ಪೋಸ್ಟ್‌ಗಳು

ಜೂನ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಐದು ಹುಲಿಗಳ ಸಾವು ಹಾಗೂ ಚರಿತ್ರೆಯಲ್ಲಿ ಹುಲಿ ದುರಂತ ದಾಖಲೆಗಳು

 ಇಡೀ ವಿಶ್ವವೇ ನೆನಪಿಡುವ  ದೊಡ್ಡ ವನ್ಯಜೀವಿ ದುರಂತ ರಾಜ್ಯದಲ್ಲಿ ಘಟಿಸಿದೆ. ಚಾಮರಾಜ ನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯ ಜೀವಿ ವಲಯದಲ್ಲಿ ನಾಲ್ಕು ಮರಿ ಹಾಗೂ ಒಂದು ತಾಯಿ ಹುಲಿ ಸೇರಿದಂತೆ ಒಟ್ಟೂ ಐದು ಹುಲಿಗಳು ಸಾವನ್ನಪ್ಪಿವೆ. ಲಭ್ಯ ದಾಖಲೆ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಒಂದೇ ದಿನ ಒಂದೇ ಸ್ಥಳದಲ್ಲಿ ಸಾವನ್ನಪ್ಪಿದ ಅತಿ ಹೆಚ್ಚು ಹುಲಿಗಳ ಸಾವು ಇದಾಗಿದೆ. ವಿಷ ಸೇವಿಸಿ ಈ ಸಾವು ನಡೆದಿದೆಯೆಂದು ಹೇಳಲಾಗಿದೆ, ಸನಿಹದಲ್ಲಿ ಹಸುವೊಂದು ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ, ತನಿಖೆ ನಡೆದಿದೆ. ಮರಿ ಹಾಕಿದ ಹುಲಿಗಳು ಏಳೆಂಟು ವಾರಗಳ ಕಾಲ ಮರಿಯನ್ನು ಜೊತೆಗೆ ಒಯ್ದು ಬೇಟೆ ಆಹಾರ ಒದಗಿಸುತ್ತವೆ.  ಇದಲ್ಲದೇ ಮರಿಗಳಿಗೆ ಬೇಟೆ ಕಲಿಸುವ ಕಾರಣಕ್ಕೆ ಹೆಚ್ಚು ಬೇಟೆಯಾಡುತ್ತವೆ. ಇಂಥ ಸಂದರ್ಭದಲ್ಲಿ ಮರಿಗಳ ರಕ್ಷಣೆಗೆ ಇವುಗಳು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಇರುತ್ತವೆ. ಜಾಗ ಬದಲಿಸುವಾಗ ಕಚ್ಚಾ ಮಣ್ಣಿನ ರಸ್ತೆಯಲ್ಲಿ ಕಾಡಿನ ಇನ್ನೊಂದು ಪ್ರದೇಶಕ್ಕೆ ಮರಿಗಳ ಜೊತೆಗೆ ಸಂಚರಿಸುವ ಹೆಜ್ಜೆ ಗುರುತುಗಳು ಕಾಣುತ್ತವೆ. ಕಾಟಿ, ಹಂದಿ, ಜಿಂಕೆಗಳ ಸಾಂದ್ರತೆ ಕಡಿಮೆ ಇದ್ದರೆ  ಸುತ್ತಲಿನ ದನಕರು ಹಿಡಿಯುವುದು ಸಹಜವಾಗಿದೆ. ಕಾಡಿಗೆ ಮೇಯಲು ಹೋದ ದನಕರುಗಳ ನಿರಂತರ ಸಾವು ಘಟನೆಗೆ ಕಾರಣವೇ? ಹುಲಿ ಸಾವಿನ ಘಟನೆಯನ್ನು ಈ ಹಿನ್ನಲೆಯಲ್ಲಿ ಕೂಡಾ ತನಿಖೆಗೆ ಒಳಪಡಿಸುವ ಅಗತ್ಯವಿದೆ. ವನ್ಯ ಜೀವಿ ಹಾಗೂ ಕೃಷಿ/ಜ...

