ಪೋಸ್ಟ್‌ಗಳು

ಫೆಬ್ರವರಿ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಿಕಾರಿಪುರದ ಅಕ್ಷರ ಪ್ರೀ-ಯೂನಿವರ್ಸಿಟಿ ಕಾಲೇಜಿನಲ್ಲಿ ನಿಮ್ಮ ಮಕ್ಕಳ ಭವಿಷ್ಯ ರೂಪಿಸಿಕೊಳ್ಳಿ !!

ಇಮೇಜ್
ಶಿಕಾರಿಪುರದ ಅಕ್ಷರ ಪ್ರೀ-ಯೂನಿವರ್ಸಿಟಿ ಕಾಲೇಜು ಶೈಕ್ಷಣಿಕ ಶಿಸ್ತು, ಸಮರ್ಪಣೆ ಮತ್ತು ನಿರಂತರ ಫಲಿತಾಂಶಗಳ ಪ್ರತೀಕವಾಗಿ ಗುರುತಿಸಿಕೊಂಡಿದೆ. NEET, JEE ಹಾಗೂ KCET ತರಬೇತಿಯಲ್ಲಿ 15 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ಈ ಸಂಸ್ಥೆ, ಫಲಿತಾಂಶಕೇಂದ್ರಿತ ಶಿಕ್ಷಣ ಮತ್ತು ಬಲಿಷ್ಠ ಶೈಕ್ಷಣಿಕ ಸಂಸ್ಕೃತಿಯ ಮೂಲಕ ಪೋಷಕರ ವಿಶ್ವಾಸ ಮತ್ತು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಗಳಿಸಿದೆ. NEET 2025ರಲ್ಲಿ ಅಕ್ಷರ ವಿದ್ಯಾರ್ಥಿಗಳು ಗಳಿಸಿರುವ ಗಮನಾರ್ಹ ಸಾಧನೆಗಳು ಸಂಸ್ಥೆಯ ಗುಣಮಟ್ಟದ ಶಿಕ್ಷಣದ ಬದ್ಧತೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಉನ್ನತ ಶೇಕಡಾವಾರು ಅಂಕಗಳು ಹಾಗೂ ಉತ್ತಮ ಆಲ್ ಇಂಡಿಯಾ ರ್ಯಾಂಕ್‌ಗಳನ್ನು ಪಡೆದು, ಸರಿಯಾದ ಮಾರ್ಗದರ್ಶನ ಮತ್ತು ಆಳವಾದ ವಿಷಯಜ್ಞಾನವೇ ಯಶಸ್ಸಿನ ಮೂಲವೆಂದು ವಿದ್ಯಾರ್ಥಿಗಳು ಸಾಬೀತುಪಡಿಸಿದ್ದಾರೆ. ವೈದ್ಯಕೀಯ ಸೀಟ್ ಸಾಧನೆಗಳು ಹಾಗೂ ಉನ್ನತ PCMB ಮತ್ತು CBSE ಅಂಕಗಳು ಅಕ್ಷರದ ಸಮಗ್ರ ತರಬೇತಿ ವ್ಯವಸ್ಥೆಯ ಬಲವನ್ನು ಮತ್ತಷ್ಟು ದೃಢಪಡಿಸುತ್ತವೆ. ಅಕ್ಷರವನ್ನು ವಿಭಿನ್ನವಾಗಿಸುವುದು ಅದರ ಅನುಭವಸಂಪನ್ನ ಹಾಗೂ ಸಮರ್ಪಿತ ಅಧ್ಯಾಪಕರ ತಂಡ. ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕ ಗಮನ ನೀಡುವ ಮೂಲಕ, ವಾರದ ನಿಯಮಿತ ಪರೀಕ್ಷೆಗಳು, ನಿರಂತರ ಮೌಲ್ಯಮಾಪನ ಮತ್ತು ವೈಯಕ್ತಿಕ ಮಾರ್ಗದರ್ಶನವನ್ನು ಒದಗಿಸಲಾಗುತ್ತದೆ. ಇಲ್ಲಿ ಯಶಸ್ಸು ಆಕಸ್ಮಿಕವಲ್...

ಸ್ನೇಹ ಭಾವದಿಂದ ಉತ್ತಮ ಭಾಂದವ್ಯ ಸಾಧ್ಯ* - ಶ್ರೀಮತಿ ಶಕುಂತಲಾ ಚಂದ್ರಶೇಖರ್

ಇಮೇಜ್
      ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಯ ವತಿಯಿಂದ  ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಲಾಗಿದ್ದ ಸ್ಕೌಟ್ ಗೈಡ್ ಚಳುವಳಿಯ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು. ಸ್ಕೌಟ್ ಚಳುವಳಿಯ ಸಂಸ್ಥಾಪಕರಾದ ಲಾರ್ಡ್ ಬೇಡೆನ್ ಪೋವೆಲ್ ರವರ 169ನೇ ಮತ್ತು ಲೇಡಿ ಬೇಡೆನ್ ಪೋವೆಲ್ ರವರ 139ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಈ ಸಂಸ್ಥಾಪಕ ದಿನಾಚರಣೆ ಮತ್ತು ಚಿಂತನ ಕಾರ್ಯಕ್ರಮದಲ್ಲಿ ಈ ವರ್ಷದ ಧ್ಯೇಯ ವಾಕ್ಯವಾದ  "ನಮ್ಮ ಸ್ನೇಹ " ಕುರಿತು ಮಾತನಾಡಿದರು. ಸರ್ವರೂ ಸ್ನೇಹದಿಂದಿದ್ದು ಪರಸ್ಪರ ಚರ್ಚೆಯ ಮೂಲಕ ಒಮ್ಮತದಿಂದ ಬಾಳ್ವೆ ನಡೆಸಿದರೆ ಬಹಳಷ್ಟು ಸಮಸ್ಯೆಗಳನ್ನು ಸೌಹಾರ್ದದಿಂದ ಬಗೆಹರಿಸಿಕೊಳ್ಳಬಹುದೆಂದು ಹೇಳಿದರು. ಕಾರ್ಯಕ್ರಮವು ಸ್ಕೌಟ್ ಗೈಡ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಜಿಲ್ಲಾ ಸಹಕಾರ್ಯದರ್ಶಿ ಶ್ರೀ ವೈ. ಆರ್. ವೀರೇಶಪ್ಪ ಸರ್ವರನ್ನು ಸ್ವಾಗತಿಸಿದರು. ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಜಿಲ್ಲಾ ತರಬೇತಿ ಆಯುಕ್ತ ಶ್ರೀ ಶಿವಶಂಕರ ರವರು ಪ್ರತಿಜ್ಞೆ ಬೋಧಿಸಿದರು. ಶ್ರೀಮತಿ ಲಕ್ಷ್ಮೀ ರವರು ಚಿಂತನ ದಿನದ ಮಹತ್ವದ ಬಗ್ಗೆ ಮನೋಜ್ಞಾವಾಗಿ ತಿಳಿಸಿಕೊಟ್ಟರು. ವಿವಿಧ ಶಾಲೆಯ ಮಕ್ಕಳು ಸ್ಕೌಟಿಂಗ್ ಗೈಡಿಂಗ್ ಚಳುವಳಿ ಸೇರಿಕೊಂದಡಿರುದರಿಂದ ತಮ್ಮ ಜೀವನದಲ್ಲಿ  ಆಗಿರುವ ಬದಲಾವಣೆ ಬಗ್ಗೆ ತಿಳಿಸಿದರು. ಸ್ಕೌಟ್ ಶಿಕ...

ರೋಟರಿಯಿಂದ ನಿರಂತರ ಸಮಾಜಮುಖಿ ಕಾರ್ಯ

ಇಮೇಜ್
ಶಿವಮೊಗ್ಗ: ರೋಟರಿ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸುವ ಮೂಲಕ ವಿಶ್ವಾದ್ಯಂತ ಸೇವಾ ಕಾರ್ಯ ನಡೆಸುತ್ತಿದೆ ಎಂದು ನಟ ಓಂಗಣೇಶ್ ಉಪ್ಪುಂದ ಹೇಳಿದರು. ನಗರದ ಕಾಸ್ಮೋ ಕ್ಲಬ್‌ನಲ್ಲಿ ರೋಟರಿ ಕ್ಲಬ್ ವಲಯ 10 ಮತ್ತು 11ರ ವತಿಯಿಂದ ಆಯೋಜಿಸಿದ್ದ ವಿಶ್ವ ತಿಳವಳಿಕೆ ಮತ್ತು ಶಾಂತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲರನ್ನು ಒಳಗೊಂಡು ಸೇವಾ ಮನೋಭಾವ ಬೆಳೆಸುವ ಕೆಲಸ ಮಾಡುತ್ತಿರುವ ರೋಟರಿ ಸೇವೆ ಶ್ಲಾಘನೀಯ ಎಂದು ತಿಳಿಸಿದರು. ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಎಲ್ಲರೂ ಒಟ್ಟಾಗಿ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು, ರೋಟರಿ ಸದಸ್ಯರ ಸಂಖ್ಯೆ ಹೆಚ್ಚಿಸುವಲ್ಲಿ ಆದ್ಯತೆ ನೀಡಬೇಕು ಎಂದು ಹೇಳಿದರು. ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಅಧ್ಯಕ್ಷ ಪ್ರಕಾಶ್ ಮೂರ್ತಿ ಮಾತನಾಡಿ, ರೋಟರಿ ಸದಸ್ಯರ ವಿಸ್ತರಣೆಗೆ ರೋಟರ‍್ಯಾಕ್ಟ್ ಕ್ಲಬ್‌ಗಳ ವಿಸ್ತರಣೆ ಬಹು ಮುಖ್ಯ. ರೋಟರಿ ವಿಶ್ವ ತಿಳುವಳಿಕೆ ಮತ್ತು ಶಾಂತಿ ದಿನದಂದು ಸಂಸ್ಕೃತಿ, ರಾಷ್ಟ್ರ ಮತ್ತು ನಂಬಿಕೆಗಳಾದ್ಯಂತ ಜನರನ್ನು ಸಂಪರ್ಕಿಸಿವ ಏಕತೆ ಮನೋಭಾವವನ್ನು ನಾವು ಆಚರಿಸುತ್ತೇವೆ ಎಂದು ಹೇಳಿದರು. ನಿಜವಾದ ಶಾಂತಿ ಇತರರಿಗೆ ತಿಳುವಳಿಕೆ. ಸಹಾನುಭೂತಿ ಮತ್ತು ಸೇವೆಯಿಂದ ಪ್ರಾರಂಭವಾಗುತ್ತದೆ ಎಂದು ರೋಟರಿ ನಮಗೆ ನೆನಪಿಸುತ್ತದೆ. ಒಂದುಗೊಡಿ ಕೆಲಸ ಮಾಡುವ ಮೂಲಕ ಮತ್ತು ಸೇವೆಯನ್ನು ಹೆಚ್ಚಾಗಿ ಮಾಡುವ ಮೂಲಕ ನಾವು ಸ್ನೇಹದ ಸೇತುವೆಗಳನ್ನು ನ...

ಐ ಟಿ ಬಿಯಾಂಡ್ ಬೆಂಗಳೂರು ಕಾರ್ಯಕ್ರಮ ಫೆ.28ಕ್ಕೆ

ಇಮೇಜ್
ಶಿವಮೊಗ್ಗ: ನಗರದ ಜೆ ಎನ್ ಎನ್ ಸಿ ಇ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಫೆಬ್ರವರಿ 28ರಂದು ಶನಿವಾರ ಬೆಂಗಳೂರಿನಾಚೆ ಮಾಹಿತಿ ತಂತ್ರಜ್ಞಾನ ( IT BEYOND BENGALURU ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (ಎಫ್ ಕೆ ಸಿ ಸಿ ಐ ) ಬೆಂಗಳೂರು ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ ) ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಹಿತಿ ತಂತ್ರಜ್ಞಾನ ಕಾರ್ಯಕ್ರಮವನ್ನು ಫೆಬ್ರವರಿ 28ರಂದು ಬೆಳಗ್ಗೆ 10.30ಕ್ಕೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಅಧ್ಯಕ್ಷತೆ ವಹಿಸುವರು. ಎಫ್ ಕೆ ಸಿ ಸಿ ಐ ಅಧ್ಯಕ್ಷೆ ಉಮಾ ರೆಡ್ಡಿ, ಉಪಾಧ್ಯಕ್ಷ ಸಾಯಿ ರಾಮ್ ಪ್ರಸಾದ್, ಮಾಹಿತಿ ತಂತ್ರಜ್ಞಾನದ ಚೇರ್ಮನ್ ಎಚ್.ಎ.ಕಿರಣ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ ) ಉಪಾಧ್ಯಕ್ಷ ಚೇತನ್ ದೀಕ್ಷಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಫೆ.28ರ ಮಧ್ಯಾಹ್ನ 2 ರಿಂದ 4.30ರವರಿಗೆ ಮಂಥನ್ 2026, ನವೋದಯ ಕೃತಕ ಬುದ್ಧಿಮತ್ತೆ ಕುರಿತು ಉಪನ್ಯಾಸ, ಚರ್ಚೆ ಮತ್ತು ಪ್ರಶ್ನೋತ್ತರದ ಕಾರ್ಯಕ್ರಮ ನಡೆಯಲಿದೆ.  ಪ್ರಧಾನ ಭಾಷಣಕಾರರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಲಿದೆ. "ಬೆಂಗಳೂರಿನಾಚೆಗೆ" ಕಾರ್ಯಕ್ರಮವು ಶಿವಮೊ...

