ್ಗದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ನಗರ ಹಾಗೂ ತಾಲ್ಲೂಕಿನ ನಾಡ ಕಛೇರಿ, ತಾಲ್ಲೂಕು ಕಛೇರಿಯ ಅಧಿಕಾರಿಗಳು, ಸರ್ವೇ ಇಲಾಖೆಯ ಇಲಾಖಾಧಿಕಾರಿಗಳಲ್ಲಿ ಒಂದಷ್ಟು ಜವಾಬ್ದಾರಿಯುತ ಕೆಲ ರಜಸ್ವ, ಗ್ರಾಮ ಲೆಕ್ಕಿಗ ಅಧಿಕಾರಿಗಳೇ ಶಾಮೀಲು ಆಗಿರುವುದರಿಂದಲೇ ಇಂತಹದೊಂದು ಬಹುದೊಡ್ಡ ಭೂ ಕಬಳಿಕೆ ಆಗುತ್ತಿದೆ ಎಲ್ಲಿ ನೋಡಿದರು ಬೇಲಿ ಸುತ್ತಿ, ಇದು ತಮ್ಮ ಆಸ್ತಿ ಎಂದು ನೇರವಾಗಿಯೇ ನಾಮಫಲಕಗಳನ್ನು ಹಾಕಿಕೊಂಡಿರುವುದು ಅಚ್ಚರಿಯಾಗಿದೆ, ಇದರಿಂದ ಶಿವಮೊಗ್ಗ ತಾಲ್ಲೂಕು ಕೆರೆಗಳ ವಿಸ್ತೀರ್ಣ ಕಡಿತವಾಗಿದೆ, ಹಲವೆಡೆ ಕೆರೆಕಟ್ಟೆ, ಗೋಮಾಳ, ಜಮೀನು ಕರಾಬು, ಸರಕಾರಿ ಪಡೆ ಜಮೀನುಗಳೇ ಮಂಗ...

“ತ್ಯಾಜ್ಯವು ಯೋಗ್ಯವಾಗುವ ಸ್ಥಳ: ಅದಮ್ಯ ಚೇತನದ, ಶೂನ್ಯ-ಕಸದ ಅಡುಗೆಮನೆ”