ಶಾಸಕ ಟಿ.ರಘುಮೂರ್ತಿ ಅವರಿಂದ ಹಸಿರು ನಿಶಾನೆ ಪೊಲೀಸ್ ಇಲಾಖೆಗೆ ವಾಹನ ಹಸ್ತಾಂತರ

ಇಮೇಜ್
  ಚಿತ್ರದುರ್ಗ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆವರಣದಲ್ಲಿ ಬುಧವಾರ ಬುಲೆರೋ ನಿಯೋ ಹೊಸ ಮಾದರಿಯ ವಾಹನವನ್ನು ಪೊಲೀಸ್ ಇಲಾಖೆಗೆ ಚಳ್ಳಕೆರೆ ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಹಸ್ತಾಂತರಿಸಿದರು.       ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿಯವರು 2024-25ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅಂದಾಜು ರೂ.11.7 ಲಕ್ಷ ವೆಚ್ಚದಲ್ಲಿ ಒಂದು ಬುಲೆರೋ ನಿಯೋ ವಾಹನವನ್ನು ಪೊಲೀಸ್ ಇಲಾಖೆಗೆ ನೀಡಿದ್ದಾರೆ.       ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಚಿತ್ರದುರ್ಗ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪಿ.ಕೆ.ದಿನಕರ್, ಚಳ್ಳಕೆರೆ ಪೊಲೀಸ್ ಉಪಾಧೀಕ್ಷಕ ರಾಜಣ್ಣ, ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ಶಶಿಕುಮಾರ್, ತಿಮ್ಮಣ್ಣ, ಮುತ್ತುರಾಜ್, ಉಮೇಶ್ ಸೇರಿದಂತೆ ಮತ್ತಿತರರು ಇದ್ದರು.

ರಾಜ್ಯಮಟ್ಟದ ಫಿಡೆ ಕ್ಲಾಸಿಕಲ್ ರೇಟಿಂಗ್ ಚೆಸ್ ಪಂದ್ಯಾವಳಿ ಜೆಸಿಐ ಶಿವಮೊಗ್ಗ ಚಿರಂತನ ಸಹಯೋಗದೊಂದಿಗೆ

ಇಮೇಜ್
    ಜೂನ್ 27 ,28 ಹಾಗೂ 29 ಶಿವಮೊಗ್ಗ ನಗರದಲ್ಲಿ ಚಾಣಕ್ಯ ಚೆಸ್ ಸ್ಕೂಲ್ ಮತ್ತು ಜೆಸಿಐ ಶಿವಮೊಗ್ಗ ಚಿರಂತನ ವತಿಯಿಂದ ಮೊದಲ ಬಾರಿಗೆ  ಮೂರು ದಿನಗಳ 19 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ರಾಜ್ಯಮಟ್ಟದ ಫಿಡೆ ಕ್ಲಾಸಿಕಲ್ ರೇಟಿಂಗ್ ಚೆಸ್ ಪಂದ್ಯಾವಳಿಯನ್ನು ನಗರದ ಶ್ರೀ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದೆ. 27 ಶುಕ್ರವಾರ ಬೆಳಗ್ಗೆ 9.30ಕ್ಕೆ ಉದ್ಗಾಟನಾ ಕಾರ್ಯಕ್ರಮ ಇರುತ್ತದೆ, ಮುಖ್ಯ ಅತಿಥಿಗಳಾಗಿ ಜೆಸಿಐ ವಲಯ 24 ರ ಅಧ್ಯಕ್ಷರಾದ ಜೆಸಿಐ ಸೆನೆಟರ್ ಸಿಎ ಗೌರೀಶ್ ಭಾರ್ಗವ್ ಮತ್ತು ವಿನೋಬಾ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ಡಿ ಕೆ ರವರು ಆಗಮಿಸಲಿದ್ದಾರೆ. ಈ ಪಂದ್ಯಾವಳಿಯೂ ಬಾಲಕ  ಮತ್ತು ಬಾಲಕಿಯ ಪ್ರತ್ಯಕ ವಿಭಾಗಗಳಲ್ಲಿ ನಡೆಯಲಿದೆ, ಒಟ್ಟು ನಗದು ಬಹುಮಾನ 72000 ಸಾವಿರ ರೂ ಹಾಗೂ 120 ಟ್ರೋಫಿಗಳು ನೀಡಲಾಗುವುದು. ಈ ಪಂದ್ಯವಳಿಗೆ ಹೆಸರು ನೋಂದಾಯಿಸುವವರು  ಎ.ಐ.ಸಿ.ಎಫ್ ಹಾಗೂ ಕೆ.ಎಸ್.ಸಿ.ಎ  ಯ ನೊಂದಣಿಯೂ ಮಾಡಿಸಿರಬೇಕು, ಈ ಪಂದ್ಯಾವಳಿಯಲ್ಲಿ ವಿಜೇತರಾದ ಮೊದಲ ನಾಲ್ಕು ಬಾಲಕಿ ಮತ್ತು ಬಾಲಕ ಸ್ಪರ್ಧಿಗಳನ್ನು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಿ ಕಳುಹಿಸಲಾಗುವುದು. ಹೆಸರು ನೋಂದಾಯಿಸಲು ಕಡೆಯ ದಿನಾಂಕ 26 ಜೂನ್ 2025 ಸಂಜೆ 4.00 ಗಂಟೆವರೆಗೆ ಸಮಯವಿರುತ್ತದೆ. ಹೆಸರು ನೋಂದಾಯಿಸಲು ಸಂಪರ್ಕಿಸಿ 9845830133, 9741591672 ಚಾಣಕ್ಯ ಚೆಸ್ ಸ್ಕೂಲ್  ಸಂಸ್ಥಾಪಕರಾದ ...

