ಸ್ವಯಂಚಾಲಿತ ರಕ್ತಸಂಗ್ರಹ ಯಂತ್ರದ ಉದ್ಘಾಟನೆ
ಶಿವಮೊಗ್ಗ : ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ವತಿಯಿಂದ ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರಕ್ಕೆ ರೋಟರಿ ಗ್ಲೋಬಲ್ ಗ್ರಾಂಟ್ ಮೂಲಕ ಸ್ವಯಂಚಾಲಿತ ರಕ್ತ ಸಂಗ್ರಹ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದು, ಇದರ ಉದ್ಘಾಟನಾ ಸಮಾರಂಭ ಮಾ.1ರಂದು ಬೆಳಗ್ಗೆ 11 ಗಂಟೆಗೆ ಶಿವಮೊಗ್ಗದ ಜೆಎನ್ಎನ್ಸಿಇ ಎಂಬಿಎ ಸಭಾಂಗಣದಲ್ಲಿ ನಡೆಯಲಿದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಪ್ರೊ.ಎ.ಎಸ್. ಚಂದ್ರಶೇಖರ್ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಯಂತ್ರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ರೋಟರಿ ನಿರ್ದೇಶಕ ಕೆ.ಪಿ. ನಾಗೇಶ್, ಜಿಲ್ಲಾ ಗವರ್ನರ್ ಪಾಲಾಕ್ಷ, ಜಿಲ್ಲಾ ಚೇರ್ಮನ್ ಡಿ.ಎಸ್. ರವಿ, ಪ್ರೊ. ಎ.ಎಸ್. ಚಂದ್ರಶೇಖರ್, ಕೆ.ಪಿ. ಶೆಟ್ಟಿ, ಎಸ್.ಪಿ. ದಿನೇಶ್, ಎ.ಎನ್. ಶಾಂತರಾಜಪ್ಪ, ಆರ್. ಬಸವರಾಜಪ್ಪ ಭಾಗವಹಿಸಲಿದ್ದಾರೆ ಎಂದರು.
ಕೊಡುಗೆಯಾಗಿ ನೀಡಿದ ರಕ್ತ ಸಂಗ್ರಹಣಾ ಹಾಗೂ ವಿಂಗಡಣಾ ಯಂತ್ರ ಮತ್ತು ದಾನಿಗಳ ಮಂಚದ ಬೆಲೆ 42.90 ಲಕ್ಷ ರೂ. ಆಗಿದ್ದು, ಈ ಹಣವನ್ನು ಸಂಪೂರ್ಣವಾಗಿ ಅಮೆರಿಕದ ಮೋಡೆಸ್ಟ್ ರೋಟರಿ ಕ್ಲಬ್ ಅಮೆರಿಕದ ರೋಟರಿ ಜಿಲ್ಲೆ 5220 ಹಾಗೂ ರೋಟರಿ ಪ್ರತಿಷ್ಠಾನ ನೀಡಿದೆ ಎಂದರು.
ಈ ಯಂತ್ರದಿಂದ ಹಲವು ಪ್ರಯೋಜನಗಳಿದ್ದು, ಒಂದು ರಕ್ತ ಸಂಗ್ರಹಣವನ್ನು ವಿವಿಧ ಬಗೆಯಲ್ಲಿ ಸಂಗ್ರಹಿಸಬಹುದಾಗಿದೆ. ಪ್ಲೇಟೆಟ್ ಮತ್ತು ಪ್ಲಾಸ್ಮಾ ಲಭ್ಯತೆಯಲ್ಲಿ ಹೆಚ್ಚಳವಾಗಲಿದೆ. ಕ್ಯಾನ್ಸರ್, ಅಪಘಾತ ಗಳು ಹಾಗೂ ಡೆಂಗ್ಯೂ ಚಿಕಿತ್ಸೆಗಳಲ್ಲಿ ಅಗತ್ಯವಿರುವ ಪ್ಲೇಟೆಟ್ ಹಾಗೂ ಪ್ಲಾಸ್ಮಾಗಳನ್ನು ನಿರಂತರವಾಗಿ ಇದು ಒದಗಿಸುತ್ತದೆ. ಸೋಂಕು ಗಳು ಹಾಗೂ ಪ್ರತಿರೋಧಕ ಪ್ರತಿಕ್ರಿಯೆಗಳ ಅಪಾಯ ಕಡಿಮೆ ಇರುತ್ತದೆ. ಅಗತ್ಯ ಇರುವ ರಕ್ತ ಘಟಕಗಳನ್ನು ಮಾತ್ರ ಸಂಗ್ರಹಿಸಲಾಗು ತದೆ. ಸಮಯ ಹಾಗೂ ಸಂಪನ್ಮೂಲ ಉಳಿತಾಯವಾಗುತ್ತದೆ. ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆಗೆ ಬೆಂಬಲವಾಗುತ್ತದೆ. ಹೆಚ್ಚು ಶುದ್ಧ ಹಾಗೂ ಪರಿಣಾಮಕಾರಿ ಪ್ಲಾಸ್ಮಾ ಲಭಿಸುತ್ತದೆ. ಹಾಗಾಗಿ ಈ ಯಂತ್ರವು ಬಹು ಉಪಯೋಗಿ ಯಂತ್ರವಾಗಿದೆ ಎಂದರು.
ಇದಲ್ಲದೇ ರೋಟರಿ ಉತ್ತರ ಕ್ಲಬ್ ಹಲವು ಸಾಮಾಜಿಕ ಕಾರ್ಯ ಕ್ರಮಗಳನ್ನು ನಡೆಸುತ್ತಾ ಬಂದಿದೆ. ಶಾಲೆಗಳಲ್ಲಿ ಪೀಠೋಪಕರಣಗಳು, ಶುದ್ಧ ಕುಡಿಯುವ ನೀರಿನ ಘಟಕ, ಕಂಪ್ಯೂಟರ್, ಪ್ರಾಜೆಕ್ಟ್ ಮುಂತಾದವುಗಳನ್ನು ನೀಡಲು ಸುಮಾರು 25 ಶಾಲೆಗಳಿಗೆ 26.50 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಸುಮಾರು 5 ಸಾವಿರ ಮಕ್ಕಳು ಇದರಿಂದ ಪ್ರಯೋಜನ ಪಡೆಯಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಭಾರತಿ ಚಂದ್ರಶೇಖರ್, ಶ್ರೀನಾಥ್ ಗಿರಿಮಾಜಿ, ಕೆ.ಪಿ. ಶೆಟ್ಟಿ, ಶಿವಕುಮಾರ್, ಜಿ. ವಿಜಯ ಕುಮಾರ್, ಜೆ.ಕೆ. ಶ್ರವಣ್, ಶ್ರೀಧರ್, ಎಸ್.ಜಿ. ರಮೇಶ್, ಬಸವರಾಜಪ್ಪ, ಮೈತ್ರಿ ಇದ್ದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