ಶಿವಮೊಗ್ಗದಲ್ಲಿ ಅಪ್ರಾಪ್ತ ವಿದ್ಯಾರ್ಥಿ ಹತ್ಯೆ: ಪೊಲೀಸ್ ವೈಫಲ್ಯ ಕಾರಣ? ಕ್ಲೀನ್ ಶಿವಮೊಗ್ಗಕ್ಕೆ ಸಜ್ಜಾಗುವರೆ!? ಎಸ್‌ಪಿ ನಿಖಿಲ್ !!

ಇಮೇಜ್
ಶಿವಮೊಗ್ಗ: ವಿಶೇಷ ತರಗತಿ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದ 10ನೇ ತರಗತಿ ವಿದ್ಯಾರ್ಥಿ ಸ್ನೇಹಿತರ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿ ಪ್ರಾಣ ಕಳೆದುಕೊಂಡ ಘಟನೆ ಶಿವಮೊಗ್ಗದ ಸೂಳೆಬೈಲು ಬಡಾವಣೆಯ ಸರ್ಕಾರಿ ಶಾಲೆ ಆವರಣದ ಹೊರಗಡೆ ನಡೆದಿದ್ದು, ನಗರದಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಮೃತ ವಿದ್ಯಾರ್ಥಿ ಸಂಕೇತ್ (15), ಊರಗಡೂರು ನಿವಾಸಿ ಕುಮಾರ್ ಅವರ ಪುತ್ರ. ಚಾಲಕ ವೃತ್ತಿ ಮಾಡಿಕೊಂಡಿರುವ ಕುಮಾರ್ ಅವರ ಕುಟುಂಬಕ್ಕೆ ಈ ದುರ್ಘಟನೆ ಮಿಂಚಿನಂತೆ ಬಡಿದಿದೆ. ಕಳೆದ ಎರಡು ತಿಂಗಳಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ನಡೆಯುತ್ತಿದ್ದ ವಿಶೇಷ ತರಗತಿ ಮುಗಿದ ಬಳಿಕ ರಾತ್ರಿ ಸುಮಾರು 8 ಗಂಟೆ ವೇಳೆಗೆ ಶಾಲೆಯಿಂದ ಹೊರಬಂದ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಜಗಳ ಬಿಡಿಸಲು ಹೋದ ಸಂಕೇತ್ ಎದೆ ಭಾಗಕ್ಕೆ ತೀವ್ರ ಏಟು ಬಿದ್ದ ಪರಿಣಾಮ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಘಟನೆಯ ನಂತರ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, “ಮಾತಿಗೆ ಮಾತು ಬೆಳೆದು ನಡೆದ ಆಕಸ್ಮಿಕ ಘಟನೆ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, ಎಸ್‌ಪಿ ಅವರ ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸ...

ಶಿವಮೊಗ್ಗದಲ್ಲಿ ಕೈಗಾರಿಕಾ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಅವಶ್ಯ

ಇಮೇಜ್
ಶಿವಮೊಗ್ಗ: ಶಿವಮೊಗ್ಗ ಕೈಗಾರಿಕಾ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಲು ಈಗಾಗಲೇ ಸ್ಥಾಪಿತವಾಗಿರುವ ಕೈಗಾರಿಕೆಗಳಿಗೆ ಹೆಚ್ಚುವರಿ ವಿದ್ಯುತ್ ಸಂಪರ್ಕ ಹಾಗೂ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು  ಕೆಐಎಡಿಬಿ ವತಿಯಿಂದ ಹೊಸ ಕೈಗಾರಿಕಾ ಭೂಮಿ  ಒದಗಿಸುವ ಅವಶ್ಯಕತೆ ಇದೆ ಎಂದು ಶಿವಮೊಗ್ಗ ಭದ್ರಾವತಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಡಿ.ಜಿ.ಬೆನಕಪ್ಪ ಹೇಳಿದರು ಬೆಂಗಳೂರಿನ ಎಫ್‌ಕೆಸಿಸಿಐ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಇತ್ತೀಚಿನ ಸರ್ಕಾರದ ಉದ್ದೇಶಿತ ಕನಿಷ್ಟ ವೇತನ ಜಾರಿಯನ್ನು ತಡೆ ಹಿಡಿದು, ಎಂಎಸ್‌ಎಂಇ ಕೈಗಾರಿಕೆಗಳು ಹೊರ ರಾಜ್ಯಗಳಿಗಿಂತ ಪೈಪೋಟಿ ದರದಲ್ಲಿ ಉತ್ಪಾದನೆ ಮಾಡಲು ಸಹಕರಿಸುವಂತ ವಾತಾವರಣ ನಿರ್ಮಿಸಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು. ಕೆಐಎಡಿಬಿ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಕೈಗಾರಿಕೆಗಳ ಉದ್ದೇಶಿತ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಹಾಗೂ ಹೊಸ ಕೈಗಾರಿಕೆ ಸ್ಥಾಪಿಸಲು ಹೆಚ್ಚುವರಿ ವಿದ್ಯುತ್ ಸಂಪರ್ಕವನ್ನು ಮೆಸ್ಕಾಂ ಕಲ್ಪಿಸುತ್ತಿಲ್ಲ. ಹೀಗಾಗಿ ಕೈಗಾರಿಕೆಗಳು ಗ್ರಾಹಕರ ಬೇಡಿಕೆಯನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಹಿನ್ನಡೆಯಾಗಿದೆ. ವಿದೇಶಿ ಗ್ರಾಹಕರು ಬೇರೆ ರಾಜ್ಯಗಳತ್ತ ಮುಖ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿದರು. ಶಿವಮೊಗ್ಗದಲ್ಲಿ ಕೆಐಎಡಿಬಿ ನಿರ್ಮಿತ ಸೋಗಾನೆ ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರ ರೈತರಿಗೆ ಸಾಗುವಳಿ ಚೀಟಿ ಹಾಗೂ ಹಲವಾರು ಎಕರೆಗ...

ಸಿಡಿಪಿ ಯೋಜನೆಗೆ ಕುರಿತು ಸರ್ಕಾರಿ ಆದೇಶ ಜಾರಿ ಪತ್ರಕರ್ತ ಎಸ್. ಎಲ್. ನಿಖಿಲ್ ಮನವಿಗೆ ಸರ್ಕಾರದ ಸ್ಪಂದನೆ

ಇಮೇಜ್
ಶಿವಮೊಗ್ಗ: ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ) ಅಡಿಯಲ್ಲಿ ಭೂಮಿಯ ಉಪಯೋಗಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ಆಡಳಿತಾತ್ಮಕ ಗೊಂದಲವನ್ನು ನಿವಾರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹಾಗೂ ಸ್ಪಷ್ಟ ಸರ್ಕಾರಿ ಆದೇಶವನ್ನು ಜಾರಿಗೊಳಿಸಿದೆ. ಈ ಕ್ರಮವು ಪತ್ರಕರ್ತ ಎಸ್. ಎಲ್. ನಿಖಿಲ್ ಅವರು ಸಾರ್ವಜನಿಕ ಹಿತಾಸಕ್ತಿಯನ್ನು ಮನಗಂಡು ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಜಾರಿಯಾಗಿದೆ. ದಿನಾಂಕ 12.02.2026 ರಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾನ್ಯ ಕಂದಾಯ ಸಚಿವರಾದ ಸನ್ಮಾನ್ಯ ಶ್ರೀ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ಜಿಲ್ಲಾ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯ ನಂತರ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತ ಎಸ್. ಎಲ್. ನಿಖಿಲ್ ಅವರು, ಸಿಡಿಪಿ ಯೋಜನೆ ಪ್ರಕಾರ ಭೂಮಿಯನ್ನು ಉಪಯೋಗಿಸಲು ಭೂ ಪರಿವರ್ತನೆ ಅಗತ್ಯವಿಲ್ಲ ಎಂದು ಮಾನ್ಯ ಸಚಿವರು ವಿಧಾನಸಭೆಯಲ್ಲಿ ನೀಡಿದ್ದ ಸ್ಪಷ್ಟ ಹೇಳಿಕೆಯಿದ್ದರೂ, ಈ ಕುರಿತು ಸರ್ಕಾರದಿಂದ ಅಧಿಕೃತ ಹಾಗೂ ಸ್ಪಷ್ಟ ಆದೇಶ ಹೊರಬರದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಅಧಿಕಾರಿಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ಇದರ ಪರಿಣಾಮವಾಗಿ ಅನೇಕ ಕಡತಗಳು ನಿರ್ಧಾರಕ್ಕಾಗಿ ಉಳಿದುಕೊಂಡಿದ್ದು, ಸಾರ್ವಜನಿಕರಿಗೆ ಅನಾವಶ್ಯಕ ವಿಳಂಬ ಮತ್ತು ಆಡಳಿತಾತ್ಮಕ ತೊಂದರೆ ಉಂಟಾಗುತ್ತಿದೆ ಎಂಬುದನ್ನು ಅವರು ವಿವರಿಸಿದರು....

ಸಮಾಜ ಕಲ್ಯಾಣಕ್ಕಾಗಿ ಸಮರ್ಪಿತ ಸಂಸ್ಥೆ

ಇಮೇಜ್
ಶಿವಮೊಗ್ಗ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥೆಯು ಸಮಾಜದ ಕಲ್ಯಾಣಕ್ಕಾಗಿ ಸಮರ್ಪಣೆಯಾಗಿದ್ದು, ತ್ಯಾಗ ಮನೋಭಾವ ಹೊಂದಿರುವ ಮಹಿಳೆಯರು ನಡೆಸುತ್ತಿರುವ ಸೇವಾ ಸಂಸ್ಥೆಯಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು. ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿದ್ದ 90ನೇ ವಾರ್ಷಿಕೋತ್ಸವ ಸಮಾರಂಭ ಧ್ವಜಾರೋಹಣ  ಮಾಡುವ ಮೂಲಕ ಉದ್ಘಾಟಿಸಿ  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಂತರಾಷ್ಟ್ರೀಯ ಸಂಸ್ಥೆಯಾಗಿ ಎಲ್ಲ ಹಿನ್ನೆಲೆಯ ಜನರಿಗೆ ಧ್ಯಾನವನ್ನು ಕಲಿಯಲು ಮತ್ತು ಸಾರ್ವತ್ರಿಕ ತತ್ವಗಳು ಮತ್ತು ಮೌಲ್ಯಗಳ ಬಗ್ಗೆ ಅವರ ತಿಳವಳಿಕೆ ಹೆಚ್ಚಿಸಲು ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಕಲಿಕಾ ಸಂಪನ್ಮೂಲಗಳ ಮೂಲಕ ಅವಕಾಶ ನೀಡುತ್ತಿದೆ. ಮೌಲ್ಯಾಧಾರಿತ ಸಮಾಜವನ್ನು ಸ್ಥಾಪಿಸುವ ಗುರಿಗೆ ಸಮರ್ಪಿತವಾಗಿವೆ. ಸಂಸ್ಥೆಯು ಕಾಳಜಿಯುಳ್ಳ, ಸಹಕಾರಿ ಮತ್ತು ಬೆಂಬಲ ನೀಡುವ ವಾತಾವರಣವನ್ನು ಒದಗಿಸುತ್ತದೆ ಎಂದು ತಿಳಿಸಿದರು. ಶಿವಮೊಗ್ಗ ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಸ್ವಾತಿ ಅಕ್ಕ ಮಾತನಾಡಿ, ಸಂಸ್ಥೆಯು ನೀಡುವ ಶಿಕ್ಷಣವು ಸ್ಪಷ್ಟವಾಗಿ ಆಧ್ಯಾತ್ಮಿಕವಾಗಿದ್ದರೂ, ನೀತಿಶಾಸ್ತ್ರ, ಪ್ರಾಯೋಗಿಕ ಮನೋವಿಜ್ಞಾನ, ತತ್ವಶಾಸ್ತ್ರ, ವಿಶ್ವ ಇತಿಹಾಸ ಮತ್ತು ಸಂಸ್ಕೃತಿಯ ಸಾರಾಂಶ, ಸಮಾಜಶಾಸ್ತ್ರ, ರಾಜಕೀಯ ವಿಜ್ಞ...

