ಜೆಸಿಐ ಸದಸ್ಯರಿಂದ ರಮೇಶ್ ಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಬೇಟಿ !! ಕಾರಣವೇನು !?

ಹೆಚ್ಚುವರಿ ಪೊಲೀಸ್ ಅಧೀಕ್ಷಕರ ದ ಸುರೇಶ್ ಕುಮಾರ್ ಅವರನ್ನು ಜೆಸಿಐ ಸದಸ್ಯರು ಬೇಟಿಯಾಗಿ ಶುಭ ಕೋರಲಾಯಿತು. ಸಂಘ ಸಂಸ್ಥೆಗಳ ಕಾರ್ಯ ಚಟುವಟಿಕೆ ಬಗ್ಗೆ ಚರ್ಚಿಸಲಾಯಿತು.
ಜೆಸಿಐ ಸಂಸ್ಥೆಯ ಬಗ್ಗೆ ಸದಸ್ಯರ ಬಗ್ಗೆ ರೋಟರಿ ವಿಜಯ್ ಕುಮಾರ್ ಅವರು ಪರಿಚಯಿಸಿದರು. ನಗರದಲ್ಲಿರುವ ಜೆಸಿಐ ಘಟಕಗಳ ಬಗ್ಗೆ, ಜೆಸಿಐ ನ ಸಮಾಜಮುಖಿ ಕಾರ್ಯಗಳ ಬಗ್ಗೆ , ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಜೆಸಿಐ, ಪೊಲೀಸ್ ಜಿಲ್ಲಾಡಳಿತ ಮತ್ತು ವಿವಿಧ ಸಂಸ್ಥೆಗಳ ಜೊತೆ ಸೇರಿ , ಶಾಶ್ವತ ಕಾರ್ಯಕ್ರಮಗಳಾದ, ಮಕ್ಕಳಿಗೆ ತರಬೇತಿ, ಪಠ್ಯಪುಸ್ತಕ ಸಂಬಂಧಿಸಿದಂತೆ ಪ್ರತಿದಿನ ಪಾಠ ಮಾಡುವುದು. ಹೀಗೆ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಗಳ ಬಗ್ಗೆ ಹೆಚ್ಚು ಒತ್ತು ಕೊಡುವಂತಹ ಕಾರ್ಯಕ್ರಮ ಮಾಡುವುದರ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ವಿಜಯಕುಮಾರ್, ಜೆಸಿ ಮಲ್ಲೇಶ್, ಜೆಸಿ ಶೇಷಗಿರಿ, ಜೆಸಿ ಗಾರಾ ಶ್ರೀನಿವಾಸ್ , ಜೆಸಿ ದೀಪಕ್, ಜೆಸಿ ಗಣೇಶ್ ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