X&Y ಚಲನಚಿತ್ರ ಜೂ.26 ಕ್ಕೆ ಬಿಡುಗಡೆ - ಸೂತ್ರಧಾರ ಡಿ ಸತ್ಯ

ಇಮೇಜ್
ಜಯನಗರ 4ತ್ ಬ್ಲಾಕ್ (ಕಿರುಚಿತ್ರ), ರಾಮ ರಾಮ ರೇ, ಒಂದಲ್ಲ ಎರಡಲ್ಲ (ರಾಷ್ಟ್ರೀಯ ಪ್ರಶಸ್ತಿ), ಮ್ಯಾನ್ ಆಫ್ ದಿ ಮ್ಯಾಚ್, ಚಿತ್ರದ ನಿರ್ದೇಶಕ ಸೂತ್ರಧಾರ ಡಿ.ಸತ್ಯಪ್ರಕಾಶ್ ನಿರ್ಮಿಸಿ, ನಿರ್ದೇಶಿಸುವುದರ ಜೊತೆಗೆ ಪ್ರಮುಖ ಪಾತ್ರದಲ್ಲೂ ನಟಿಸಿರುವ ಬಹು ನಿರೀಕ್ಷಿತ "X&Y" ಚಿತ್ರ ಜೂ.26 ರಂದು ಬಿಡುಗಡೆಯಾಗಲಿದೆ.  ಚಂದ್ರೋದಯ ಪತ್ರಿಕೆಯೊಂದಿಗೆ ಮಾತನಾಡಿದ ನಿರ್ದೇಶಕ ಡಿ.ಸತ್ಯಪ್ರಕಾಶ್, ಚಿತ್ರ  ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್‌ನಲ್ಲೇ ನಿರ್ದೇಶಕರು ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಚಿತ್ರವನ್ನು ನೋಡುವ ಕಾತುರ ಹೆಚ್ಚಿಸಿದೆ. ವಿಭಿನ್ನ ಕಂಟೆಂಟ್ ಹೊಂದಿರುವ ಈ ಚಿತ್ರದ ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರ ಇದೇ ಜೂನ್ 26 ಗುರುವಾರ ರಾಜ್ಯಾದ್ಯಂತ ಎಲ್ಲಾ ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದರು. ಐದು ಹಾಡು ಬಿಟ್ ಸಾಂಗ್ಸ್ ಇದೆ. ಸೈನ್ಸ್ ಗೊತ್ತಿರುವವರಿಗೆ ಕ್ರೋಮೋಸೋಮ್ಸ್ ಪೋಸ್ಟರ್ ಇದೆ. ಕೆಲವರು ಗಣಿತದ ಫ್ಯಾಂಟಸಿ ಹೂಮರ್,  ಹುಟ್ಟುವ ಮಗುವಿನ ಚಿತ್ರವೇ X&Y ಆಗಿದೆ. ಕೌಟುಂಬಿಕ ಸಿನಿಮಾವಾಗಿದೆ. ಮನೆಗೆ ಗೆಸ್ಟ ಬಂದರೆ ಅವರು ಬಂದು ಹೋಗುವ ವರೆಗೆ ಕಂಫರ್ಟಬಲ್ ಆಗಿರಲಿ ಎಂದು ನೋಡಿಕೊಳ್ಳುತ್ತೇವೆ ಹಾಗೆ ಮಗು ಭೂಮಿಗೆ ಬಂದರೆ ಕಂಫರ್ಟಬಲ್ ಆಗಿರಲಿ ಎಂದು ನೋಡಿಕೊಂಡಿದ್ದೇವಾ ...

