ಪ್ರಪಂಚಾದ್ಯಂತ ರೋಟರಿ ಸೇವೆ ಜನಮನ ತಲುಪುತ್ತಿದೆ : ಪಾಲಾಕ್ಷ ಕೆ. ರೋಟರಿ ಜಿಲ್ಲಾ ಗವರ್ನರ್


ಮನುಕುಲದ ಮಾನವೀಯ ಸೇವೆಯಲ್ಲಿ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ ಪ್ರಪಂಚಾದ್ಯಂತ ವಿಶೇಷವಾದ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುತ್ತಾ ಎಲ್ಲಾ ಜನಮಾನಸವನ್ನು ತಲುಪುತ್ತಿರುವ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ. ಎಂದು ರೋಟರಿ ಜಿಲ್ಲೆ 31 82ರ ಎಲ್ಲಾ ಗವರ್ನರ್ ಪಾಲಾಕ್ಷ ಕೆ ಅಭಿಮತ ವ್ಯಕ್ತಪಡಿಸಿದರು. ಅವರು ಇಂದು ನಗರದ ವಿಶಾಲ್ ಮಾರ್ಟ್ ಎದುರುಗಡೆ ಇರುವ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ಲಿನ  ನವೀಕೃತ ಕಟ್ಟಡಕ್ಕೆ ಚಾಲನೆ ನೀಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ. 2026 27ನೇ ಸಾಲಿನ ಜಿಲ್ಲಾ ಗೌರ್ನರ್ ಬಿ ಎಂ ಬಟ್ ಮಾತನಾಡುತ್ತಾ ಇಂದು ರೋಟರಿ ಸಂಸ್ಥೆಗಳ ಮುಖಾಂತರ ಹಲವಾರು ಯೋಜನೆಗಳನ್ನ ಹಮ್ಮಿಕೊಳ್ಳುವುದರ ಜೊತೆಗೆ ಪ್ರೀತಿ ಸ್ನೇಹ ಒಡನಾಟ ಹಾಗೂ ಉತ್ತಮ ಬಾಂಧವ್ಯ ವೃದ್ಧಿ ಮಾಡಲು ಸಹಕಾರಿಯಾಗಿದೆ ಇಂತಹ ಸುಸಜ್ಜಿತವಾದ ಕಟ್ಟಡದಲ್ಲಿ ಬುದ್ಧಿ ಮಂದಿರ ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು ಮತ್ತೋರ್ವ ಚುನಾಯಿತ ಜಿಲ್ಲಾ ಗವರ್ನರ್ ವಸಂತ ಹೋಬಳಿದಾರವರು ಮಾತನಾಡುತ್ತಾ ರೋಟೋರಿಯ ಸೇವಾ ಕಾರ್ಯಗಳನ್ನು ಕಾರ್ಯಗಳನ್ನು ಅಂತರಾಷ್ಟ್ರೀಯ ರೋಟರಿ ಅಧ್ಯಕ್ಷರ ಆಶಯದಂತೆ ಸತ್ಕಾರ್ಯಗಳನ್ನು  ಮಾಡಲು  ಎಲ್ಲಾ ಸದಸ್ಯರು ಒಟ್ಟುಗೂಡಿ ಸಮಾಜದ ಅಭಿವೃದ್ಧಿಗೆ ಪೂರಕವಾದಂತ ಯೋಜನೆಗಳನ್ನು ಹಮ್ಮಿ ಹಮ್ಮಿಕೊಂಡು ಈ ಸ್ಥಳವನ್ನು ಮುಂದಿನ ದಿನಗಳಲ್ಲಿ ಅಭಿವೃದ್ದಿ ಪಡಿಸುವಂತೆ ಕರೆ ನೀಡಿದರು. ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ಲಿನ ಅಧ್ಯಕ್ಷರಾದ ಬಿ ಬಸವರಾಜ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಎಲ್ಲಾ ರೋಟರಿ ಬಂಧುಗಳ ಸಹಕಾರದಿಂದ ಈ ಕಟ್ಟಡ ನವೀಕೃತಗೊಂಡಿದೆ  ಎಲ್ಲಾ ದಾನಿಗಳಿಗೂ ಅಭಿನಂದನೆಯನ್ನು ತಿಳಿಸಿದರು ಕಾರ್ಯಕ್ರಮದಲ್ಲಿ ಸಹಾಯಕ ಗವರ್ನರ್ ಲಕ್ಷ್ಮಣ್ ಎಂಬಿ. ಕೆಪಿ ಶೆಟ್ಟಿ. ಮಾಜಿ ಸಹಾಯಕ ಗೌರ್ನರ್ ಜಿ ವಿಜಯಕುಮಾರ್.. ವಲಯ ಸೇನಾನಿ ಕಿರಣ್.  ಎಚ್ ಎಮ್ ಸುರೇಶ್   ಟ್ರಸ್ಟಿನ ಅಧ್ಯಕ್ಷರಾದ ಚೂಡಾಮಣಿ ಈ ಪವಾರ್. ಕೊಟೊಜಿ ರವಿ. ಕಾರ್ಯದರ್ಶಿ ಜಯಶೀಲ್ ಶೆಟ್ಟಿ. ಮಾಜಿ ಜಿಲ್ಲಾ ಗವರ್ನರ್ ಗಳಾದ ಪ್ರೊಫೆಸರ್ ಎ ಎಸ್ ಚಂದ್ರಶೇಖರ್. ಎಚ್ ಎಲ್ ರವಿ.. ನಿಯೋಜಿತ ಸಹಾಯಕ ಗವರ್ನರ್ ನಾಗರಾಜ್ ಹಾಗೂ ಶಿವಮೊಗ್ಗ ಸೆಂಟ್ರಲ್ ಕ್ಲಬ್ಬಿನ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