ಗುಡ್ ಲಕ್ ಆರೈಕೆ ಕೇಂದ್ರ ಕ್ಕೆ ಒಂದು ಲಕ್ಷ ರೂ ದೇಣಿಗೆ : ಹೇಮಾ ಬಿಜಿ ಗೋಣೂರು
ದಾನ ನಮ್ಮನ್ನು ಸದಾ ಕಾಪಾಡುತ್ತದೆ. ದಾನದಿಂದ ಮನಸ್ಸಿಗೆ ತೃಪ್ತಿ : ಹೇಮಾ ಬಿಜಿ ಗೋಣೂರು
ನಾವು ಮಾಡಿದ ಸೇವೆ ದಾನ ಧರ್ಮ ನಮಗೆ ಒಂದಲ್ಲ ಒಂದು ರೀತಿಯಿಂದ ನಮ್ಮ ಕುಟುಂಬವನ್ನು ಕಾಪಾಡುತ್ತದೆ ದಾನದಿಂದ ತೃಪ್ತಿ ಸಿಗುತ್ತದೆ ಎಂದು. ಸಾಗರದ ಹೇಮಾ ಬಿಜಿ ಗೋಣೂರು ಅಭಿಮತ ವ್ಯಕ್ತ ಪಡಿಸಿದರು. ಅವರು ಈ ದಿನ ನಗರದ ಗುಡ್ ಲಕ್ ಆರೈಕೆ ಕೇಂದ್ರ ಅನಾಥಾಶ್ರಮ ದಲ್ಲಿ ಆಶ್ರಮದ ಕಟ್ಟಡ ಕಾಮಗಾರಿಗೆ 1 ಲಕ್ಷ ರೂ ದೇಣಿಗೆ ನೀಡಿ ಮಾತನಾಡಿದರು ದಾನಿಗಳ ಕೈ ಯಾವತ್ತು ಸೋಲುವುದಿಲ್ಲ ನಾವು ಮಾಡಿದ ದಾನದಿಂದ ಅದರ ನಾಲ್ಕು ಪಟ್ಟು ಫಲ ನಮಗೆ ಲಭಿಸಿದೆ ಮನುಕುಲದ ಸೇವೆಗಳನ್ನು ಮಾಡುತ್ತಿರುವ ಸಂಸ್ಥೆಗಳಿಗೆ ಮಾತ್ರ ನಮ್ಮ ಕುಟುಂಬದವರು ದಾನವನ್ನು ಮಾಡುತ್ತಾ ಬಂದಿದ್ದೇವೆ ಈಗಾಗಲೇ ಅಂದರ ವಿಕಾಸ ಕೇಂದ್ರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅನಾಥಾಶ್ರಮಗಳಿಗೆ ಈಗ ಈ ಗುಡ್ ಲಕ್ ಆರೈಕೆ ಕೇಂದ್ರಕ್ಕೆ ದೇಣಿಗೆ ನೀಡಿದ್ದೇವೆ ಆರೈಕೆ ಕೇಂದ್ರದ ಚಟುವಟಿಕೆಗಳನ್ನ ಗಮನಿಸಿ ಅವರು ಮಾಡುತ್ತಿರುವ ಗುಡ್ ಲಕ್ ಆರೈಕೆ ಕೇಂದ್ರದ ನಿಸ್ವಾರ್ಥ ಮಾನವೀಯ ಸೇವೆಗಳು ಸಮಾಜಕ್ಕೆ ಮಾದರಿಯಾಗಿದೆ ಅನಾಥರ ಬುದ್ಧಿಮಾಂದ್ಯ ರ ಹಾಗೂ ಅಶಕ್ತರ ಆರೈಕೆ ಮಾಡುವ ಕೆಲಸ ಸಾಮಾನ್ಯ ವಾದುದಲ್ಲ. ನಾವು ವಿದೇಶದಲ್ಲಿ ವಾಸಿಸಿದರು ಸಹ ವರ್ಷಕ್ಕೆ ಒಂದು ಬಾರಿ ಬಂದಾಗ ಈ ರೀತಿಯ ಮಾನವೀಯ ಸೇವೆಗಳಿಗೆ ಕೈಜೋಡಿಸುತ್ತೇವೆ ಹಾಗೆ ಸರಿಯಾದ ಫಲಾನುಭವಿಗಳನ್ನು ಗುರುತಿಸಿ ನೀಡುವಂತಹ ದಾನ ಭಗವಂತನಿಗೆ ಸಲ್ಲುತ್ತದೆ ಎಂದು ನುಡಿದರು. ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷರಾದ ರವೀಂದ್ರನಾಥ್ ಐತಾಳ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಈ ನಮ್ಮ ಆಶ್ರಮ ದಾನಿಗಳ ಸಹಾಯದಿಂದ ನಿರ್ಮಾಣವಾಗುವುದರ ಜೊತೆಗೆ ನಮ್ಮ ಸಂಸ್ಥೆಯ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಕೈಜೋಡಿಸಿ ಸಂಸ್ಥೆ ವ್ಯವಸ್ಥಿತವಾಗಿ ನಡೆಯಲು ಸಹಕಾರ ನೀಡಿದ್ದಾರೆ ಹಾಗೆ ಹಿರಿಯ ನಾಗರೀಕರ ಹಗಲು ಆರೈಕೆ ಕೇಂದ್ರ ಮತ್ತು. ಅನ್ನಪೂರ್ಣ ನಿತ್ಯ ಪ್ರಸಾದ ಯೋಜನೆಗೆ ರೋಟರಿ ,ಫ್ರೆಂಡ್ಸ್ ಸೆಂಟರ್, ಇನ್ನರ್ ವೀಲ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ನೆರವು ಮರೆಯಲು ಸಾಧ್ಯವಿಲ್ಲ ಮತ್ತು ಇಲ್ಲಿ ವಾಸಿಸುವ ನಿವಾಸಿಗಳಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವುದರಿಂದ ಉಚಿತ ಸೇವಾ ಮನೋಭಾವದ ಸ್ವಯಂಸೇವಕ ವೈದ್ಯರ ನೆರವು ಅಗತ್ಯವಿದೆ ಇದನ್ನು ಪರಿಹರಿಸುವ ಪ್ರಯತ್ನ ನಗರದ ಸೇವಾಸಕ್ತ ಸಂಸ್ಥೆಯು ನಡೆಸಿಕೊಡಬೇಕು ಹಾಗೆ ನಗರದಲ್ಲಿರುವ ದಾನಿಗಳು ನಮ್ಮ ಕೇಂದ್ರವನ್ನು ಸಮಯವಿದ್ದಾಗ ಭೇಟಿ ಮಾಡಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿ ವಿನಂತಿಸಿಕೊಂಡರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಹಿರೇಮಠ ಉಪಾಧ್ಯಕ್ಷರಾದ ಶಿವಪ್ಪಗೌಡ. ನಿರ್ದೇಶಕರಾದ ಜಿ. ವಿಜಯಕುಮಾರ್. ಅನುಪಮಾ ಹೆಗಡೆ. ಶ್ರೀನಿವಾಸ್. ಬಿಂದು ವಿಜಯ ಕುಮಾರ್. ಹಾಗೂ ಆಶ್ರಮವಾಸಿಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