ಸ್ಕೌಟ್ ಮತ್ತು ಗೈಡ್ಸ್ ಶತಮಾನೋತ್ಸವ

ಇಮೇಜ್
  ದಿನಾಂಕ 22/2/2026ರಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಶಿಕಾರಿಪುರ ಇಂದು ಸ್ಕೌಟ್ಸ್ ಅಂಡ್ ಗೈಡ್ಸ್ ಅಂತಾರಾಷ್ಟ್ರೀಯ ಸಂಸ್ಥೇಯ ಸಂಸ್ಥಾಪಕರಾದ ಶ್ರೀ ಬೆಡನ್ ಪೊವೆಲ್ ರವರ ಜನ್ಮದಿನಾಚರಣೆ ಮತ್ತು ವಿಶ್ವ ಚಿಂತಕರ ದಿನಾಚರಣೆ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಶತಮಾನೋತ್ಸವ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದಲ್ಲಿ ಶಿಕಾರಿಪುರ ತಾಲೂಕಿನ ಶಾಲಾ-ಕಾಲೇಜುಗಳಿಂದ ಕಬ್ ಬುಲ್ ಬುಲ್   ಸ್ಕೌಟ್ ಮತ್ತು ಗೈಡ್   ರೋವರ್ಸ್ ಮತ್ತು ರೇಂಜರ್ಸ್  ‌ಬನ್ನಿಸ್ ಮಕ್ಕಳು ಆಗಮಿಸಿದ್ದರು  ಕಾರ್ಯಕ್ರಮವು ಸ್ಕೌಟ್ ಪ್ರಾರ್ಥನೆಯೊಂದಿಗೆ  ಪ್ರಾರಂಭಿಸಲಾಯಿತು  ಮುಖ್ಯ ರಸ್ತೆಗಳಲ್ಲಿ ಪತ ಸಂಚಲನ  ಮಾಡಿ ಮಾನವ ಸರಪಳಿಯನ್ನು ನಿರ್ಮಿಸಿ, ಕಾರ್ಯಕ್ರಮವನ್ನು ಅಮೋಘವಾಗಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಯ ಕಾರ್ಯ ಅಧ್ಯಕ್ಷರಾದ ಸಿಎಂ ಪರಮೇಶ್ವರಯ್ಯ ಕಾರ್ಯದರ್ಶಿಗಳಾದ ಶ್ರೀರಾಮಚಂದ್ರಪ್ಪ  ಖಜಾಂಚಿಗಳಾದ   ಶ್ರೀ ಎಸ್ ಕೆ ಚಂದ್ರಪ್ಪ  ಜಿಲ್ಲಾ ಸಾಹಾಯಕ. ಆಯುಕ್ತರಾದ  ಶ್ರೀ ಡಾ. ಸುನಿಲ್ ಕುಮಾರ್.  ರೊವರ್ಸ ಲೀಡರ್ಸ್  ಶ್ರೀ ಸದಾಶಿವಯ್ಯ ಜಿ ಜೆ ಸಿ ಶಿಕಾರಿಪುರ  ಫ್ಲಾಗ್ ಲೀಡರ್ಸ್ ಆದ ಶ್ರೀಮತಿ ಶಾರದಮ್ಮ ಜಿ ಹೆಚ್ ಪಿ ಎಸ್ ಈಸೂರು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಹಾಗೂ ಪೋಷಕರು  ಉಪಸ್...

ಧ್ಯಾನಸಕ್ತ ಆದಿಯೋಗಿ ಶಿವನಿಗೆ ಭಜನೆ ಹಾಗೂ ಭಕ್ತಿ ಗೀತೆಗಳ ಸಿಂಚನ

ಇಮೇಜ್
  ಶಿವಗಂಗಾ ಯೋಗ ಕೇಂದ್ರ ಕಲ್ಲಹಳ್ಳಿಯಲ್ಲಿ ಮಹಾಶಿವರಾತ್ರಿಯ ಅಂಗವಾಗಿ ನಗರದ 38 ಯೋಗ ಶಾಖೆಗಳಿಂದ 500ಕ್ಕೂ ಹೆಚ್ಚು ಶಿಕ್ಷಣಾರ್ಥಿಗಳಿಂದ   ಬ್ರಾಹ್ಮಿ ಕಾಲದಲ್ಲಿ ಸಾಮೂಹಿಕ ಭಜನೆ ಮತ್ತು ಭಕ್ತಿಗೀತೆಗಳಿಂದ ಶ್ರೀ ಶಿವಗಂಗಾ ಯೋಗ ಕೇಂದ್ರದ ಸಂಪೂರ್ಣ ಯೋಗ ಆರೋಗ್ಯಧಾಮ ಆವರಣದಲ್ಲಿ ಇರುವ ಧ್ಯಾನಸಕ್ತ ಆದಿಯೋಗಿ ಶಿವನಿಗೆ ಭಜನೆ ಹಾಗೂ ಭಕ್ತಿ ಗೀತೆಗಳ ಸಿಂಚನ ಮಾಡಲಾಯಿತು ಕಾರ್ಯಕ್ರಮದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಎಚ್ ಎಮ್  ಚಂದ್ರಶೇಖರಯ್ಯ ಮಾತನಾಡುತ್ತಾ ಭಕ್ತಿಗೀತೆಗಳು ಭಜನೆಗಳು ನಮಗೆ ಸಂಸ್ಕಾರವನ್ನ ನೀಡುತ್ತವೆ ನಮ್ಮ ಖಿನ್ನತೆ ದೂರವಾಗುತ್ತದೆ ನಮ್ಮ ದೇಹದಲ್ಲಿ ಭಕ್ತಿ ಭಾವ ಸಿಂಚನವಾಗುತ್ತದೆ ಜೊತೆಗೆ ಧ್ವನಿ ಸಂಸ್ಕರಣ ಗೊಳ್ಳುತ್ತದೆ ಎಂದ ಅವರು ಪ್ರತಿವರ್ಷ ಈ ಸ್ಥಳದಲ್ಲಿ ಸಾವಿರಾರು ಜನ ಯೋಗ ಬಂಧುಗಳು ಭಜನೆ ಹಾಗೂ ಭಕ್ತಿ ಗೀತೆಗಳು ಈ ಸ್ಥಳಕ್ಕೆ ವಿಶೇಷವಾದ ಶಕ್ತಿ ಇದೆ ಎಂದು ನುಡಿದರು 38 ಕೇಂದ್ರದ ಯೋಗ ಬಂದುಗಳು ವಿವಿಧ ರೀತಿಯ ಭಜನೆ ಶಿವನಿಗೆ ಅರ್ಪಿಸಿದರು ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಜಿಎಸ್ ಓಂಕಾರ್. ವಿಜಯ ಕೃಷ್ಣ. ಹರೀಶ್. ಕಾಟನ್ ಜಗದೀಶ್. ವಿಜಯ ಬಾಯರ್  38 ಶಾಖೆಗಳ ಶಿಕ್ಷಕರು ಉಪಸ್ಥಿತರಿದ್ದರು

ಗೋಪಾಲಗೌಡ ಹಾಗೂ ಸ್ವಾಮಿ ವಿವೇಕಾನಂದ ಬಡಾವಣೆಗಳ ಮೂಲಭೂತ ಸೌಕರ್ಯ ಒದಗಿಸಲು ಪಾಲಿಕೆ ಆಯುಕ್ತರಿಗೆ ಒತ್ತಯ

ಇಮೇಜ್
ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆ ಹಾಗೂ ಸ್ವಾಮಿ ವಿವೇಕಾನಂದ ಬಡಾವಣೆಯು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾದ ವಿಶಾಲ ಪ್ರದೇಶವನ್ನೊಳಗೊಂಡ ಪ್ರತಿಷ್ಠಿತ ಬಡಾವಣೆಯಾಗಿದ್ದು, ಸುಶಿಕ್ಷಿತರು ಹೆಚ್ಚಾಗಿ ವಾಸಿಸುವ ಬಡಾವಣೆಯಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಹಾನಗರ ಪಾಲಿಕೆಗೆ ಹಂಸ್ತಾಂತರವಾಗಿದ್ದು, ನಿರೀಕ್ಷಿತ ಮಟ್ಟದ ಅಭಿವೃದ್ಧಿಯಾಗಿರುವುದಿಲ್ಲ. ಆದ್ದರಿಂದ ತಾವುಗಳು ನಿವಾಸಿಗಳ ಬಹುದಿನದ ಬೇಡಿಕೆಗೆ ಪೂರ್ವಕವಾಗಿ ಸ್ಪಂದಿಸಿ ಆದ್ಯತೆ ಮೇರೆಗೆ ಈ ಎರಡು ಅವಳಿ ಬಡಾವಣೆಯ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದೆ. ಪ್ರಮುಖ ಬೇಡಿಕೆಗಳು 1. ಗೋಪಾಲಗೌಡ ಬಡಾವಣೆಯ ದೇವಂಗಿ ಹೈಲೆಟ್ಸ್ ಅಪಾರ್ಟಮೆಂಟ್ ಪಕ್ಕದ ರಸ್ತೆ ಡಾಂಬರೀಕರಣ. 2. ಬಂಟರ ಭವನ ಹತ್ತಿರದ ರಾಜಕಾಲುವೆ ರಸ್ತೆಯು ಕುಸಿದು ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಸದರಿ ರಸ್ತೆ ಕಾಮಗಾರಿ ಕೈಗೊಳ್ಳುವುದು. 3. ಎ ಬ್ಲಾಕ್ನ ಪುರಂಧರ ಪಾರ್ಕ್ನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಿಸುವುದು. 4. ಗುಡ್ಲಕ್ ಸರ್ಕಲ್ನ ಎ ಬ್ಲಾಕ್ಗೆ ಹೊಂದಿಕೊಂಡಿರುವ ಮೊದಲನೆ ರಸ್ತೆ ಕಾಮಗಾರಿಗೆ ಆದ್ಯತೆ ನೀಡುವುದು. 5. ಪಾರ್ಕ್ಗಳನ್ನು ಅಭಿವೃದ್ಧಿ ಪಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸುವುದು. 6. ಬೀದಿ ದೀಪಗಳ ನಿರ್ವಹಣೆ ಇಲ್ಲದೆ ದೀಪಗಳು ಹಾಳಾಗಿದ್ದು, ತುರ್ತು ಕ್ರಮ ವಹಿಸುವುದು. 7. ಎರಡು ಬಡಾವಣೆಗಳು ವಿಶಾಲ ಪ್ರದೇಶ ಹೊಂದಿದ್ದು, ಪೌರಕಾರ್ಮಿಕ...

"ಪ್ರತಿ ಸವಾಲಿನೊಳಗೂ ಒಂದು ಅವಕಾಶ ಅಡಗಿದೆ" - ಪಾಥ್ವೇಸ್ ಘಟಕದ ವತಿಯಿಂದ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ರಸಪ್ರಶ್ನಾ ಕಾರ್ಯಕ್ರಮ

ಇಮೇಜ್
ದಿನಾಂಕ 19 ಫೆಬ್ರವರಿ, 2026 : ಪಾಥ್ವೇಸ್ ಘಟಕದ ವತಿಯಿಂದ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ರಸಪ್ರಶ್ನಾ ಕಾರ್ಯಕ್ರಮ.  ಪ್ರೊ. ತಿಮ್ಮರಾಯಪ್ಪ, ಕುಲಸಚಿವರು (ಮೌಲ್ಯಮಾಪನ), ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಇವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಜೊತೆಗೆ ಇತರೆ ಶೈಕ್ಷಣಿಕ ಚಟುವಟಿಕೆಗಳ ಮಹತ್ವವನ್ನು ವಿವರಿಸಿದರು ಮತ್ತು ಈ ರೀತಿಯ ರಸಪ್ರಶ್ನೆ ಸ್ಪರ್ಧೆಗಳು ವಿದ್ಯಾರ್ಥಿಗಳ ಭೌದ್ಧಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಶ್ರೀ. ಹೇಮಂತ್ ಎನ್. ಐಎಎಸ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾಪಂಚಾಯತ್, ಶಿವಮೊಗ್ಗ, ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಜೀವನದಲ್ಲಿ ಮಹತ್ತರವಾದ ಕನಸನ್ನು ಕಾಣಬೇಕು ಹಾಗೂ ಆ ಕನಸುಗಳನ್ನು ನನಸಾಗಿಸಾಲು ಪ್ರತಿನಿತ್ಯ ಶ್ರಮವಹಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ತಮ್ಮ ವಿಧ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗಾಗಿ ತಮ್ಮನ್ನು ತಾವು ತೊಡಗಿಸಿಕೊಕೊಳ್ಳಬೇಕೆಂದು ನೆರೆದಿರುವ ವಿಧ್ಯಾರ್ಥಿಗಳಿಗೆ ತಿಳಿಹೇಳಿದರು. ಶ್ರೀ ಜಿ. ವಿಜಯ್ ಕುಮಾರ್, ಉಪಾಧ್ಯಕ್ಷರು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಇವರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಆಳವಾದ ಅಧ್ಯಯನ ಕಡಿಮೆಯಾಗುತ್ತಿದೆ, ಅದರಲ್...

ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಶಿವಮೊಗ್ಗದಲ್ಲಿ ಹೆಚ್ಚಿನ ಅವಕಾಶ

ಇಮೇಜ್
ಶಿವಮೊಗ್ಗ: ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಶಿವಮೊಗ್ಗದಲ್ಲಿ ಹೆಚ್ಚಿನ ಅವಕಾಶಗಳಿವೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಬೆಂಗಳೂರಿನಾಚೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಶಿವಮೊಗ್ಗ ನಗರವನ್ನು ಮಾಹಿತಿ ತಂತ್ರಜ್ಞಾನದ ವಾಣಿಜ್ಯದ ಕೇಂದ್ರವಾಗಿ ಪರಿವರ್ತಿಸುವುದು, ಬೆಂಗಳೂರಿನ ಮೇಲಿನ ಹೊರೆ ಕಡಿಮೆ ಮಾಡುವುದು ಮಾಹಿತಿ ತಂತ್ರಜ್ಞಾನ ಮತ್ತು ನಾವೀನ್ಯತೆ ಸಂಬಂಧಿತ ಚಟುವಟಿಕೆಯನ್ನು ಶಿವಮೊಗ್ಗ ನಗರಕ್ಕೆ ಸ್ಥಳಾಂತರಿಸುವಂತೆ ಸರ್ಕಾರದ ಗಮನ ಸೆಳೆಯುವುದು ಬೆಂಗಳೂರಿನಾಚೆ ಕಾರ್ಯಕ್ರಮದ ಗುರಿಯಾಗಿದೆ ಎಂದು ತಿಳಿಸಿದರು. ಫೆಬ್ರವರಿ 28ಕ್ಕೆ ಶಿವಮೊಗ್ಗದ ಜೆಎನ್‌ಎನ್‌ಸಿಇ ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (ಎಫ್‌ಕೆಸಿಸಿಐ) ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ ) ಸಹಯೋಗದೊಂದಿಗೆ ಬೆಂಗಳೂರಿನಾಚೆ ಮಾಹಿತಿ ತಂತ್ರಜ್ಞಾನ ಕಾರ್ಯಕ್ರಮ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಮಾಹಿತಿ ತಂತ್ರಜ್ಞಾನ ಪ್ರತಿಭಾವಂತರ ಸಂಖ್ಯೆ ಸಾಕಷ್ಟಿದ್ದು, ಬೌದ್ಧಿಕ ಬಂಡವಾಳ, ಅಭಿವೃದ್ಧಿ ಹೊಂದುತ್ತಿರುವ ಐಟಿ ಪರಿಸರ ವ್ಯವಸ್ಥೆ,  ಐಟಿ ಎಸ್‌ಇಝಡ್ ಮತ್ತು ಟೆಕ್ ಪಾರ್ಕ್, ಎಂಜಿನಿಯರಿಂಗ್...