ಮಂಗೋಲಿಯಾದಲ್ಲಿ ಮಿಂಚಿದ ಭಾರತ, 2025 ರ ಜೆಸಿಐ ಏಷ್ಯಾ ಪೆಸಿಫಿಕ್ ಸಮ್ಮೇಳನ

ಇಮೇಜ್
ಮಂಗೋಲಿಯಾ, ಉಲಾನ್‌ಬಾತರ್ - ಜೂನ್ 12–15, 2025: ಮಂಗೋಲಿಯಾದ ಉಲಾನ್‌ಬಾತರ್‌ನ ರೋಮಾಂಚಕ ನಗರದಲ್ಲಿ ಆಯೋಜಿಸಲಾದ ಪ್ರತಿಷ್ಠಿತ ಜೆಸಿಐ ಏಷ್ಯಾ ಪೆಸಿಫಿಕ್ ಸಮ್ಮೇಳನ 2025 ರಲ್ಲಿ ಜೆಸಿಐ ಭಾರತ ಹೆಮ್ಮೆಯ ಮತ್ತು ಶಕ್ತಿಯುತ ಉಪಸ್ಥಿತಿಯನ್ನು ಪ್ರದರ್ಶಿಸಿತು. ಭಾರತದಾದ್ಯಂತ 60 ಕ್ಕೂ ಹೆಚ್ಚು ಕ್ರಿಯಾತ್ಮಕ ಪ್ರತಿನಿಧಿಗಳೊಂದಿಗೆ, ತಂಡವು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಏಕತೆ, ನಾಯಕತ್ವ ಮತ್ತು ಸಕ್ರಿಯ ಪೌರತ್ವದ ನಿಜವಾದ ಮನೋಭಾವವನ್ನು ಪ್ರದರ್ಶಿಸಿತು. ರಾಷ್ಟ್ರೀಯ ಅಧ್ಯಕ್ಷ ಜೆಎಫ್‌ಎಸ್ ಅಂಕುರ್ ಜುನ್‌ಜುನ್‌ವಾಲಾ ನೇತೃತ್ವದ ಭಾರತೀಯ ನಿಯೋಗವು ತರಬೇತಿ ಅವಧಿಗಳು, ವೇದಿಕೆಗಳು, ಸಾಂಸ್ಕೃತಿಕ ವಿನಿಮಯಗಳು ಮತ್ತು ನೆಟ್‌ವರ್ಕಿಂಗ್ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿತು, 30 ಕ್ಕೂ ಹೆಚ್ಚು ದೇಶಗಳ ಜಾಗತಿಕ ನಾಯಕರು ಮತ್ತು ಬದಲಾವಣೆ ತರುವವರೊಂದಿಗೆ ತೊಡಗಿಸಿಕೊಂಡಿತು. "ರೈಸ್ ಅಪ್!" ಎಂಬ ವಿಷಯದ ಮೇಲೆ ನಡೆದ ಭವ್ಯ ಸಮ್ಮೇಳನವು ಯುವ ನಾಯಕರಿಗೆ ಸಂಪರ್ಕ ಸಾಧಿಸಲು, ಸಹಯೋಗಿಸಲು ಮತ್ತು ಪ್ರಭಾವ-ಚಾಲಿತ ಉಪಕ್ರಮಗಳನ್ನು ರಚಿಸಲು ಜಾಗತಿಕ ವೇದಿಕೆಯನ್ನು ಒದಗಿಸಿತು. ಭಾರತೀಯ ತಂಡವು ತನ್ನ ಶಿಸ್ತು, ರೋಮಾಂಚಕ ಪ್ರಾತಿನಿಧ್ಯ ಮತ್ತು ಜೆಸಿಐ ಮಿಷನ್‌ಗೆ ಬದ್ಧತೆಗಾಗಿ ಎದ್ದು ಕಾಣುತ್ತದೆ.  ಈ ಯಶಸ್ವಿ ಪ್ರಾತಿನಿಧ್ಯವು ಜೆಸಿಐ ಚಳವಳಿಯಲ್ಲಿ ಭಾರತದ ಬೆಳೆಯುತ್ತಿರುವ ಪ್ರಭಾವವನ್ನು ಬಲಪಡಿಸಿದ್ದಲ್ಲದೆ, ಶಾಶ್ವತ ಅಂತರರಾಷ್ಟ್ರೀಯ ಪಾಲುದಾರಿ...

ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಚಿತ್ರ

ಇಮೇಜ್
  ಸಮರ್ಥ್ ಕಡಕೋಳ್ ನಿರ್ದೇಶನದ "ಎಡಗೈಯೇ ಅಪಘಾತಕ್ಕೆ ಕಾರಣ" ಸಿನಿಮಾವು ರಾಜದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಕನ್ನಡ ಸಿನಿಮಾಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್ಗಳಲ್ಲಿ ನೋಡಿ ಬೆಂಬಲಿಸ ಬೇಕು ಎಂದು ನಿರ್ಮಾಪಕ ರಾಜೇಶ್ ಕೀಳಂಬಿ ಹೇಳಿದರು. ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ‘ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾವು ಕಳೆದ ಜೂನ್ 13ರಂದು ರಾಜದ್ಯಂತ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಶೈಲಿಯ ನಿರೂಪಣೆ ಮತ್ತು ತಾಂತ್ರಿಕತೆಯ ವಿಭಿನ್ನತೆ ಇಲ್ಲಿ ಕಂಡು ಬರುತ್ತದೆ. ಎಡಗೈ ಬಳಸುವವರ ಸಂಕಷ್ಟಗಳ ಸುತ್ತ ಚಿತ್ರ ಹೆಣೆದುಕೊಂಡಿದ್ದು, ಲಘು ಹಾಸ್ಯದ ಮೂಲಕ ಮತ್ತು ಕೌತುಕದ ಮೂಲಕ ಚಿತ್ರ ಸಾಗಿದ್ದು, ಪ್ರೇಕ್ಷಕರು ಈ ಚಿತ್ರವನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ ಇದು ನಮಗೆ ಸಂತೋಷ ತಂದಿದೆ ಎಂದರು. ಈ ಚಿತ್ರದ ನಾಯಕ ದಿಗಂತ್ ಆಗಿದ್ದು, ಇವರು ಶಿವಮೊಗ್ಗ ಜಿಲ್ಲೆಯವರೇ ಆಗಿದ್ದಾರೆ. ಶಿವಮೊಗ್ಗದ ನಂಟು ಚಿತ್ರದ ಜೊತೆಗೆ ಬೆಸೆದುಕೊಂಡಿದೆ. ಶಿವಮೊಗ್ಗದಲ್ಲಿ ಮಲ್ಲಿಕಾರ್ಜುನ ಟಾಕೀಸ್ ಮತ್ತು ಭಾರತ ಸಿನಿಮಾದಲ್ಲಿ ಪ್ರದರ್ಶನ ಕಾಣುತ್ತಿದೆ. ದಿನಕ್ಕೆ ಒಟ್ಟು 10 ಶೋಗಳ ಪ್ರದರ್ಶನ ಕಾಣುತ್ತಿದೆ. ಈ ದಿನದ ಎಲ್ಲಾ ಶೋಗಳು ಕೂಡ ಭರ್ತಿಯಾಗಿವೆ ಎಂದು ತಿಳಿದು ಬಂದಿದೆ. ಇದು ನಮಗೆ ಯಶಸ್ಸು ತಂದಿದೆ ಎಂದರು. ನಿರ್ಮಾಪಕ ಸಮರ್ಥ್ ಕಡಕೋಳ್ ಮಾತನಾಡಿ, ಇದು ನನ್ನ ಮೊದಲನೇ ನಿರ್ದೇಶನದ ಸಿನಿಮಾ...