ಇಮೇಜ್
  ಅದಮ್ಯ ಮಾರ್ಗ ಸರ್ಕಾರೇತರ ಸಂಸ್ಥೆಯು ಸುಸ್ಥಿರತೆಯನ್ನು ಹೇಗೆ ವ್ಯವಸ್ಥಿತಗೊಳಿಸಬಹುದು, ಅಳೆಯಬಹುದು ಮತ್ತು ಉಳಿಸಿಕೊಳ್ಳಬಹುದು ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸುತ್ತಿದೆ. ಬೆಂಗಳೂರು, ಕರ್ನಾಟಕ - ಬೆಳೆಯುತ್ತಿರುವ ಹವಾಮಾನ ಕಾಳಜಿ ಮತ್ತು ನಗರ ಅವ್ಯವಸ್ಥೆಯ ಯುಗದಲ್ಲಿ, ಬೆಂಗಳೂರಿನಲ್ಲಿ ನೆಲೆಗೊಂಡಿರುವ ಸ್ವಯಂಸೇವಾ ಸಂಸ್ಥೆಯಾದ ಅದಮ್ಯ ಚೇತನ, ದೈನಂದಿನ ಜೀವನದ ಬಟ್ಟೆಯಲ್ಲಿ ಸುಸ್ಥಿರತೆಯನ್ನು ಹೇಗೆ ಹೆಣೆಯಬಹುದು ಎಂಬುದಕ್ಕೆ ಒಂದು ಅದ್ಭುತ ಉದಾಹರಣೆಯಾಗಿದೆ. EMPRI (ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ) ಶೈಕ್ಷಣಿಕ ಸಂಪರ್ಕ ಕಾರ್ಯಕ್ರಮದ ಭಾಗವಾಗಿ, ತರಬೇತಿ ಪಡೆಯುತಿರುವು ಪತ್ರಕರ್ತರ ತಂಡವು ಇತ್ತೀಚೆಗೆ ಅದಮ್ಯ ಚೇತನ ಕ್ಯಾಂಪಸ್‌ಗೆ ಭೇಟಿ ನೀಡಿತು, ಅಲ್ಲಿ ಅವರಿಗೆ ಒಂದು ಗಮನಾರ್ಹ ದೃಶ್ಯ ಕಾದಿತ್ತು - ಪ್ರತಿದಿನ 1.6 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಆಹಾರ ನೀಡುವ ಅಡುಗೆಮನೆ ಮಾತ್ರವಲ್ಲ, ಕಸವನ್ನು ಉತ್ಪಾದಿಸದ ಮತ್ತು ಪಳೆಯುಳಿಕೆ ಇಂಧನಗಳನ್ನು ಸುಡದ ಸಂಪೂರ್ಣ ವ್ಯವಸ್ಥೆ. ಆರು ಬಾರಿ ಸಂಸದರು ಮತ್ತು ಕೇಂದ್ರ ಸಚಿವರಾಗಿದ್ದ ದಿವಂಗತ ಶ್ರೀ ಅನಂತ್ ಕುಮಾರ್ ಅವರಿಂದ 1997 ರಲ್ಲಿ ಸ್ಥಾಪಿಸಲ್ಪಟ್ಟ ಮತ್ತು ಇಂದು ಅವರ ಪತ್ನಿ, ವಿಜ್ಞಾನಿ ಮತ್ತು ಸಾಮಾಜಿಕ ನಾಯಕಿ ಡಾ. ತೇಜಸ್ವಿನಿ ಅನಂತ್ ಕುಮಾರ್ ಅವರಿಂದ ಮುನ್ನಡೆಸಲ್ಪಡುತ್ತಿರುವ ಅದಮ್ಯ ಚೇತನವು ಕೇವಲ ಒಂದು ದತ್ತಿ ಸಂಸ್ಥೆಯಲ್ಲ - ಇದು ಪೂರ್ಣ ಪ್ರಮಾಣದ ಸುಸ್ಥಿರ ಪರಿಸ...

ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ೩೦ ವಿಧವಾ ಸಹೋದರಿಯರಿಗೆ ಒಂದು ತಿಂಗಳದ ಉಚಿತ ತರಬೇತಿ ಕಾರ್ಯಾಗಾರ