ಅವೈಜ್ಞಾನಿಕ ರಸ್ತೆ ಹಂಪ್‌ ಗೆ ಅಮಾಯಕ ಯುವಕ ಬಲಿ !! ಅನಾಥರದ ಮೂರು ಮಕ್ಕಳು !?

ಇಮೇಜ್
ಸವಳಂಗ ರಸ್ತೆ ಅಪಘಾತ: ಅಮಾಯಕ ಯುವಕ ಸಯ್ಯದ್ ಸುಹೀಲ್ ಉಲ್ಲಾ ದುರ್ಮರಣ – PWD ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ ಶಿವಮೊಗ್ಗ: ಸವಳಂಗ ರಸ್ತೆ ಪ್ರದೇಶದಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ಹಾಗೂ ಸೂಚನಾ ಫಲಕವಿಲ್ಲದ ರಸ್ತೆ ಹಂಪ್‌ಗಳು ಮತ್ತೊಂದು ಅಮೂಲ್ಯ ಜೀವವನ್ನು ಕಿತ್ತುಕೊಂಡಿರುವ ಘಟನೆ ಶಿವಮೊಗ್ಗವನ್ನು ಬೆಚ್ಚಿಬೀಳಿಸಿದೆ. ದಿನಾಂಕ 12 ಫೆಬ್ರವರಿ 2026ರ ರಾತ್ರಿ 11.30ರ ಸುಮಾರಿಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಯ್ಯದ್ ಸುಹೀಲ್ ಉಲ್ಲಾ (32) ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ 14 ಫೆಬ್ರವರಿ 2026ರ ಮಧ್ಯಾಹ್ನ 12.05ಕ್ಕೆ ಕೊನೆಯುಸಿರೆಳೆದಿದ್ದಾರೆ. ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ, ಯಾವುದೇ ಮುನ್ನಚ್ಚರಿಕೆ ಫಲಕ, ರಿಫ್ಲೆಕ್ಟರ್ ಅಥವಾ ಮಾನದಂಡಗಳಿಲ್ಲದ ರಸ್ತೆ ಹಂಪ್‌ಗೆ ಬೈಕ್ ಡಿಕ್ಕಿ ಹೊಡೆದು ಅವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಸ್ಥಳೀಯರ ಪ್ರಕಾರ ಇದೇ ರಸ್ತೆಯಲ್ಲಿ ಹಂಪ್‌ಗಳ ಕಾರಣದಿಂದ ಅನೇಕ ಬಾರಿ ಅಪಘಾತಗಳು ಸಂಭವಿಸಿದ್ದರೂ, ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಈ ದುರಂತಕ್ಕೆ ನೇರ ಕಾರಣವಾಗಿದೆ. ಮೃತ ಸಯ್ಯದ್ ಸುಹೀಲ್ ಉಲ್ಲಾ ಅವರು ಸಯ್ಯದ್ ಜಿಯಾ ಉಲ್ಲಾ ಮತ್ತು ಸಂಜಿದಾ ಬಾನು ಅವರ ಪುತ್ರ. ಪಿಯುಸಿ ಹಾಗೂ ಐಟಿಐ ವಿದ್ಯಾಭ್ಯಾಸ ಪಡೆದಿದ್ದ ಅವರು, ಕಳೆದ 15 ವರ್ಷಗಳಿಂದ ಸಂಗೀತಾ ಸ್ಟೋರ್‌ನಲ್ಲಿ ಮ್ಯಾನೇಜರ್ ಆಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದರು. ಶಾಂತ ಸ್ವಭಾವ,...

ಭಜನೆಯು ಸಾಮಾಜಿಕ ಪರಿವರ್ತನೆಯ ಶಕ್ತಿ

ಇಮೇಜ್
ಶಿವಮೊಗ್ಗ: ಭಗವಂತನ ನಾಮವನ್ನು ಶ್ರದ್ಧೆಯಿಂದ ಉಚ್ಚರಿಸುವಾಗ ಮನಸ್ಸು ಕ್ರಮೇಣ ಶುದ್ಧವಾಗುತ್ತದೆ ಎಂದು ಭಜನಾ ಪರಿಷತ್ ಶಿವಮೊಗ್ಗ ಕಾರ್ಯದರ್ಶಿ ಶಬರೀಶ್ ಕಣ್ಣನ್ ಹೇಳಿದರು. ಮಹಾಶಿವರಾತ್ರಿ ಪ್ರಯುಕ್ತ ಫ್ರೆಂಡ್ಸ್ ಸೆಂಟರ್ ವತಿಯಿಂದ ಆಯೋಜಿಸಿದ್ದ ಭಜನಾ ಕಾರ್ಯಕ್ರಮದಲ್ಲಿ ಮಾತನಾಡಿ, ಚಿತ್ತಶುದ್ಧಿಯೇ ಆಧ್ಯಾತ್ಮಿಕ ಜೀವನದ ಮೊದಲ ಹೆಜ್ಜೆ. ಭಜನೆಯ ಮೂಲಕ ಮನಸ್ಸಿನಲ್ಲಿ ನೆಲೆಯೂರಿರುವ ಅಹಂಕಾರ, ಅಸೂಯೆ, ಕ್ರೋಧ ಮತ್ತು ಲೋಭದಂತಹ ದುರ್ಗುಣಗಳು ನಿಧಾನವಾಗಿ ಕರಗುತ್ತವೆ. ಅವುಗಳ ಸ್ಥಾನದಲ್ಲಿ ಪ್ರೀತಿ, ಶಾಂತಿ, ಸಹನೆ ಮತ್ತು ಕ್ಷಮೆಯಂತಹ ಸದ್ಗುಣಗಳು ಬೆಳೆಸಿಕೊಳ್ಳುತ್ತವೆ ಎಂದು ತಿಳಿಸಿದರು. ಭಜನೆ ಪ್ರೀತಿಯನ್ನು ಜಾಗೃತಗೊಳಿಸುವ ಪ್ರಕ್ರಿಯೆ. ನಿಷ್ಕಾಮ ಭಾವದಿಂದ ಭಗವಂತನ ನಾಮಸ್ಮರಣೆ ಮಾಡುವುದು ಮತ್ತು ಅವನ ಲೀಲೆಗಳನ್ನು ಚಿಂತಿಸುವುದು ಜೀವನದ ಶ್ರೇಯಸ್ಸಿನ ಅತ್ಯುತ್ತಮ ಉಪಾಯವಾಗಿದೆ. ಫಲಾಪೇಕ್ಷೆ ಇಲ್ಲದೆ ಮಾಡುವ ಭಜನೆ ಮನಸ್ಸನ್ನು ಲಘುವಾಗಿಸಿ, ಜೀವನದ ಸಂಕಷ್ಟಗಳನ್ನು ಸಮಾಧಾನದಿಂದ ಎದುರಿಸುವ ಶಕ್ತಿಯನ್ನು ನೀಡುತ್ತದೆ ಎಂದರು. ಭಜನೆಯ ಮತ್ತೊಂದು ಪ್ರಮುಖ ಅಂಶ ಸಮಾಜದ ಮೇಲೆ ಅದರ ಪರಿಣಾಮ. ಭಜನಾ ಮಂಡಳಿಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಮತ್ತು ಸಂಘಟನೆ ಸಾಧ್ಯವಾಗುತ್ತದೆ. ವಿಭಿನ್ನ ವರ್ಗ, ವಯಸ್ಸು ಮತ್ತು ಹಿನ್ನೆಲೆಯ ಜನರು ಒಂದೇ ಸ್ಥಳದಲ್ಲಿ ಸೇರಿ ಭಗವಂತನ ನಾಮವನ್ನು ಹಾಡುವಾಗ ಭೇದಭಾವ ಕರಗುತ್ತದೆ. ಪರಸ್ಪರ ಗೌರವ, ಸಹಕಾರ ಮತ್ತು ಸಹೋದರತ್ವ ಬೆಳೆಯುತ್...

ಸೈಲೆಂಟ್ ವರ್ಕರ್ಸ್ ಗಳಾದ . ಅಂಚೆ ಇಲಾಖೆಯ ಪೋಸ್ಟ್ ಮ್ಯಾನ್ ಮತ್ತು ಎಂ ಟಿ ಎಸ್ ವರ್ಗದವರಿಗೆ ವಿಶೇಷ ಸನ್ಮಾನ

ಇಮೇಜ್
  ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ನವಲೆ. ಇವರ ವತಿಯಿಂದ ಗುಡ್ಡಗಾಡುಗಳಲ್ಲಿ ಹಾಗೂ ಮಳೆ ಚಳಿ ಎಲ್ಲಾ ಸಮಯದಲ್ಲೂ ಪ್ರತಿಯೊಂದು ಮೂಲೆ ಮೂಲೆಗಳಿಗೆ ಹೋಗಿ  ಯಾವ ಪಲಾಪೇಕ್ಷೆ ಇಲ್ಲದೆ ಸರಿಯಾದ ಸಮಯಕ್ಕೆ ಅಂಚೆ ಸೇವೆ ಸಲ್ಲಿಸುತ್ತಿರುವ. ಸೈಲೆಂಟ್ ವರ್ಕರ್ಸ್ ಸೇವಾ ನಿರತ ಅಂಚೆ ಇಲಾಖೆಯ 70 ಜನ.ಪೋಸ್ಟ್ ಮ್ಯಾನ್ ಮತ್ತು ಎಂಟಿಎಸ್ ವರ್ಗದವರಿಗೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸಂಸ್ಥೆ ವತಿಯಿಂದ ಎಲ್ಲರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ನೆನಪಿನ ಕಾಣಿಕೆಗಳು ಜೊತೆಗೆ ಶಾಲು ಹಾರ ಹಾಗೂ ಸಿಹಿ ಬಾಕ್ಸ್ಗಳನ್ನು ನೀಡಿ ತಿಲಕ ಇಟ್ಟು ಸನ್ಮಾನಿಸಲಾಯಿತು. ಸಮಾರಂಭದಲ್ಲಿ  ರಾಜಯೋಗ ಶಿಕ್ಷಕಿ ಬ್ರಹ್ಮಕುಮಾರಿ ಸ್ವಾತಿ ಮತ್ತು ಶಾಸಕರಾದ ಚನ್ನಬಸಪ್ಪ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ. ಶಿವಮೊಗ್ಗ ಭದ್ರಾವತಿ ಪ್ರಾಧಿಕಾರದ ಅಧ್ಯಕ್ಷರಾದ ಸುಂದರೇಶ್. ರೋಟರಿ ಜಿ ವಿಜಯಕುಮಾರ್. ಮನೋಹರ್ ಆರ್ . ಪಿ ರುದ್ರೇಶ್. ಡಾ ತಿಪ್ಪೇಶ್. ಮಲ್ಲೇಶಪ್ಪ. ಡಾಕ್ಟರ್ ಆಕಾಶ್ ಹೊಸ್ತೋಟ. ರಾಜಣ್ಣ. ಬಿಕೆ ವಿಜಯಲಕ್ಷ್ಮಿ ರಾಘು. ಹಾಗೂ ಈಶ್ವರಿ ವಿಶ್ವವಿದ್ಯಾಲಯದ ಅಣ್ಣಂದಿರು ಅಕ್ಕಂದಿರು ಅಂಚೆ ಕಚೇರಿಯ ಅಧಿಕರಾದ ಎಂ ಕುಮಾರಸ್ವಾಮಿ. ಡಾಕ್ಟರ್ ಪ್ರಸನ್ನ ಬಸವರಾಜಪ್ಪ ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಸನ್ಮಾನಿತರು ಭಾವ ಪರವಶರಾಗಿ ತಮ್ಮ ಅನುಭವಗಳನ್ನು ಹಂಚಿ ಕೊಂಡರು. 