ಸ್ಯಾಡೋ ಎಡ ಕಾಲಿಗೆ ಗುಂಡೇಟು

ಇಮೇಜ್
  ಶಿವಮೊಗ್ಗ :  ಸಾಗರ ತಾಲೂಕಿನ ಆನಂದಪುರದಲ್ಲಿ ಬೆನ್ಜ್ ಲಾರಿಗೆ ಅಡ್ಡ ಹಾಕಿ ಸುಲಿಗರ, ಬೆದರಿಕೆ, ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿ ಹಣ ನೀಡದೆ ಎಸ್ಕೇಪ್,  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಬೆನ್ನಲ್ಲೆ ಸಚಿನ್ ಅಲಿಯಾಸ್ ಸ್ಯಾಡೋ ಕಾಲಿಗೆ ಗುಂಡೇಟು ಹೊಡೆಯಲಾಗಿದೆ. ಗೂಂಡಾ ಆಕ್ಟ್ ನಲ್ಲಿ ಒಂದು ವರ್ಷದ ಹಿಂದೆ ಜೈಲಿಗೆ ತೆರಳಿದ್ದ ಸಚಿನ್ ಸ್ಯಾಡೋ 20 ದಿನಗಳ ಹಿಂದೆ ರಿಲೀಸ್ ಆಗಿ ಬಂದಿದ್ದ. ದೊಡ್ಡಪೇಟೆ, ತುಂಗ ನಗರ , ಜಯನಗರ, ಕೋಟೆ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ, ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣಗಳು ದಾಖಲಾಗಿತ್ತು. 20 ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಸ್ಯಾಡೋ ಆನಂದಪುರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ  ಲಾರಿಯನ್ನ ಅಡ್ಡಹಾಕಿ ಚಾಲಕನ ಮೊಬೈಲ್ ಮತ್ತು ಹಣ ಕಿತ್ತುಕೊಂಡು ಓಡಿಹೋಗಿದ್ದ. ಪೆಟ್ರೋಲ್ ಬಂಕ್ ನಲ್ಲಿ ಹಣ ನೀಡದೆ ಟೋಪಿಹಾಕಿ ಪರಾರಿಯಾಗಿದ್ದ ಸಚಿನ್ ಯಾನೆ ಸ್ಯಾಡೋ ವಿರುದ್ಧ ಪೆಟ್ರೋಲ್ ಬಂಕ್ ನ  ಸಂಘದ ಅಧ್ಯಕ್ಷ ಮತ್ತು ಎಂಎಲ್ ಸಿ ಅರುಣ್ ಎಸ್ಪಿ ಅವರಿಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಆನಂದಪುರ ಮತ್ತು ಎಸ್ಪಿಗೆ  ದೂರು ನೀಡಿದ್ದ ಪ್ರಕರಣದಲ್ಲಿ ಸಚಿನ್ ಯಾನೆ ಸ್ಯಾಡೊ ಕಾಲಿಗೆ ಗುಂಡು ಹಾರಿಸಲಾಗಿದೆ.  ಇಂದು ಮೆಣಸಿನ ಸರಕ್ಕೆ ಹೋಗಿದ್ದ ಆನಂದಪುರದ ಪಿಎಸ್ಐ ಯುವರಾಜ್ ಮತ್ತು ಸಿಬ್ಬಂದಿಗಳು ಸ್ಯಾಡ...