ಇಮೇಜ್
ಸವಣೂರ: ಮಹಿಳೆಯರಲ್ಲಿ ವಿಧವಾ ಸಹೋದರಿಯರನ್ನು ಆಯ್ಕೆಗೊಳಿಸಿ ಆರ್ಥಿಕತೆ ಹೆಚ್ಚಿಸುವ ಗೃಹ ಉದ್ಯೋಗ ಸೃಷ್ಠಿಸುವಂತಹ ಆರಿವರ್ಕ್ (ಮಗ್ಗಮ್) ತರಬೇತಿಯನ್ನು ಉಚಿತವಾಗಿ ನೀಡುತ್ತಿರುವದು ಶ್ಲಾಘನೀಯ ಕಾರ್ಯವಾಗಿದೆ ಎಂದು ಉಪ ವಿಬಾಗಾಧಿಕಾರಿ ಶುಭಂ ಶುಕ್ಲಾ ತಿಳಿಸಿದರು. ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ಪಟ್ಟಣದ ಹಾವಣಗಿ ಪ್ಲಾಟ್‌ನಲ್ಲಿರುವ ಪ್ರಜ್ವಲ್ ಸಭಾ ಭವನದಲ್ಲಿ ಕಾಬೀಲ್ ಯೋಜನೆಯಡಿ ೩೦ ವಿಧವಾ ಸಹೋದರಿಯರಿಗೆ ಮಂಗಳವಾರ ಏರ್ಪಡಿಸಿದ್ದ ಒಂದು ತಿಂಗಳದ ಉಚಿತ ಆರಿವರ್ಕ್ (ಮಗ್ಗಮ್) ತರಬೇತಿ ಕಾರ್ಯಗಾರ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕುಟುಂಬ ನಿರ್ವಹಣೆಯೊಂದಿಗೆ ಆರ್ಥಿಕ ಚಿಂತನೆಗೆ ಒಳಗಾಗುತ್ತಿರುವ ವಿಧವಾ ಸಹೋದರರಿಗೆ ಉತ್ತಮ ತರಬೇತಿಯೊಂದಿಗೆ ಅವಕಾಶ ನೀಡುವದು ಅವಶ್ಯವಾಗಿದೆ. ಅಂತಹ ಕಾರ್ಯವನ್ನು ಜೆಸಿಐ ನಮ್ಮ ಸವಣೂರು ಸಂಸ್ಥೆ ಕೈಗೊಳ್ಳುತ್ತಿರುವದು ಸಂತಸ ತಂದಿದೆ ಎಂದರು. ತಹಸೀಲ್ದಾರ್ ಭರತರಾಜ್ ಕೆ.ಎನ್., ಮಾತನಾಡಿ, ಮಹಿಳೆಯರಲ್ಲಿರುವ ಕಲಾತ್ಮಕ ಚಿಂತನೆಗಳಿಗೆ ಒಂದು ವೇದಿಕೆಯನ್ನು ಕಲ್ಪಿಸುವದು ಅವಶ್ಯವಾಗಿದೆ. ಆರ್ಥಿಕವಾಗಿ ಹಿಂದುಳಿದು ಉನ್ನತ ಮಟ್ಟದ ತರಬೇತಿ ಪಡೆಯಲು ಸಾಧ್ಯವಾಗದವರನ್ನು ಗುರುತ್ತಿಸಿ ಉಚಿತ ತರಬೇತಿಯನ್ನು ನೀಡುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಬಿಜೆಪಿ ಮಂಡಳ ನಿಕಟಪೂರ್ವ ಅಧ್ಯಕ್ಷ ಗಂಗಾಧರ ಬಾಣದ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಶವ  ಸಂಸ್ಕಾರ, ಮಕ್ಕಳೊಂದಿಗೆ ಉದ್ಯಾನ ದತ್ತು ಪಡೆದು ನಿರ...

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಇಮೇಜ್
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕೇಂದ್ರ ಸರ್ಕಾರದ ಭೂಸಾರಿಗೆ ಮತ್ತು ಹೆದ್ದಾರಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆಯೋಜಿಸಿದ್ದ ಸಮಾರಂಭದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿರುವ ಬಗ್ಗೆ ಪ್ರಧಾನಿ ಅವರಿಗೆ ಪತ್ರ ಬರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಪತ್ರದ ಸಾರಾಂಶ ಹೀಗಿದೆ; ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ‌ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಅಂಬಾರಗೋಡ್ಲು - ಕಳಸವಳ್ಳಿ ಸೇತುವೆ ಉದ್ಘಾಟನೆಯೂ ಸೇರಿದಂತೆ ಹಲವು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ರಾಜ್ಯ ಸರ್ಕಾರವನ್ನು ಸಂಪರ್ಕಿಸದೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಮಾತ್ರವಲ್ಲ,  ಮುಂಚಿತವಾಗಿ ಕಾರ್ಯಕ್ರಮ ಆಯೋಜನೆಯ ವಿಷಯವನ್ನು ತಿಳಿಸದೆ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರನ್ನು ಕೂಡ ಮುದ್ರಿಸಲಾಗಿತ್ತು.  ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕುವುದರಿಂದ  ಹಿಡಿದು ಆಹ್ವಾನ ನೀಡುವ ವರೆಗೆ ಎಲ್ಲಾ ಹಂತಗಳಲ್ಲಿಯೂ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದಾದ ಈ ನಡೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಇದನ್ನು ರಾಜ್ಯ ಸರ್ಕಾರವು ಬಲವಾಗಿ ಖಂಡಿಸುತ್ತದೆ. ಮುಂದಿನ ದಿನಗಳಲ್ಲಿ ಇಂತಹ  ಲೋಪಗಳಾಗದಂತೆ ತಮ್ಮ ಎಲ್ಲಾ ಸಂಪುಟ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡ...