ಧ್ಯಾನ ಅಭ್ಯಾಸದಿಂದ ಒತ್ತಡಮುಕ್ತ ಜೀವನ ಸಾಧ್ಯ

ಇಮೇಜ್
ಶಿವಮೊಗ್ಗ: ಪ್ರತಿ ದಿನ ಧ್ಯಾನ ಅಭ್ಯಾಸ ಮಾಡುವುದರಿಂದ ಒತ್ತಡ ಕಡಿಮೆ ಮಾಡುತ್ತದೆ. ಮಾನಸಿಕ ನೆಮ್ಮದಿ ಪಡೆಯಲು, ಆಂತರಿಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಶಿವಮೊಗ್ಗ ನಗರದ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಸ್ವಾತಿ ಹೇಳಿದರು. ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಒತ್ತಡಮುಕ್ತ ಜೀವನಕ್ಕಾಗಿ ಶಿವಯೋಗ ಶಿಬಿರದಲ್ಲಿ ಮಾತನಾಡಿ, ಧ್ಯಾನ ಎಂದರೆ ಮನಸ್ಸಿನ ಏಕಾಗ್ರತೆ, ಶಾಂತತೆ ಆಗಿದ್ದು, ಧ್ಯಾನವು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಆಲೋಚನೆಗಳನ್ನು ನಿಯಂತ್ರಣದಲ್ಲಿ ಇಡುತ್ತದೆ ಎಂದು ತಿಳಿಸಿದರು. ಧ್ಯಾನವು ಒತ್ತಡ, ಆತಂಕ, ಖಿನ್ನತೆ ಮಾಡಿ ದೈಹಿಕ, ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಧ್ಯಾನವು ದೇಹ ಮತ್ತು ಮನಸ್ಸಿಗೆ ಆಳವಾದ ವಿಶ್ರಾಂತಿ ನೀಡುತ್ತದೆ. ಧನಾತ್ಮಕ ಆಲೋಚನೆ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಶಿಕ್ಷಕಿ ಬೇಬಿ ಷಡಕ್ಷರಿ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಆಲೋಚನೆಗಳ ಮೊತ್ತವೇ ವ್ಯಕ್ತಿತ್ವ. ಈಗಿನ ಒತ್ತಡದ ಜೀವನಶೈಲಿ, ಆಹಾರ ಪದ್ಧತಿ ನಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಅನಾರೋಗ್ಯ ಆಗಿಸುತ್ತವೆ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ಜೀವನದ ಕಡೆಗೆ ಗಮನ ನೀಡಬೇಕು ಎಂದು ತಿಳಿಸಿದರು. ಜೆಎನ್‌ಎನ್‌ಸಿಇ ಪ್ರಾಧ್ಯಾಪಕ ನಾಗೇಶ್ ಮಾತನಾಡಿ, ಒತ್ತಡಯುತ ಜೀವನಶೈಲಿ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಧನಾತ್ಮಕ ಆಲೋಚನೆಗಳು ಅತ್ಯಂತ ಮ...

ಲೀಸ್ ಒಪ್ಪಂದ ಇದ್ದರೂ ನೋಟಿಸ್ ಇಲ್ಲದೇ ಮನೆ ಖಾಲಿ ಮಾಡಿಸಿದ ಆರೋಪ

ಇಮೇಜ್
ರಸ್ತೆಪಾಲಾದ ವಿಧವಾ ಮಹಿಳೆ – ನ್ಯಾಯಕ್ಕಾಗಿ ಮೊರೆ ಶಿವಮೊಗ್ಗ: ನಗರದ ವಿನೋಬಾನಗರ ವ್ಯಾಪ್ತಿಯ ಅಶ್ರಯ ಬಡಾವಣೆಯಲ್ಲಿ ನಡೆದಿರುವ ಘಟನೆ ನಾಗರಿಕ ಸಮಾಜದ ಮನಸ್ಸನ್ನು ಕಲುಷಿತಗೊಳಿಸಿದೆ. ಬಾಡಿಗೆದಾರರ ಲೀಸ್ ಒಪ್ಪಂದ ಜಾರಿಯಲ್ಲಿದ್ದರೂ, ಬಾಡಿಗೆದಾರರಿಗೆ ಯಾವುದೇ ಪೂರ್ವ ನೋಟಿಸ್ ಅಥವಾ ಮಾಹಿತಿ ನೀಡದೇ ಹಣಕಾಸು ಸಂಸ್ಥೆಯ ಒತ್ತಡದ ಮೂಲಕ ಮನೆ ಖಾಲಿ ಮಾಡಿಸಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಧವಾ ಮಹಿಳೆಯೊಬ್ಬರು ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದ ಆರ್‌ಸಿಸಿ ಮನೆಗೆ ಸಂಬಂಧಿಸಿದಂತೆ, 2024 ಜೂನ್ 7 ರಂದು 2 ವರ್ಷಗಳ ಲೀಸ್ ಒಪ್ಪಂದ ಮಾಡಲಾಗಿತ್ತು. ಈ ಒಪ್ಪಂದದ ಪ್ರಕಾರ, ಮುಂಗಡ ಹಣವನ್ನೂ (ಅಡ್ವಾನ್ಸ್) ಸಂಪೂರ್ಣವಾಗಿ ಪಾವತಿಸಲಾಗಿತ್ತು. ಲೀಸ್ ಅವಧಿ ಮುಗಿಯದೇ ಇರುವಾಗಲೇ, ಯಾವುದೇ ಅಧಿಕೃತ ನೋಟಿಸ್ ನೀಡದೆ ನ್ಯಾಯಾಲಯದ ಆದೇಶದ ಹೆಸರಿನಲ್ಲಿ ಮನೆಗೆ ನುಗ್ಗಿ ಖಾಲಿ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಸಾರ್ವಜನಿಕರ   ಪ್ರಮುಖ ಪ್ರಶ್ನೆಗಳು ಲೀಸ್ ಅವಧಿ ಜಾರಿಯಲ್ಲಿದ್ದಾಗ, ಬಾಡಿಗೆದಾರರಿಗೆ ನೋಟಿಸ್ ನೀಡದೇ ಮನೆ ಖಾಲಿ ಮಾಡುವುದು ಕಾನೂನುಬದ್ಧವೇ? ವಿಧವಾ ಮಹಿಳೆಯ ಸ್ಥಿತಿಗತಿಗಳನ್ನು ಪರಿಗಣಿಸದೇ ಈ ಕ್ರಮ ಕೈಗೊಳ್ಳಬೇಕಿತ್ತೇ? ಹಣಕಾಸು ಸಂಸ್ಥೆ ಮತ್ತು ಮಾಲೀಕರ ಸಾಲ ವ್ಯವಹಾರದಲ್ಲಿ ಬಾಡಿಗೆದಾರರ ಹಕ್ಕುಗಳಿಗೆ ಬೆಲೆ ಇಲ್ಲವೇ?   ರಸ್ತೆಪಾಲಾದ ಕುಟುಂಬ ಅಚಾನಕ್ ನಡೆದ ಈ ಕ್ರಮದಿಂದಾಗಿ ವಿಧವಾ ಮಹಿಳೆ ತಮ್ಮ ಸಾಮಾನುಗಳೊಂದಿಗ...

ಪಿಜಿಆರ್ ಸಿಂಧ್ಯಾ ಅವರಿಗೆ ಗೌರವ ಡಾಕ್ಟರೇಟ್

ಇಮೇಜ್
ಶಿವಮೊಗ್ಗ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿಜಿಆರ್ ಸಿಂಧ್ಯಾ ಅವರಿಗೆ ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುತ್ತಿದೆ. ಫೆಬ್ರವರಿ 24ರಂದು ಬೆಳಗ್ಗೆ 10.30ಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಅಂಬೇಡ್ಕರ್ ಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡುವರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಅವರಿಗೆ ಶಿವಮೊಗ್ಗ ಜಿಲ್ಲಾ ಶಾಖೆ ಹಾಗೂ ಸ್ಥಳೀಯ ಸಂಸ್ಥೆ ವತಿಯಿಂದ ಅಭಿನಂದನೆ ತಿಳಿಸಿದ್ದಾರೆ. ಪ್ರಧಾನ ಆಯುಕ್ತ ಶಕುಂತಲಾ ಚಂದ್ರಶೇಖರ್, ಆಯುಕ್ತ ಎಸ್.ಜಿ.ಆನಂದ್, ಕೆ.ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ವೀರೇಶಪ್ಪ, ರಾಜೇಶ್ ಅವಲಕ್ಕಿ, ಮಲ್ಲಿಕಾರ್ಜುನ್, ಚೂಡಾಮಣಿ ಈ ಪವಾರ್, ಲಕ್ಷ್ಮೀ ಕೆ.ರವಿ, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ವೇಣುಗೋಪಾಲ್, ಸರಸ್ವತಿ ನಾಗರಾಜ್ ಹಾಗೂ ಮಲೆನಾಡು ಓಪನ್ ಗ್ರೂಪ್ ಮತ್ತು ಸ್ಕೌಟ್ಸ್ ಅಂಡ್ ಗೈಡ್ ಪದಾಧಿಕಾರಿಗಳು ಶುಭಾಶಯ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಶ್ರೀ ಮಾರಿಕಾಂಬ ದೇವಿ ದ್ವೈವಾರ್ಷಿಕ ಜಾತ್ರೆ ಸಂಭ್ರಮಕ್ಕೆ ಸಿದ್ಧತೆ

ಇಮೇಜ್
  ಫೆ.24ರಿಂದ ಪೂಜಾ ವಿಧಾನಗಳು ಆರಂಭ – ಫೆ.28ಕ್ಕೆ ಮಹಾ ಜಾತ್ರೆ ಉದ್ಘಾಟನೆ ಮಲೆನಾಡಿನ ದ್ವಾರವೆಂದು ಪ್ರಸಿದ್ಧವಾದ ಶಿವಮೊಗ್ಗ ನಗರದಲ್ಲಿ ಇತಿಹಾಸ ಪ್ರಸಿದ್ಧ ಕೋಟಿ ಶ್ರೀ ಮಾರಿಕಾಂಬ ದೇವಿ ದ್ವೈವಾರ್ಷಿಕ ಜಾತ್ರೆ ಭಕ್ತಿಭಾವ ಮತ್ತು ಸಂಪ್ರದಾಯಗಳೊಂದಿಗೆ ನಡೆಯಲು ಸಜ್ಜಾಗಿದೆ. ತುಂಗಾ ನದಿ ತಟದಲ್ಲಿರುವ ಕೆಳದಿ ಉರಸಾರ ಕೋಟೆ, ಅರಮನೆ, ಶ್ರೀ ಭೀಮೇಶ್ವರ, ಸೀತಾರಾಮಾಂಜನೇಯ ದೇವಾಲಯಗಳೊಂದಿಗೆ ಆದಿಶಕ್ತಿ ಶ್ರೀ ಮಾರಿಕಾಂಬ ದೇವಿಯ ಗದ್ದುಗೆ ನಗರಕ್ಕೆ ಅಪೂರ್ವ ಆಧ್ಯಾತ್ಮಿಕ ಗೌರವ ತಂದುಕೊಟ್ಟಿದೆ. ಕೆಳದಿ ಶಿವಪ್ಪನಾಯಕ ರಾಜರ ಕಾಲದಿಂದಲೂ ಪ್ರಸಿದ್ಧವಾಗಿರುವ ಈ ದೇವಾಲಯವನ್ನು ಭಕ್ತರು ಹಿಂದಿನ ದಿನಗಳಲ್ಲಿ ಬಯಲು ಮಾರಿ, ಬಿಸಿಲು ಮಾರಿ, ಕೆಂಚ ಮಾರಿ ಎಂಬ ಹೆಸರಿನಿಂದ ಪೂಜಿಸುತ್ತಿದ್ದರು. ಶತಮಾನಗಳಿಂದ ಪಟ್ಟಣದ ಹಿರಿಯರು ಹಾಗೂ ಭಕ್ತರ ಏಕತೆಯಿಂದ ಜಾತ್ರೆ ನಿರಂತರವಾಗಿ ನಡೆಯುತ್ತಿದ್ದು, ರಾಜ್ಯಮಟ್ಟದಲ್ಲಿ ವಿಶಿಷ್ಟ ಐತಿಹಾಸಿಕ ಖ್ಯಾತಿ ಗಳಿಸಿದೆ. ಜಾತ್ರೆಯ ಯಶಸ್ವಿ ನಿರ್ವಹಣೆಗೆ ಆರು ಬಾಬುದಾರರು, ವಿವಿಧ ಸಮುದಾಯಗಳ ಪ್ರತಿನಿಧಿಗಳು ಹಾಗೂ ಉಪಸಮಿತಿಗಳು ಕೈಜೋಡಿಸಿದ್ದು, ಯಾವುದೇ ಭೇದಭಾವವಿಲ್ಲದೆ ಎಲ್ಲರ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಫೆಬ್ರವರಿ 24 (ಮಂಗಳವಾರ) ಬೆಳಿಗ್ಗೆ 5 ಗಂಟೆಗೆ ಬಿ.ಬಿ. ರಸ್ತೆಯ ಬ್ರಾಹ್ಮಣ ಸಮಾಜದ ಕುಟುಂಬಗಳನ್ನು ಮಂಗಳ ವಾದ್ಯಗಳೊಂದಿಗೆ ಆಹ್ವಾನಿಸಿ ಪೂಜಾ ವಿಧಾನಗಳಿಗೆ ಚಾಲನೆ ದೊರೆಯಲಿದೆ. ಗಾಂಧಿ ಬಜಾರ್‌ನಲ್ಲ...

ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಿಂದ ಆಧ್ಯಾತ್ಮಿಕ ಜಾಗೃತಿ

ಇಮೇಜ್
ಶಿವಮೊಗ್ಗ: ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥೆಯು ವಿಶ್ವಾದ್ಯಂತ ಆಧ್ಯಾತ್ಮಿಕ ಜಾಗೃತಿ, ವೈಯಕ್ತಿಕ  ಜೀವನದಲ್ಲಿ ಸಕರಾತ್ಮಕ ಪರಿವರ್ತನೆ ಗುಣವನ್ನು ಬೆಳೆಸುವ ಒಂದು ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವಾ ಸಂಸ್ಥೆಯಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು. ಮಹಾಶಿವರಾತ್ರಿ ಮಹೋತ್ಸವದ ಪ್ರಯುಕ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾಶಿ ವಿಶ್ವನಾಥ ದರ್ಶನ ಸ್ವರ್ಣೀಮ ಭಾರತ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂತರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ ಮತ್ತು ಸಮುದಾಯ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಶಾಂತಿ, ಏಕತೆ ಮತ್ತು ಮೌಲ್ಯಾಧಾರಿತ ಜೀವನವನ್ನು ಉತ್ತೇಜಿಸುತ್ತಿದೆ ಎಂದು ತಿಳಿಸಿದರು. ಶಿವಮೊಗ್ಗ ನಗರದ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಸ್ವಾತಿ ಮಾತನಾಡಿ, ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ 1937ರಲ್ಲಿ  ಸ್ಥಾಪನೆಯಾಗಿ ವಿಶ್ವಾದ್ಯಂತ ಆಧ್ಯಾತ್ಮಿಕ ಮತ್ತು ರಾಜಯೋಗ ಧ್ಯಾನದ ಮೇಲೆ ಕೇಂದ್ರೀಕರಿಸಿದೆ. ಪ್ರಮುಖವಾಗಿ ಮಹಿಳೆಯರೇ ನೇತೃತ್ವ ವಹಿಸುತ್ತಿರುವ ಇದು, 150 ದೇಶಗಳಲ್ಲಿ 10,000ಕ್ಕೂ ಹೆಚ್ಚಿನ ಕೇಂದ್ರಗಳನ್ನು ಹೊಂದಿದೆ ಎಂದರು. ಶಿವಮೊಗ್ಗದ ಎಲ್ಲ ಶಿವಭಕ್ತರಿಗೆ ಮುಂದಿನ ದಿನಗಳಲ್ಲಿ ಶಿವರಾತ್ರಿ ಹಬ...