ವಿರೋಧಗಳ ನಡುವೆಯೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಗಂಧಿಕ ನೇಮಕ ಬಹುತೇಕ ಖಚಿತ..!

ಇಮೇಜ್
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನಕ್ಕೆ ಈಗ ಬಾರಿ ಪೈಪೋಟಿ ನೆಡೆಯುತ್ತಿದೆ. ಈ ಪೈಪೋಟಿಯಲ್ಲಿ ಮುಖ್ಯ ವಾಗಿ ಇಬ್ಬರ ಹೆಸರು ಕೇಳಿ ಬರುತ್ತಿದೆ ಒಂದು ಸೌಗಂಧಿಕ, ಮತ್ತೊಂದು ವಿಜಯಲಕ್ಷಿ ಪಾಟೀಲ್ ಆದರೆ  ಇಬ್ಬರ ನಡುವೆ ಪೈಪೋಟಿ ಇದ್ದರೂ ಸಹ  ರಾಜ್ಯ ಮಟ್ಟದಲ್ಲಿ ಸೌಗಂಧಿಕ ಹೆಸರು ಅಂತಿಮಘಟ್ಟದಲ್ಲಿದೆ. ಇವರಿಗೆ ಅದ್ಯಕ್ಷೆ ಸ್ಥಾನ ತಪ್ಪಿಸಲು ಹಲವರು ಸಂಚು ನೆಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವರು ಸೌಗಂಧಿಕ ಅವರ ವಿರುದ್ದ ರಾಜ್ಯ ನಾಯಕರ ಬಳಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಸೌಗಂಧಿಕ ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ತನ್ನದೇ ಆದ ರೀತಿಯಲ್ಲಿ ಕ್ರಿಯಾಶೀಲ ವಾಗಿ ಕೆಲಸ ಮಾಡಿದ್ದಾರೆ. ಕೊರೋನ ಸಂದರ್ಭದಲ್ಲಿ ಅವರ ಕೆಲಸ ಅದ್ವಿತೀಯ ವಾದುದು. ಮಹಿಳೆಯರನ್ನ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಕೆಲವರು ಸುಖಾ ಸುಮ್ಮನೆ ಇವರ ಮೇಲೆ ಸಲ್ಲದ ಆರೋಪ ಹೊರಿಸುತ್ತಿದ್ದಾರೆ. ಇಷ್ಟು ದಿನ ಇವರೆಲ್ಲಿ ಹೋಗಿದ್ದರು. ಹಾಲಿ ಅಧ್ಯಕ್ಷೆ ಅನಿತಾ ಕುಮಾರಿಯವರ ಅಧ್ಯಕ್ಷಾವಧಿ 6 ವರ್ಷ ಆಗಿರುವ ಹಿನ್ನೆಲೆಯಲ್ಲಿ ಹೊಸ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದ್ದೇ ತಡ ಶಿವಮೊಗ್ಗದ ಮಹಿಳಾ ಕಾಂಗ್ರೆಸ್ಸಿಗರಲ್ಲಿಯೂ ಲಾಬಿ ಶುರುವಾಗಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ, ಸಂಘ ಜೀವಿ ಶ್ರೀಮತಿ ಅನಿತಾ ಕುಮಾರಿಯವರು ಆರು ವರ್ಷಗಳ ಕಾಲ ಶಿವಮೊಗ್ಗ ಜಿಲ್ಲಾ ಮಹಿಳಾ ಅಧ್ಯಕ್ಷ ಸ್ಥಾ...