ವಿಪತ್ತು ನಿರ್ವಹಣೆ ಮತ್ತು ಪ್ರಾಥಮಿಕ ಚಿಕಿತ್ಸೆ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಯಗಾರ
ದಿನಾಂಕ 10 ಸೆಪ್ಟೆಂಬರ್ 2025 ರಂದು ಜೆಸಿಐ ಶಿವಮೊಗ್ಗ ಚಿರಂತನ ವತಿಯಿಂದ ಜೆಸಿಐ ಸಪ್ತಾಹ 2025ರ ತರಬೇತಿ ದಿನದ ಪ್ರಯುಕ್ತ ಶ್ರೀ ಜಗದ್ಗುರು ಐಟಿಐ ಕಾಲೇಜ್, ಶಿವಮೊಗ್ಗ ಇಲ್ಲಿ ಡಾ. ವಿ ಎಲ್ ಎಸ್ ಕುಮಾರ್ ರವರಿಂದ ವಿಪತ್ತು ನಿರ್ವಹಣೆ ಮತ್ತು ಪ್ರಾಥಮಿಕ ಚಿಕಿತ್ಸೆ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಯಗಾರ ತರಬೇತಿಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಗಾರದಲ್ಲಿ ಭಾಗವಹಿಸಿದ ಮಕ್ಕಳಿಗೆ ಸಿಪಿಆರ್, ಪ್ರಾಥಮಿಕ ಚಿಕಿತ್ಸೆ ಬಗ್ಗೆ ಹಾಗೂ ವಿಪತ್ತು ನಿರ್ವಹಣೆ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ನಾವುಗಳು ಹೇಗೆ ಕಾರ್ಯ ನಿರ್ವಹಿಸ ಬೇಕೆಂಬುದು ರ ಬಗ್ಗೆ ಕಾರ್ಯಗಾರ ತರಬೇತಿಯನ್ನು ನೀಡಲಾಯಿತು. ಈ ತರಬೇತಿ ಕಾರ್ಯಗಾರದ ಅಧ್ಯಕ್ಷತೆಯನ್ನು ಜೆಸಿಐ ಶಿವಮೊಗ್ಗ ಚಿರಂತನಾದ ಅಧ್ಯಕ್ಷರಾದ ರುದ್ರೇಶ್ ಕೋರಿ ರವರು ವಹಿಸಿದ್ದರು ಕಾರ್ಯದರ್ಶಿಯಾದ ವೈಷ್ಣವಿ ಚಂದನ್ ರವರು, ಕಾರ್ಯಕ್ರಮ ನಿರ್ದೇಶಕರಾದ ಮಮತಾ ರವರು ಜಗದ್ಗುರು ಐಟಿಐ ಕಾಲೇಜಿನ ಅಧ್ಯಕ್ಷರಾದ ವಿಜ್ಞೇಶ್ವರ ಸೊಲ್ಲಾಪುರವರು ಹಾಗೂ ಪ್ರಭಾರ ಪ್ರಾಂಶುಪಾಲರಾದ ಪರಮೇಶ್ವರ್ ಸರ್ ರವರು ಉಪಸ್ಥಿತರಿದ್ದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