ಶಿವನ ಪೂಜೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ

ಇಮೇಜ್
ಶಿವಮೊಗ್ಗ: ಹಿಂದುಗಳ ಬಹಳ ವಿಶೇಷವಾದ ಪವಿತ್ರ ಹಬ್ಬ ಮಹಾಶಿವರಾತ್ರಿ. ಈ ಪವಿತ್ರ ದಿನ ಮಾಡುವ ಎಲ್ಲಾ ಕೆಲಸಗಳು ಶಿವನಿಗೆ ಸಮರ್ಪಣೆ ಆಗುತ್ತವೆ ಎಂದು ಮಾಜಿ ಎಂಎಲ್‌ಸಿ, ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷ ಎಸ್.ರುದ್ರೇಗೌಡ ಹೇಳಿದರು. ಕಲ್ಲಳ್ಳಿಯಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದ "ಸಂಪೂರ್ಣ ಯೋಗ ಆರೋಗ್ಯ ಧಾಮ " ಆವರಣದಲ್ಲಿ ಇರುವ ಧ್ಯಾನಸಕ್ತ ಆದಿ ಯೋಗಿ ಶಿವನ ಮೂರ್ತಿಗೆ ಅರ್ಚನೆ, ಕ್ಷೀರಾಭಿಷೇಕ, ಬಿಲ್ವಾರ್ಚನೆ ಹಾಗೂ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶಾದ್ಯಂತ ಸಡಗರ ಸಂಭ್ರಮದಿಂದ ಮಹಾಶಿವರಾತ್ರಿಯನ್ನು ಭಕ್ತಿಯಿಂದ ಆಚರಣೆ ಮಾಡಲಾಗುತ್ತಿದೆ. ಯೋಗ, ಪ್ರಾಣಾಯಾಮ, ಧ್ಯಾನದ ಜೊತೆಗೆ ಶಿವನ ಪೂಜೆಯು ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ನೀಡುತ್ತದೆ. ಇಂತಹ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನಮ್ಮಲ್ಲಿ ಜೀವನೋತ್ಸಾಹ ಹೆಚ್ಚಿಸುತ್ತವೆ ಎಂದು ತಿಳಿಸಿದರು. ಟ್ರಸ್ಟಿ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಅವರು ಯೋಗ ಕೇಂದ್ರದ ಎಲ್ಲಾ ಶಿಬಿರಾರ್ಥಿಗಳಿಗೆ ಹಾಗೂ ಯೋಗಪಟುಗಳಿಗೆ ಶಿವರಾತ್ರಿ ಹಬ್ಬದ ಶುಭಾಶಯಗಳು ತಿಳಿಸಿ ಶಿವಪೂಜೆಯಲ್ಲಿ ದಂಪತಿ ಸಮೇತ ಪಾಲ್ಗೊಂಡಿದ್ದರು. ಪ್ರೊ. ಎ.ಎಸ್.ಚಂದ್ರಶೇಖರ್ ಹಾಗೂ ಭಾರತಿ ಚಂದ್ರಶೇಖರ್ ಶಿವಪೂಜೆಯಲ್ಲಿ ಪಾಲ್ಗೊಂಡಿದ್ದರು. ಶಿವನಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಹೂವಿನ ಅಲಂಕಾರಗಳನ್ನ ಮಾಡಿ ಭಕ್ತಿಯಿಂದ ಪೂಜಿಸಲಾಯಿತು. ನಂತರ ಎಲ್ಲರಿಗೂ ಪ್ರಸಾದ ವಿನಿಯೋಗ ಮಾಡಲಾಯಿತು. ಯೋ...

ರಕ್ತದಾನದಿಂದ ಶಿವರಾತ್ರಿ ಉಪವಾಸ

ಇಮೇಜ್
ಶಿವಮೊಗ್ಗ: ನೊಂದವರು, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಪರಶಿವನ ಅನುಗ್ರಹ ಪಡೆಯಬಹುದು. ಮತ್ತೊಬ್ಬರ ಜೀವ ಉಳಿಸುವಂತಹ ರಕ್ತದಾನ ಮಹಾದಾನಗಳಲ್ಲೊಂದು. ಇಂತಹ ದಾನದ ಮೂಲಕ ಶಿವನ ಅನುಗ್ರಹ ಲಭಿಸುತ್ತದೆ. ಶಿವರಾತ್ರಿಯ ಉಪವಾಸ, ಜಾಗರಣೆಗಿಂತ ಹೆಚ್ಚು ಪುಣ್ಯ ಪ್ರಾಪ್ತವಾಗುತ್ತದೆ ಎಂದು ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ನವ್ಯಶ್ರೀ ನಾಗೇಶ್ ಅವರು ಹೇಳಿದರು. ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ನ ವತಿಯಿಂದ ತಾಲೂಕಿನ ಅಬ್ಬಲಗೆರೆಯ ಈಶ್ವರವನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಫೆ. 15ರಂದು ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.  ಶಿವರಾತ್ರಿಯಂದು ಓಂ ನಮಃ ಶಿವಾಯ ಎಂದು ಜಪ-ತಪ, ಪೂಜೆ, ಭಜನೆ, ಆರಾಧನೆ, ಉಪವಾಸ, ಜಾಗರಣೆ ಮಾಡುವ ಮೂಲಕ ಶಿವನ ಅನುಗ್ರಹಕ್ಕೆ ಪ್ರಾಪ್ತರಾಗಲು, ಪುಣ್ಯ ಸಂಪಾದಿಸಲು ಪೂಜಾ ಕೈಂಕರ್ಯವನ್ನು ಕೈಗೊಳ್ಳಲಾಗುತ್ತದೆ. ಪರಿಸರವೇ ಪರಮೇಶ್ವರ ಎಂಬ ಜಾಗೃತಿಯ ಪರ್ವದೊಂದಿಗೆ ಶಿವರಾತ್ರಿ ಪ್ರಯುಕ್ತ ರಕ್ತದಾನ ಮಾಡಬೇಕೆಂದು ಕರೆ ನೀಡಿದರು.  ಸಕಾಲದಲ್ಲಿ ರಕ್ತ ಸಿಗದೆ ಸಾಕಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂದು ರಕ್ತದ ಕೊರತೆ ಸಾಕಷ್ಟು ಎದ್ದು ಕಾಣುತ್ತಿದೆ. ಯುವಕರು ರಕ್ತದಾನ ಮಾಡಲು ಜಾಗೃತಿಯ ಕೊರತೆ ಇದೆ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಚೈತನ್ಯ ಮೂಡುತ್ತದೆ ಹಾಗೂ ಸದಾಕಾಲ ಆರೋಗ್ಯವಂತರಾಗಿ ಇರುತ್ತಾರೆ ಎಂದು ತಿಳಿಸಿದರು...

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸತೀಶ್ ಮುಂಚೆಮನೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಗ್ರಾಮಸ್ಥರ, ಸ್ನೇಹಿತರ, ಸಂಭ್ರಮ !!

ಇಮೇಜ್
  ಶಿವಮೊಗ್ಗ:  ಶಿವಮೊಗ್ಗ ತಾಲ್ಲೂಕಿನ ತ್ಯಾಜವಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಸಾತ್ವಿಕ ನುಡಿ ಪತ್ರಿಕೆಯ ಸಂಪಾದಕ ಹಾಗೂ ಎರೇಕೊಪ್ಪ ಗ್ರಾಮದ ಸತೀಶ್ ಮುಂಚೆಮನೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಮಂಡಳಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನ ಭರ್ತಿಗಾಗಿ ಚುನಾವಣೆಯನ್ನು ಆಯೋಜಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಹೆಚ್.ಎಂ (ಮುಂಚೆಮನೆ) ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇತರರು ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆ, ಸತೀಶ್ ರವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು. ಚುನಾವಣೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಅಶೋಕ್ ಹೆಚ್.ಎಲ್ ಅವರು ನಡೆಸಿಕೊಟ್ಟರು. ಸಹಕಾರ ಚುನಾವಣಾ ಪ್ರಾಧಿಕಾರವು ಸಹಕಾರ ಸಂಘಗಳ ಉಪನಿಬಂಧಕರು, ಶಿವಮೊಗ್ಗ ಇವರಿಗೆ ನಿಯೋಜಿಸಿದ್ದ ಅಧಿಕಾರದಂತೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ತ್ಯಾಜವಳ್ಳಿ ಇದರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಶಿವಮೊಗ್ಗದ ಮಾರಾಟಾಧಿಕಾರಿಯನ್ನು ರಿಟರ್ನಿಂಗ್ ಅಧಿಕಾರಿಯಾಗಿ ನೇಮಿಸಲಾಗಿತ್ತು. ಸಂಘದ ಕಾರ್ಯ ನಿರ್ವಹಣಾಧಿಕಾರಿ ಶಂಕರಪ್ಪ ಮತ್ತು ಸಿಬ್ಬಂದಿ ವರ್ಗ ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ನಡೆಸಿದರು. ತ್ಯಾಜವಳ್ಳಿ ಸಹಕಾರ ಸಂಘಕ್ಕೆ ಹೊಸ ನಾಯಕತ್ವ – ರೈತಪರ ಕಾ...

ಮುದ್ರಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಉನ್ನತೀಕರಣ

ಇಮೇಜ್
ಶಿವಮೊಗ್ಗ: ಪ್ರಸ್ತುತ ಮುದ್ರಣ ಯಂತ್ರಗಳು ತಂತ್ರಜ್ಞಾನದ ಉನ್ನತೀಕರಣದೊಂದಿಗೆ ಲೇಟರ್ ಪ್ರೆಸ್, ಸಿಲೆಂಡರ್ ಮಿಷಿನ್, ಆಫ್‌ಸೆಟ್ ಮುದ್ರಣ, ಸ್ಕ್ರೀನ್‌ ಪ್ರಿಂಟಿಂಗ್ ಇತ್ಯಾದಿ ರೂಪಗಳಿಗೆ ರೂಪಾಂತರಗೊಂಡು ಇಂದಿನ ಡಿಟಿಟಲ್ ಯುಗಕ್ಕೆ ತೆರೆದುಕೊಂಡಿದೆ ಎಂದು ಶಿವಮೊಗ್ಗದ ಮಲೆನಾಡು ಮುದ್ರಕರ ಸಂಘದ ಅಧ್ಯಕ್ಷ ಎಂ.ಮಾಧವಾಚಾರ್ ಹೇಳಿದರು. ರೋಟರಿ ಆರ್‌ಎಂಬಿ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮುದ್ರಣ ತಂತ್ರಜ್ಞಾನದ ಬಗ್ಗೆ ಮಾತನಾಡಿ, 6ನೇ ಶತಮಾನದಲ್ಲಿ ಪ್ರಥಮವಾಗಿ ಚೀನಾ ದೇಶದಲ್ಲಿ ಮರದ ಅಕ್ಷರಗಳನ್ನು ತಯಾರಿಸಿ ಮುದ್ರಿಸುವ ಮೂಲಕ ಆರಂಭಗೊಂಡಿತು. ನಂತರ 15ನೇ ಶತಮಾನದಲ್ಲಿ ಆವಿಷ್ಕಾರಗೊಂಡು ಜರ್ಮನಿಯ ಜೋಹಾನ್ಸ್ ಬರ್ಗ್ನಲ್ಲಿ, ಯೂರೋಪ್‌ನ ದೇಶಗಳಲ್ಲಿ ಮುದ್ರಣ ಕ್ರಾಂತಿಯಾಯಿತು ಎಂದು ತಿಳಿಸಿದರು. ಸೀಸದ ಅಕ್ಷರಗಳನ್ನು ಎರಕ ಹೋಯ್ದು ತಯಾರಿಸಿ, ಯೋಹಾನ್ಸ್ ಗೂಟೆನ್ ಬರ್ಗ್ ಪ್ರಥಮ ಮುದ್ರಣ ಯಂತ್ರವನ್ನು ಬಳಸಿ, ಲೆಟರ್ ಪ್ರೆಸ್ ಮಾದರಿಯಲ್ಲಿ ಬೈಬಲ್ ಪುಸ್ತಕಗಳನ್ನು ಪ್ರಥಮ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಮುದ್ರಿಸಲಾಯಿತು ಎಂದರು. ಪ್ರಸ್ತುತ ಮುದ್ರಣ ಯಂತ್ರಗಳು ತಂತ್ರಜ್ಞಾನದ ಉನ್ನತೀಕರಣದೊಂದಿಗೆ ಸಾಗುತ್ತಿದೆ. ಇಂದಿನ ವೇಗದ ಯುಗಕ್ಕೆ ಅನುಗುಣವಾಗಿ ಡಿಜಿಟಲ್ ಪ್ರಿಂಟ್, ಆಫ್‌ಸೆಟ್ ಪ್ರಿಂಟಿಂಗ್, ಫ್ಲೆಕ್ಸ್ ಪ್ರಿಂಟ್, ಯುವಿ ಹಾಗೂ ಸ್ಪಾಟ್ ಯೂವಿ, ಲಿಕ್ವಿಡ್ ಯು.ವಿ., ಗೋಲ್ಡ್ ಫಾಯಿಲ್, ಎಂಬೋಜಿಂಗ್ ಮುದ್ರಣವಾಗಿ ಆವಿಷ್ಕಾರಗೊಂಡಿದೆ. ಇಂದಿನ ಆಧುನಿಕ ವೆಬ್ ...

