ಭೀಮಾ ಕೋರೆಗಾಂವ್ ಯುದ್ಧ: ಒಂದು ಸೇನಾ ಸಂಘರ್ಷವಲ್ಲ, ಮಾನವ ಗೌರವ(Respect)ಕ್ಕಾಗಿ ನಡೆದ ಹೋರಾಟ
"ಮರೆಮಾಚಲ್ಪಟ್ಟ ದಲಿತ ಪ್ರತಿರೋಧದ ಐತಿಹಾಸಿಕ ಅಧ್ಯಾಯ" "ವಿಶೇಷ ಅಂಕಣ - ನವೀನ್ ತಲಾರಿ" ಭೀಮಾ ಕೋರೆಗಾಂವ್, ಜನವರಿ 1: ಪುಣೆಯ ಸಮೀಪ ಭೀಮಾ ನದಿಯ ತೀರದಲ್ಲಿರುವ ಒಂದು ಗ್ರಾಮ—ಭೀಮಾ ಕೋರೆಗಾಂವ್. ಇಲ್ಲಿ ನಿಂತಿರುವ ವಿಜಯಸ್ತಂಭ ಕೇವಲ ಕಲ್ಲಿನ ಸ್ಮಾರಕವಲ್ಲ; ಅದು ಭಾರತದ ದಲಿತ ಇತಿಹಾಸದ ಘನವಾದ ಪ್ರತಿರೋಧ, ಸ್ವಾಭಿಮಾನ ಮತ್ತು ಮಾನವ ಗೌರವದ ಸಂಕೇತವಾಗಿದೆ. ಜನವರಿ 1, 1818ರಂದು ನಡೆದ ಭೀಮಾ ಕೋರೆಗಾಂವ್ ಯುದ್ಧವನ್ನು ಇತಿಹಾಸ ಪುಸ್ತಕಗಳು ಸಾಮಾನ್ಯವಾಗಿ ಎರಡನೇ ಆಂಗ್ಲ–ಪೇಶ್ವೆಗಳ ಯುದ್ಧದ ಭಾಗವೆಂದು ಮಾತ್ರ ದಾಖಲಿಸಿವೆ. ಆದರೆ ಈ ಯುದ್ಧದ ಸಾಮಾಜಿಕ ಹಾಗೂ ಮಾನವೀಯ ಅರ್ಥವನ್ನು ದಶಕಗಳ ಕಾಲ ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ. ಈ ಯುದ್ಧವು ಬ್ರಿಟಿಷ್ ಸಾಮ್ರಾಜ್ಯಕ್ಕಾಗಿ ಅಲ್ಲ; ಅದು ಶತಮಾನಗಳ ಕಾಲ ದಮನಕ್ಕೊಳಗಾದ ಮಹಾರ್ ಸಮುದಾಯದ ಸ್ವಾಭಿಮಾನಕ್ಕಾಗಿ ನಡೆದ ಹೋರಾಟವಾಗಿತ್ತು. ಪೇಶ್ವಾ ಆಡಳಿತ ಮತ್ತು ಜಾತಿ ದಮನ 18ನೇ ಶತಮಾನದ ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ಪೇಶ್ವಾ ಆಡಳಿತವು ರಾಜಕೀಯದಷ್ಟೇ ಅಲ್ಲ, ಸಾಮಾಜಿಕ ವ್ಯವಸ್ಥೆಯ ಮೇಲೂ ಸಂಪೂರ್ಣ ಹಿಡಿತ ಹೊಂದಿತ್ತು. ಬ್ರಾಹ್ಮಣೀಯ ಶಾಸ್ತ್ರಾಧಾರಿತ ವ್ಯವಸ್ಥೆಯಲ್ಲಿ ಅಸ್ಪೃಶ್ಯರನ್ನು ಮಾನವರೆಂದು ಕೂಡ ಪರಿಗಣಿಸಲಾಗುತ್ತಿರಲಿಲ್ಲ. ಅಸ್ಪೃಶ್ಯರು: "ಬೆನ್ನಿಗೆ ಜಾಡು ಒರೆಸಲು ಪೊರಕೆ ಕಟ್ಟಿಕೊಳ್ಳಬೇಕಿತ್ತು" "ಕುತ್ತಿಗೆಗೆ ಉಗ...