ಶೆಟ್ಟಿಹಳ್ಳಿ - ಚಿತ್ರಶೆಟ್ಟಿಹಳ್ಳಿ ಗ್ರಾಮಗಳಿಗೆ ಮೂಲಭೂತ ಸೌಕರ್ಯ ವ್ಯವಸ್ಥೆಗಾಗಿ: ಜೆಸಿಐ ನಿಂದ ಮಾನವಿ

ಇಮೇಜ್
       ಶಿವಮೊಗ್ಗ ಜಿಲ್ಲೆ,  ಶಿವಮೊಗ್ಗ ತಾಲ್ಲೂಕ್, ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ, ಶೆಟ್ಟಿಹಳ್ಳಿ - ಚಿತ್ರಶೆಟ್ಟಿಹಳ್ಳಿ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.      1961-1962 ಸಮಯದಲ್ಲಿ ಶರಾವತಿ ಮುಳುಗಡೆಯಿಂದ ಬಂದಂತಹ ಶರಾವತಿ ಮುಳುಗಡೆ ಸಂತ್ರಸ್ತರು, ಪ್ರಸ್ತುತ ಮೇಲಿನ ವಿಳಾಸದ ಗ್ರಾಮಸ್ಥರು.      ತುರ್ತು ಸಂದರ್ಭದಲ್ಲಿ ಈ ಗ್ರಾಮಕ್ಕೆ ಒಂದು ತುರ್ತು ವಾಹನದ ಅವಶ್ಯಕತೆ ಇದ್ದು, ಒಂದೇ ವಾಹನ ವಿವಿಧ ಕ್ಷೇತ್ರಗಳ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ರೀತಿ. ಒಂದು ತುರ್ತು ವಾಹನದ 24*7 ಗಂಟೆಗಳ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ವಾಹನ ಸೌಲಭ್ಯ ತಕ್ಷಣ ವ್ಯವಸ್ಥೆ ಮಾಡಿ.      ಉದಾಹರಣೆಗೆ ಬೆಳ್ಳಗೆ ಸಂಜೆ ಸಾರಿಗೆ ರೂಪದಲ್ಲಿ, ಆರೋಗ್ಯದ ಸಮಸ್ಯೆ ಅಥವಾ ಅವಘಡ ಸಂಭವಿಸಿ ಜೀವಕ್ಕೆ ಹಾನಿಯಾಗುವ ಸಂದರ್ಬದಲ್ಲಿ ಅಬುಲೆನ್ಸ್ ರೂಪದಲ್ಲಿ, ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುವಂತ, ಒಂದು ಟೆಂಪೋ ಟ್ರಾವೆಲರ್ ವಾಹನವನ್ನು ಅದರ ಚಾಲಕರನ್ನು ತಕ್ಷಣ ನೀಡಿ. ಶರಾವತಿ ಮುಳುಗಡೆ ಸಂತ್ರಸ್ತರು ಆರು ದಶಕಗಳಿಂದ ಎದುರಿಸುತ್ತಿರುವ , ಮೂಲ ಸೌಕರ್ಯಗಳ ಕೊರತೆಯನ್ನು ತಕ್ಷಣಕ್ಕೆ ನೀಗಿಸಿ ಎಂದು ಜೆಸಿಐ ಶಿವಮೊಗ್ಗ ಶಾಶ್ವತಿ ಅಧ್ಯಕ್ಷರು ಮತ್ತು ತಂಡ ಜಿಲ್ಲಾಧಿಕಾರಿ ಮಾನವಿ ಮಾಡಿ...