ಹಿರಿಯ ಪ್ರಸೂತಿ ತಜ್ಞ ಡಾ. ಎ.ಎಸ್.ಚಿನ್ನಯ್ಯ ನಿಧನ

ಇಮೇಜ್
  ಶಿವಮೊಗ್ಗ : ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ನಿವೃತ್ತ ವಸತಿ ವೈದ್ಯಾಧಿಕಾರಿಗಳು ಹಾಗೂ ಹಿರಿಯ ಪ್ರಸೂತಿ ತಜ್ಞರಾದ ಡಾ. ಎ.ಎಸ್.ಚಿನ್ನಯ್ಯ (88 ವರ್ಷ) ಅವರು ವಯೋಸಹಜ ಕಾರಣಗಳಿಂದ ಫೆ.12 ರಂದು ನಿಧನರಾಗಿದ್ದಾರೆ. ಡಾ. ಎ.ಎಸ್.ಚಿನ್ನಯ್ಯ ಇವರು ಕೊಪ್ಪ ತಾಲ್ಲೂಕಿನ ಹರಿಹರಪುರ ಮೂಲದವರು. ಆ ಭಾಗದ ಅತೀ ಕಿರಿಯ ವೈದ್ಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಇವರು ಬೆಂಗಳೂರಿನ ಪ್ರತಿಷ್ಠಿತ ಬೌರಿಂಗ್ ಸಂಸ್ಥೆಯಲ್ಲಿ ಎಲ್.ಎಂ.ಪಿ (LMP) ಪದವಿ ಪಡೆದ ನಂತರ, 1966 ರಲ್ಲಿ ಮಣಿಪಾಲದ ಕೆ.ಎಂ.ಸಿ (KMC) ಯಲ್ಲಿ ಎಂಬಿಬಿಎಸ್ ಪೂರೈಸಿದರು. ಬಳಿಕ ಗುಲ್ಬರ್ಗಾ ವಿಶ್ವವಿದ್ಯಾಲಯದ ಅಡಿಯಲ್ಲಿ ಬಳ್ಳಾರಿಯ ಪ್ರಸೂತಿ ಶಾಸ್ತ್ರದಲ್ಲಿ ಎಂ.ಡಿ (MD) ಸ್ನಾತಕೋತ್ತರ ಪದವಿ ಪಡೆದರು. ಡಾ. ಎ.ಎಸ್.ಚಿನ್ನಯ್ಯ ರವರು ದಶಕಗಳ ಕಾಲ ದಕ್ಷಿಣ ಕರ್ನಾಟಕದ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಮೊದಲು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೃತ್ತಿ ಜೀವನ ಆರಂಭಿಸಿ, ನಂತರ ಚಿಕ್ಕಮಗಳೂರಿನಲ್ಲಿಯೂ ಸೇವೆ ಸಲ್ಲಿಸಿದರು. ಬಳಿಕ ಮೆಗ್ಗಾನ್ ಆಸ್ಪತ್ರೆಗೆ ಮರಳಿ, ಅಲ್ಲಿಯೇ ವಸತಿ ವೈದ್ಯಾಧಿಕಾರಿಗಳಾಗಿ (RMO) ಸುದೀರ್ಘ ಸೇವೆ ಸಲ್ಲಿಸಿ 1994ರಲ್ಲಿ ನಿವೃತ್ತರಾದರು. ಶಿಸ್ತುಬದ್ಧ ಜೀವನ, ರೋಗಿಗಳ ಮೇಲಿನ ಕಾಳಜಿ ಹಾಗೂ ವೃತ್ತಿಪರತೆಗೆ ಇವರು ಹೆಸರಾಗಿದ್ದರು. ಮೃತರು ಪುತ್ರಿಯರಾದ ಮಲ್ಲಿಕಾ, ಮಧುರ, ಒಬ್ಬ ಪುತ್ರ ಹಾಗೂ ಅಸಗೋಡು ಕುಟುಂಬದ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ....

ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯಕ

ಇಮೇಜ್
ಶಿವಮೊಗ್ಗ: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿರಂತರವಾಗಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಫೆರೋಕಾಸ್ಟ್ ಸಭಾಂಗಣದಲಿ ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ, ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹರಪನಹಳ್ಳಿಯ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು. ಇಂದಿನ ಯುಗದಲ್ಲಿ ಆಹಾರ ಪದ್ಧತಿ, ಜೀವನಶೈಲಿ ಬದಲಾಗಿದ್ದು, ಒತ್ತಡ, ಮಾಲಿನ್ಯ ವಾತಾವರಣದಿಂದ ಆರೋಗ್ಯ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯ ಕಾಳಜಿ ವಹಿಸಬೇಕು. ಪ್ರಕೃತಿ ಚಿಕಿತ್ಸೆ ಬಗ್ಗೆ ಹಿಂದೂ ಸಮಾಜ ಹೆಚ್ಚಿನ ಆಸಕ್ತಿ ಹೊಂದುತ್ತಿದೆ ಎಂದು ತಿಳಿಸಿದರು. ಜನನಿ ಸಮೂಹ ಸಂಸ್ಥೆಗಳ ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಉದಯಶಂಕರ ಭಟ್ ಮಾತನಾಡಿ, ಶರೀರಕ್ಕೆ ರೋಗಗಳು ಬಂದಾಗ ಅವುಗಳನ್ನು ಪರಿಹರಿಸುವ ಶಕ್ತಿ ಪಂಚಭೂತಗಳಲ್ಲಿದೆ ಎಂಬ ತತ್ವವನ್ನು ಆಧರಿಸಿರುವುದು ಪ್ರಕೃತಿ ಚಿಕಿತ್ಸೆ ಎಂದು ಹೇಳಿದರು. ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿ.ಆರ್.ಧನಂಜಯ ಮಾತನಾಡಿ, ಪ್ರತಿ ದಿನದ ಆಹಾರ ಪದ್ಧತಿ ಹಾಗೂ ಜೀವನಶೈಲಿಯಲ್ಲಿ...

ಶಿಕ್ಷಣ ವ್ಯಾಪಾರಿಕರಣ ಗೊಳಿಸಲು ಹೊರಟಿರುವ NES ಸಂಸ್ಥೆಯ ವಿರುದ್ಧ NSUI ಬೃಹತ್ ಪ್ರತಿಭಟನೆ

ಇಮೇಜ್
  ರಾಷ್ಟ್ರೀಯ ಶಿಕ್ಷಣ ಸಮಿತಿಯು ತಮ್ಮ ಸ್ವಾಧಿನದಲ್ಲಿರುವ ಕೇಲವು ಕಾಲೇಜಗಳನ್ನು ಖಾಸಗಿಕರಣಗೊಳಿಸುವ ಪ್ರಯತ್ನವನ್ನು ಕೈಬಿಡಲು ಆಗ್ರಹಿಸಿ  ಇಂದು ಶಿವಮೊಗ್ಗ ಜಿಲ್ಲೆ NSUI ವತಿಯಿಂದ ಸಾವಿರಾರು ವಿದ್ಯಾರ್ಥಿಗಳೊಂದಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಮುಖ್ಯ ದ್ವಾರದ ಬಳಿ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ್ ರವರಿಗೆ ಮನವಿ ಸಲ್ಲಿಸಿ ಎಚ್ಚರಿಸಲಾಯಿತು   ಈ ಸಂದರ್ಭದಲ್ಲಿ  ಶಿವಮೊಗ್ಗ ಜಿಲ್ಲಾ NSUI ಅಧ್ಯಕ್ಷರಾದ ವಿಜಯಕುಮಾರ್ ಕಾರ್ಯಾಧ್ಯಕ್ಷರಾದ  ರವಿಕುಮಾರ್ G  ನಗರಾಧ್ಯಕ್ಷರಾದ ರವಿಕುಮಾರ್    NSUI ನ ಪದಾಧಿಕಾರಿಗಳಾದ ಚಂದ್ರೋಜಿ ರಾವ್, ಆದಿತ್ಯ, ಸುಭಾನ್, ಪರಾಜ್, ಅಭಿ, ಸುಜನ್,ಆಕಾಶ್, ಲೋಹಿತ್, ಸೃಜನ್, ಪ್ರೀತಂ, ಕುಮಾರಸ್ವಾಮಿ, ಜಾಕ್ಸನ್  ಡಿಸೋಜ, ಸಾದುಲ್ಲಾ, ಶ್ರೀಕಾಂತ್, ಪ್ರತಾಪ್, ಪಂಕಜ್, ದೀಪು,ಪ್ರಮೋದ್,  ಪ್ರಜ್ವಲ್,ಪ್ರಸನ್ನ, ದರ್ಶನ್, ಯೂಸಫ್, ಪವನ್, ಇಂದ್ರಸೇನಾ, ತರುಣ್,ಪ್ರಜ್ವಲ್, ಸುಮಂತ್, ಮಸ್ತಾನ್, ರಿಹಾನ್,ಅರ್ಮಾನ್,ಇನ್ನೂ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

ಅಗುಂಬೆ ಉಳಿಸಿ – ಪಶ್ಚಿಮಘಟ್ಟ ರಕ್ಷಿಸಿ

ಇಮೇಜ್
  ಕಾಡು ನಾಶವಿಲ್ಲದ ಪರ್ಯಾಯ ರಸ್ತೆ ಅಗತ್ಯ ಪಶ್ಚಿಮಘಟ್ಟ ಎಂದರೆ ಕೇವಲ ಪರ್ವತ ಶ್ರೇಣಿಯಲ್ಲ; ಅದು ದಕ್ಷಿಣ ಭಾರತದ ಜೀವನಾಡಿ. ಜಲಸಂಪತ್ತು, ಹವಾಮಾನ ಸಮತೋಲನ, ಜೀವವೈವಿಧ್ಯ—ಎಲ್ಲದರ ಮೂಲವೇ ಈ ಘಟ್ಟ. ಅದರ ಹೃದಯ ಭಾಗವಾಗಿರುವ ಅಗುಂಬೆ ಇಂದು ಭಾರೀ ಅಪಾಯದ ಅಂಚಿನಲ್ಲಿ ನಿಂತಿದೆ. ಅಗುಂಬೆ ಎಂದರೆ ಮಳೆಗಾಡು, ಅಪರೂಪದ ಸಸ್ಯ–ಪ್ರಾಣಿ ಸಂಕುಲ, ಶುದ್ಧ ಗಾಳಿ, ಜೀವಂತ ನದಿ ಮೂಲಗಳು. ಆದರೆ ರಸ್ತೆ ವಿಸ್ತರಣೆ, ಅತಿಯಾದ ವಾಹನ ಸಂಚಾರ, ಕಾಡು ಕಡಿತ, ಬೆಟ್ಟ ಸ್ಫೋಟಗಳಂತಹ ಚಟುವಟಿಕೆಗಳು ಈ ಸಂವೇದನಾಶೀಲ ಪರಿಸರವನ್ನು ನಿಧಾನವಾಗಿ ನಾಶಮಾಡುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಈ ಹಾನಿ, ಮುಂದಿನ ಪೀಳಿಗೆಯ ಬದುಕಿನ ಹಕ್ಕನ್ನು ಕಸಿದುಕೊಳ್ಳುವಂತಾಗಿದೆ. ಅಭಿವೃದ್ಧಿ ಬೇಕು – ಆದರೆ ಪರಿಸರ ನಾಶವಿಲ್ಲದೆ ರಸ್ತೆ ಅಗತ್ಯವಿದೆ ಎಂಬುದು ನಿರಾಕರಿಸಲಾಗದ ಸತ್ಯ. ಆದರೆ ಕಾಡನ್ನು ಚೀರಿ, ಮರಗಳನ್ನು ಉರುಳಿಸಿ, ಪ್ರಾಣಿಗಳ ವಾಸಸ್ಥಳ ನಾಶಮಾಡಿ ಮಾಡುವ ಅಭಿವೃದ್ಧಿ ಶಾಶ್ವತ ಪರಿಹಾರವಲ್ಲ. ಇಂತಹ ಕ್ರಮಗಳು ಭೂಕುಸಿತ, ಪ್ರವಾಹ, ನೀರಿನ ಕೊರತೆ ಮತ್ತು ಜೀವವೈವಿಧ್ಯ ನಾಶಕ್ಕೆ ಕಾರಣವಾಗುತ್ತವೆ. ಅದರ ಬದಲು ಪರ್ಯಾಯ ರಸ್ತೆ (Alternate Road) ಪರಿಹಾರವೇ ಯುಕ್ತಿಯುಕ್ತ ದಾರಿ. ಈಗಾಗಲೇ ಅಸ್ತಿತ್ವದಲ್ಲಿರುವ ಮಾರ್ಗಗಳನ್ನು ಸುಧಾರಿಸುವುದು, ಸುರಂಗ ಮಾರ್ಗಗಳು (tunnel roads), ಎಲಿವೇಟೆಡ್ ರಸ್ತೆ ವಿನ್ಯಾಸಗಳು, ಕಾಡಿನ ಹೊರವಲಯದ ಮಾರ್ಗಗಳು—ಇವೆಲ್ಲವೂ ವಿಜ್ಞಾನ...

2026ರ ಶಿವಮೊಗ್ಗ: ವಿಮಾನ ನಿಲ್ದಾಣವಿದೆ… ಆದರೆ ಶಿವಮೊಗ್ಗ AC ಕೋರ್ಟ್‌ನಲ್ಲಿ ಸಾರ್ವಜನಿಕರಿಗೆ ಒಂದು ಕುರ್ಚಿಯೂ ಇಲ್ಲ!

ಇಮೇಜ್
2026ನೇ ವರ್ಷ. ಶಿವಮೊಗ್ಗ ಜಿಲ್ಲೆ ಇಂದು ವಿಮಾನ ನಿಲ್ದಾಣ ಹೊಂದಿರುವ, ಅಭಿವೃದ್ಧಿಯ ಹೆಮ್ಮೆ ಹೊತ್ತ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ರಸ್ತೆ, ರೈಲು, ಆಕಾಶಮಾರ್ಗ — ಎಲ್ಲವೂ ಇದೆ. ಆದರೆ ಇದೇ ಶಿವಮೊಗ್ಗದ ಹೃದಯಭಾಗದಲ್ಲಿರುವ AC ಕೋರ್ಟ್ ಕಚೇರಿಯ ಒಳಗಡೆ ಕಾಲಿಟ್ಟರೆ, ಅಭಿವೃದ್ಧಿಯ ಮುಖವಾಡ ಕಳಚಿ ಬೀಳುತ್ತದೆ. AC ಕೋರ್ಟ್‌ಗೆ - ಪ್ರಕರಣದ ವಿಚಾರಣೆಗೆ ಹಾಜರಾಗುವವರು, - ಶಾಖೆಗೆ ದಾಖಲೆ ಪಡೆಯಲು ಬರುವವರು, - ವೃದ್ಧರು, ಮಹಿಳೆಯರು, ಗರ್ಭಿಣಿಯರು, ಮಕ್ಕಳೊಂದಿಗೆ ಬರುವ ತಾಯಂದಿರು — ಎಲ್ಲರೂ ಇಂದು ನೆಲದ ಮೇಲೆ ಕೂತು ಕಾಯುವ ಸ್ಥಿತಿ.  ಒಂದು ಕುರ್ಚಿಯೂ ಇಲ್ಲ!  ಸಾರ್ವಜನಿಕರಿಗಾಗಿ ಕೂರಲು ಒಂದೇ ಒಂದು ಕುರ್ಚಿಯೂ ಇಲ್ಲ. ಗಂಟೆಗಟ್ಟಲೆ ಕಾಯುವವರು ಗೋಡೆಗೆ ಹೊರಗಿ ನಿಲ್ಲಬೇಕು, ನೆಲದ ಮೇಲೆ ಕುಳಿತುಕೊಂಡು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಇದು ನ್ಯಾಯಾಲಯದ ಪರಿಸರವೋ? ಅಥವಾ ನಿರ್ಲಕ್ಷ್ಯದ ಪ್ರತಿಬಿಂಬವೋ? ಸಾರ್ವಜನಿಕ ಶೌಚಾಲಯವೇ ಇಲ್ಲ AC ಕೋರ್ಟ್ ಕಚೇರಿಯಲ್ಲಿ * ಸಾರ್ವಜನಿಕ ಶೌಚಾಲಯ ಇಲ್ಲ * ಮಹಿಳೆಯರಿಗೆ ಸೂಕ್ತ ವ್ಯವಸ್ಥೆ ಇಲ್ಲ * ಮಕ್ಕಳೊಂದಿಗೆ ಬರುವ ತಾಯಂದಿರಿಗೆ feeding room ಇಲ್ಲ ನ್ಯಾಯಕ್ಕಾಗಿ ಬಂದ ನಾಗರಿಕರು, ಮೂಲಭೂತ ಮಾನವೀಯ ಸೌಲಭ್ಯಗಳಿಗಾಗಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಯಾವ ಅಭಿವೃದ್ಧಿ? ವಿಮಾನ ಹಾರುವ ಜಿಲ್ಲೆಯಲ್ಲಿ, ಕಾನೂನು ದೇವಾಲಯವೆನ್ನಲಾದ ನ್ಯಾಯಾಲಯದ ಆವರಣದಲ್ಲಿ, ಸಾರ್ವಜ...

ಕಾಶಿ ವಿಶ್ವನಾಥ ದರ್ಶನ ಕಾರ್ಯಕ್ರಮ ಫೆಬ್ರವರಿ 15ಕ್ಕೆ

ಇಮೇಜ್
ಶಿವಮೊಗ್ಗ: ಮಹಾಶಿವರಾತ್ರಿ ಪ್ರಯುಕ್ತ ನಗರದ ಸವಳಂಗ ರಸ್ತೆಯಲ್ಲಿರುವ ನೇಮೋಜಿರಾವ್ ಬಡಾವಣೆಯ ಶಿವಾಲಯದಲ್ಲಿ ಫೆಬ್ರವರಿ 15ರಂದು ಸಂಜೆ 5ರಿಂದ ರಾತ್ರಿ 10ರವರೆಗೆ ಕಾಶಿ ವಿಶ್ವನಾಥ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಕಾರ್ಯಕ್ರಮ ಆಯೋಜಿಸಿದ್ದು, ಪ್ರದಕ್ಷಿಣೆ ಲಿಂಗು ದರ್ಶನ, ಸಹಸ್ರಲಿಂಗ ದರ್ಶನ, ಸ್ವಪರಿವರ್ತನೆ ಮಂಟಪ, ಆಧ್ಯಾತ್ಮ ಚಿತ್ರ ಪ್ರದರ್ಶನದಿಂದ ಮೌಲ್ಯ ಜಾಗೃತಿ, ಕಮಲೋದ್ಭವ ಲಿಂಗು ದರ್ಶನವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ. ಸಂಜೆ 6ರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸುವರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾಜಯೋಗ ಶಿಕ್ಷಕಿ ಬ್ರಹ್ಮಕುಮಾರಿ ಸ್ವಾತಿ ಮಹಾಶಿವರಾತ್ರಿ ಸಂದೇಶ ನೀಡುವರು. ಸಂಜೆ 7ರಿಂದ ಗೌರವಾರ್ಪಣಾ ಮಹೋತ್ಸವ ನಡೆಯಲಿದ್ದು, ರಾತ್ರಿ 8ರಿಂದ ಸಾಂಸ್ಕೃತಿಕ ಮಹೋತ್ಸವ ನಡೆಯಲಿದೆ. ಶ್ರೀ ಗೌರಿ ಕಲಾಕೇಂದ್ರದ ತಂಡದಿAದ ಶಿವನ ನೃತ್ಯ ಕಾರ್ಯಕ್ರಮ ಇರಲಿದೆ. ಅಂಚೆ ಇಲಾಖೆಯ ಪೋಸ್ಟ್ ಮ್ಯಾನ್ ಮತ್ತು ಎಂಟಿಎಸ್ ವರ್ಗದವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಭೂಪಾಳಮ್ ಕುಟುಂಬದ ಅನರ್ಘ್ಯ ರತ್ನ ವಿಜಯ್ ಕುಮಾರ್ - ಎಂ ಎನ್ ಸುಂದರ್ ರಾಜ್

ಇಮೇಜ್
  ಭೂಪಾಳ ಂ ವಿಜಯಕುಮಾರ್ ಒಬ್ಬ ಸಾತ್ವಿಕ ಭಾವಜೀವಿ ಆಗಿದ್ದರು ಸದಾ ಹಸನ್ಮುಖಿಯಾಗಿ ಎಲ್ಲರೊಡನೆ ಸ್ನೇಹದಿಂದ ಇದ್ದ ಒಬ್ಬ ಸಜ್ಜನ. ಒಳ್ಳೆಯ ಕವಿಯಾಗಿ ಉತ್ತಮ ವೀಣಾ ವಾದಕರಾಗಿ ಮತ್ತು ಪ್ರಗತಿಪರ ರೈತರಾಗಿ ಎಲ್ಲಕ್ಕಿಂತ ಹೆಚ್ಚಾಗಿ ಆತ್ಮೀಯರಾಗಿ ಬಾಳಿದವರು. ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಕವನವಾಚನ ಮಾಡುವಾಗ ಸಹವೇ ಆ ಕವನಗಳಿಗೆ ರಾಗ ಸಂಯೋಜಿಸಿ ಹಾಡುತ್ತಿದ್ದರು. ತಮ್ಮ ಭೂಪಾಳ0 ವಂಶದ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದವರು. ತಮ್ಮ ಮನೆಯಲ್ಲಿ ಆಗಾಗ ಸಾಹಿತ್ಯ ಮತ್ತು ಸಂಗೀತದ ಕಾರ್ಯಕ್ರಮಗಳನ್ನು ಆಯೋಜಿಸಿ ತಮ್ಮ ಗೆಳೆಯರನ್ನು ಆಹ್ವಾನಿಸಿ ರಂಜಿಸುತ್ತಿದ್ದರು ಎಂದು ಸಾಹಿತಿ ಎಂ ಎನ್ ಸುಂದರರಾಜ್ ತಿಳಿಸಿದ್ದಾರೆ. ಅವರು ವಿಜಯಪಥ ಅಡಿಯಲ್ಲಿ ನಡೆದ ವಿಜಯ್ ಕುಮಾರ್ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವದಿಂದ ದೊಡ್ಡವನಾಗುತ್ತಾನೆ ಹೊರತಾಗಿ ಆತನ ಆಸ್ತಿ ಅಂತಸ್ತಿ ನಂದಲ್ಲ ಎಂದು ಈ ಸಂದರ್ಭದಲ್ಲಿ ಹೇಳಿ ವಿಜಯ್ ಕುಮಾರ್ ಅವರ ಜೀವನದ ಕೆಲವು ಘಟನೆಗಳನ್ನು ತಿಳಿಸಿಕೊಟ್ಟರು. ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಟಿಆರ್ ಅಶ್ವತ ನಾರಾಯಣ ಶೆಟ್ಟಿ ಅವರು ನಡೆಸಿಕೊಟ್ಟರು. ಅವರು ಮಾತನಾಡುತ್ತಾ ವಿಜುಕುಮಾರ್ ತಮ್ಮ ಅಪೂರ್ವ ವ್ಯಕ್ತಿತ್ವ ಮತ್ತು ಕವಿ ಮನಸ್ಸಿನಿಂದ ಹೆಚ್ಚು ಪ್ರಸಿದ್ಧರಾಗಿದ್ದರು ಎಂದು ತಿಳಿಸಿದರು.  ...

ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಹೊರ ತರಲು ಶಿಬಿರಗಳು ಸಹಾಯಕ - ಶ್ರೀಮತಿ ಶಕುಂತಲಾ ಚಂದ್ರಶೇಖರ್ ಜಿಲ್ಲಾ ಮುಖ್ಯ ಆಯುಕ್ತರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಶಿವಮೊಗ್ಗ

ಇಮೇಜ್
 ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆ ಜಾವಳ್ಳಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ವತಿಯಿಂದ ದಿ: 07-02-2026 ರಂದು ಒಂದು ದಿನದ ರಾತ್ರಿ ಶಿಬಿರವನ್ನು  ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗಣ್ಯರು ಬೇಡನ್ ಪೌಲ್ ರವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಗೌರವವನ್ನು ಸೂಚಿಸಿದರು.   ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ  ಶ್ರೀಮತಿ ಶಕುಂತಲಾ ಚಂದ್ರಶೇಖರ್ ಜಿಲ್ಲಾ ಮುಖ್ಯ ಆಯುಕ್ತರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಶಿವಮೊಗ್ಗ ಇವರು ಮಾತನಾಡುತ್ತಾ ಶಿಬಿರವೆಂದರೆ ಎಲ್ಲರೂ ಒಟ್ಟಾಗಿ ಸೇರಿ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ತಮ್ಮ ಅವಶ್ಯಕತೆಗಳನ್ನು ಪೂರೈಸುವ ಒಂದು ಅವಕಾಶವಾಗಿದೆ.  ಇಂತಹ ಶಿಬಿರಗಳು ಮಕ್ಕಳ ನಡುವೆ ಉತ್ತಮ ಬಾಂಧವ್ಯಗಳನ್ನು ಬೆಳೆಸುತ್ತವೆ. ಜೀವನ ಕಲೆ ಹಾಗೂ ಅನುಭವದ ಕಲಿಕೆಯನ್ನು ಉಂಟುಮಾಡುತ್ತವೆ. ಎಲ್ಲಾ ಮಕ್ಕಳು ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಬೆಳೆಸುತ್ತವೆ.  ಮಕ್ಕಳಿಗೆ ಪಠ್ಯಕ್ರಮದಷ್ಟೇ ಪಠ್ಯೇತರ ಚಟುವಟಿಕೆಗಳು ಸಹ ಮುಖ್ಯವಾಗುತ್ತವೆ.  ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಹೊರ ತರಲು ಶಿಬಿರಗಳು ಸಹಾಯಕವಾಗಿವೆ. ಶಾಂತಿ ಮತ್ತು ಶಿಸ್ತನ್ನು ಮೂಡಿಸುವುದೇ ಈ ಸ್ಕೌಟ್ಸ್ ಅಂಡ್ ಗೈಡ್ಸ್ ನ ಉದ್ದೇಶವಾಗಿದೆ ಎಂದು ತಿಳಿಸಿದರು.   ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದ ಶ್ರೀಯುತ ವೆಂಕಟಾಚಲ...